<p><strong>ಸಕಲೇಶಪುರ (ಹಾಸನ):</strong> ಸಮೀಪದ ಹೆನ್ನಲಿ ಗ್ರಾಮದ ಬಳಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ನವದಂಪತಿ, ಕಾಲುಜಾರಿ ಹೇಮಾವತಿ ನದಿಗೆ ಬಿದ್ದು ಗುರುವಾರ ಸಂಜೆ ಮೃತಪಟ್ಟಿದ್ದಾರೆ.</p>.<p>ಹೆನ್ನಲಿಯ ರೈತ ಕೃಷ್ಣಮೂರ್ತಿ ಅವರ ಪುತ್ರಿ ಕೃತಿಕಾ (23), ಬೇಲೂರು ತಾಲ್ಲೂಕು ಮುರೇಹಳ್ಳಿ ಗ್ರಾಮದ ರೈತ ಎಂ.ಆರ್. ರುದ್ರಪ್ಪಗೌಡ ಅವರ ಪುತ್ರ ಆರ್ಥೀಶ್ (27) ಮೃತಪಟ್ಟವರು.</p>.<p>ರಾತ್ರಿ ಕೃತಿಕಾ ಶವ, ಶುಕ್ರವಾರ ಬೆಳಿಗ್ಗೆ ಆರ್ಥೀಶ್ ಶವ ಪತ್ತೆಯಾಗಿದೆ. ಇವರ ವಿವಾಹ ಮಾರ್ಚ್ 20ರಂದು ನಡೆದಿತ್ತು. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ಲಾಕ್ಡೌನ್ನಿಂದಾಗಿ ಊರಿನಲ್ಲಿಯೇ ಉಳಿದಿದ್ದರು.</p>.<p>ಹೇಮಾವತಿ ನದಿಗೆ ನಿರ್ಮಿಸಿರುವ ಚೆಕ್ಡ್ಯಾಂ ಬಳಿ ಸೆಲ್ಫಿ ತೆಗೆದುಕೊಳ್ಳಲು ಮುಂದಾದಾಗ,ಮಳೆಯಿಂದ ಸಡಿಲವಾಗಿದ್ದ ಮಣ್ಣು ಕುಸಿದು ಅವಘಡ ಸಂಭವಿಸಿದೆ. 20 ಅಡಿ ಆಳವಿದ್ದ ನೀರಿನ ಗುಂಡಿಗೆ ಇಬ್ಬರು ಬಿದ್ದಿದ್ದಾರೆ ಎಂದು ತಿಳಿದುಬಂದಿದೆ.</p>.<p>‘ಮನೆಯವರ ಹೇಳಿಕೆಯಂತೆ ಮದುವೆ ಆದ ದಿನದಿಂದ ಇಬ್ಬರ ನಡುವೆ ಸಣ್ಣ ಪುಟ್ಟ ಜಗಳವೂ ಆಗಿರಲಿಲ್ಲ. ಹಾಗಾಗಿ, ಇದು ಆತ್ಮಹತ್ಯೆ ಪ್ರಕರಣವಲ್ಲ’ ಎಂದು ಡಿವೈಎಸ್ಪಿ ಗೋಪಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಕಲೇಶಪುರ (ಹಾಸನ):</strong> ಸಮೀಪದ ಹೆನ್ನಲಿ ಗ್ರಾಮದ ಬಳಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ನವದಂಪತಿ, ಕಾಲುಜಾರಿ ಹೇಮಾವತಿ ನದಿಗೆ ಬಿದ್ದು ಗುರುವಾರ ಸಂಜೆ ಮೃತಪಟ್ಟಿದ್ದಾರೆ.</p>.<p>ಹೆನ್ನಲಿಯ ರೈತ ಕೃಷ್ಣಮೂರ್ತಿ ಅವರ ಪುತ್ರಿ ಕೃತಿಕಾ (23), ಬೇಲೂರು ತಾಲ್ಲೂಕು ಮುರೇಹಳ್ಳಿ ಗ್ರಾಮದ ರೈತ ಎಂ.ಆರ್. ರುದ್ರಪ್ಪಗೌಡ ಅವರ ಪುತ್ರ ಆರ್ಥೀಶ್ (27) ಮೃತಪಟ್ಟವರು.</p>.<p>ರಾತ್ರಿ ಕೃತಿಕಾ ಶವ, ಶುಕ್ರವಾರ ಬೆಳಿಗ್ಗೆ ಆರ್ಥೀಶ್ ಶವ ಪತ್ತೆಯಾಗಿದೆ. ಇವರ ವಿವಾಹ ಮಾರ್ಚ್ 20ರಂದು ನಡೆದಿತ್ತು. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು, ಲಾಕ್ಡೌನ್ನಿಂದಾಗಿ ಊರಿನಲ್ಲಿಯೇ ಉಳಿದಿದ್ದರು.</p>.<p>ಹೇಮಾವತಿ ನದಿಗೆ ನಿರ್ಮಿಸಿರುವ ಚೆಕ್ಡ್ಯಾಂ ಬಳಿ ಸೆಲ್ಫಿ ತೆಗೆದುಕೊಳ್ಳಲು ಮುಂದಾದಾಗ,ಮಳೆಯಿಂದ ಸಡಿಲವಾಗಿದ್ದ ಮಣ್ಣು ಕುಸಿದು ಅವಘಡ ಸಂಭವಿಸಿದೆ. 20 ಅಡಿ ಆಳವಿದ್ದ ನೀರಿನ ಗುಂಡಿಗೆ ಇಬ್ಬರು ಬಿದ್ದಿದ್ದಾರೆ ಎಂದು ತಿಳಿದುಬಂದಿದೆ.</p>.<p>‘ಮನೆಯವರ ಹೇಳಿಕೆಯಂತೆ ಮದುವೆ ಆದ ದಿನದಿಂದ ಇಬ್ಬರ ನಡುವೆ ಸಣ್ಣ ಪುಟ್ಟ ಜಗಳವೂ ಆಗಿರಲಿಲ್ಲ. ಹಾಗಾಗಿ, ಇದು ಆತ್ಮಹತ್ಯೆ ಪ್ರಕರಣವಲ್ಲ’ ಎಂದು ಡಿವೈಎಸ್ಪಿ ಗೋಪಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>