ಪ್ರೀತಂ ವಿರುದ್ಧ ನಾಯಕರಿಗೆ ದೂರು
ಬಿಜೆಪಿಯು ಸಜ್ಜನ ಹಾಗೂ ಯೋಗ್ಯ ನಾಯಕರನ್ನು ಒಳಗೊಂಡ ಪಕ್ಷವಾಗಿದೆ. ಸಂಘ ಪರಿವಾರದ ಜೊತೆಗೆ ಬೆಳೆದಿರುವ ಪಕ್ಷದಲ್ಲಿ ಪ್ರೀತಂಗೌಡ ವರ್ತನೆ, ನಡೆ– ನುಡಿ ಕುರಿತು ರಾಷ್ಟ್ರ ಹಾಗೂ ರಾಜ್ಯ ನಾಯಕರಿಗೆ ಪತ್ರ ಬರೆಯುವ ಮೂಲಕ ಗಮನ ಸೆಳೆಯಲಾಗಿದೆ ಎಂದು ದೇವರಾಜೇಗೌಡ ಹೇಳಿದರು.
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಹಾಸನದಿಂದ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಪ್ರೀತಂ ಗೌಡ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಪಕ್ಷದ ತತ್ವ, ಸಿದ್ಧಾಂತದ ವಿರುದ್ಧವಾಗಿ ನಡೆದುಕೊಳ್ಳುವವರಿಗೆ, ಭೂ ಮಾಫಿಯಾ ಮಾಡುತ್ತ ಹಾಸನದಲ್ಲಿ ಲೂಟಿ ಮಾಡುತ್ತಿರುವವರಿಗೆ ಯಾವುದೇ ಹುದ್ದೆ ನೀಡದಂತೆ ಈ ಹಿಂದೆಯೇ ತಿಳಿಸಲಾಗಿತ್ತು ಎಂದರು.