ಜಿಲ್ಲೆಯಲ್ಲಿ ಹೆಚ್ಚಾಗಿ ರಾಗಿ, ಮೆಕ್ಕೆಜೋಳ, ಹುರುಳಿ ಇತ್ಯಾದಿ ಬೆಳೆಗಳನ್ನು ಹಿಂಗಾರಿನಲ್ಲಿ ಬೆಳೆಯಲಾಗಿದೆ. ಬೆಳೆ ಕಟಾವು ಆಗುವ ಮುನ್ನ ಸರ್ವೆ ಮಾಡಬೇಕಾಗಿರುವುದರಿಂದ ರೈತರು ಸಹ ಆ್ಯಪ್ ಮೂಲಕ ನೇರವಾಗಿ ಸರ್ವೆ ಮಾಡಿ ನಮೂದಿಸಬಹುದಾಗಿದೆ. ರೈತರಿಗೆ ಸರ್ಕಾರದಿಂದ ಬರುವ ಬೆಳೆ ಪರಿಹಾರಕ್ಕೆ ಮೂಲಭೂತ ಮಾಹಿತಿಯನ್ನಾಗಿ ಈ ಸರ್ವೆ ಪರಿಗಣಿಸಲಾಗುವುದು ಎಂದು ವಿವರಿಸಿದರು.