ಹಾಸನ: ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ ರಸ್ತೆಯಲ್ಲಿ ಹಗಲು ವೇಳೆ ಕಾರು, ಜೀಪು, ಟೆಂಪೋ, ದ್ವಿಚಕ್ರ ವಾಹನ, ಸಾರಿಗೆ ಬಸ್, ಆಂಬುಲೆನ್ಸ್, 20 ಟನ್ಸಾಮರ್ಥ್ಯದಲಾರಿಗಳ ಸಂಚಾರಕ್ಕೆ ಜಿಲ್ಲಾಧಿಕಾರಿ ಆರ್.ಗಿರೀಶ್ ಅನುಮತಿ ನೀಡಿದ್ದಾರೆ. ಟ್ಯಾಂಕರ್, ಕಾರ್ಗೋ ಕಂಟೇನರ್ ಸೇರಿದಂತೆ ಭಾರಿ ಗಾತ್ರದ ವಾಹನಗಳ ಸಂಚಾರನಿಷೇಧಿಸಲಾಗಿದೆ.