ತಾಲ್ಲೂಕಿನ ಉದ್ದೂರು ಹೊಸಹಳ್ಳಿಯ ರೈತ ರಾಜೇಗೌಡ (65), ತಮ್ಮ ಪತ್ನಿ ಶಾರದಮ್ಮ (55) ಜತೆ ಜೋಳ ಬಿತ್ತಲು ಎತ್ತಿನ ಗಾಡಿಯಲ್ಲಿ ಹೊಲಕ್ಕೆ ಹೊರಟ್ಟಿದ್ದರು. ಇದೇ ಸಂದರ್ಭ ಬೇಸಿಗೆ ರಜೆ ಕಳೆಯಲಿಕ್ಕಾಗಿ ಮೈಸೂರಿನಿಂದ ಊರಿಗೆ ಬಂದಿದ್ದ ರಾಜೇಗೌಡರ ಅಣ್ಣನ ಮೊಮ್ಮಕ್ಕಳಾದ ರುಚಿತಾ (7), ದ್ವಿತಿತಾ (4) ಸಹ ಹಠ ಮಾಡಿ ಎತ್ತಿನ ಗಾಡಿ ಏರಿದ್ದರು.