‘ಪ್ರಜಾವಾಣಿ’ ಜೊತೆ ಮಾತನಾಡಿದ ಜ್ಯೋತಿ, ‘ಗ್ರಾಮದಲ್ಲಿ ಹಾಲಿನ ಡೇರಿ ತೆರೆಯಬೇಕೆಂಬ ಉದ್ದೇಶದಿಂದ ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದೆ. ಎರಡನೇ ಪ್ರಯತ್ನದಲ್ಲಿ ತೇರ್ಗಡೆಯಾಗಿದ್ದೇನೆ. ಪಿಯುಸಿ ಪರೀಕ್ಷೆ ಬರೆಯಲು ತಯಾರಿ ಮಾಡಿಕೊಳ್ಳುತ್ತಿದ್ದೇನೆ. ಪತಿ ಭುವನೇಶ್ ಬೇಕರಿ ಇಟ್ಟುಕೊಂಡಿದ್ದಾರೆ. ನಾನು ಉತ್ತೀರ್ಣಳಾಗಿರುವುದು ಜೀವನದ ಸಾಧನೆಗೆ ಮೈಲಿಗಲ್ಲಾಗಿದೆ’ ಎಂದರು.