ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಪಿಎಸ್‌ಸಿ: ಹೆದ್ದುರ್ಗದ ಅಮೃತ್‌ಗೆ 752ನೇ ರ್‍ಯಾಂಕ್

ಯಾವುದೇ ತರಬೇತಿ ಇಲ್ಲ, ಮೂರನೇ ಯತ್ನದಲ್ಲಿ ಯಶಸ್ಸು
Last Updated 25 ಸೆಪ್ಟೆಂಬರ್ 2021, 12:24 IST
ಅಕ್ಷರ ಗಾತ್ರ

ಹಾಸನ: ಆಲೂರು ತಾಲ್ಲೂಕಿನ ಹೆದ್ದುರ್ಗದ ಎಚ್‌.ವಿ.ಅಮೃತ್‌ ಅವರು ಯುಪಿಎಸ್‌ಸಿ ಪರೀಕ್ಷೆಯಲ್ಲಿ 752ನೇ ರ್‍ಯಾಂಕ್‌ ಪಡೆದಿದ್ದಾರೆ.

ಕಾಫಿ ಬೆಳೆಗಾರ ವಿಶ್ವನಾಥ್‌ ಮತ್ತು ಲೇಖಕಿ ನಂದಿನಿ ಹೆದ್ದುರ್ಗ ಅವರ ಪುತ್ರ ಅಮೃತ್‌ ಬಿಇ ಪದವೀಧರ. 2017ರಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಕ್ಕೆ ಸೇರಿದ್ದರು. ಒಂದೂವರೆ ವರ್ಷದನಂತರ ನಾಗರಿಕ ಸೇವಾ ಪರೀಕ್ಷೆ ಬರೆಯಲು ಕೆಲಸಕ್ಕೆ ರಾಜೀನಾಮೆ ನೀಡಿದರು.

‘ಪ್ರಿಲಿಮ್ಸ್‌ಗಾಗಿ ದಿನಕ್ಕೆ ಎಂಟು ತಾಸು ಓದುತ್ತಿದ್ದೆ. ಮುಖ್ಯ ಪರೀಕ್ಷೆಯಲ್ಲಿ 12–14 ತಾಸುಅಧ್ಯಯನ ಮಾಡುತ್ತಿದ್ದೆ. ಸ್ವಲ್ಪ ಅನಾರೋಗ್ಯ ಸಮಸ್ಯೆಯಾಯಿತು. ಅದರ ನಡುವೆಯೇ ಪರೀಕ್ಷೆಬರೆದೆ. 400 ರೊಳಗೆ ರ್‍ಯಾಂಕ್‌ ಬರುವ ನಿರೀಕ್ಷೆಇತ್ತು. ಆದರೆ, ಕೆಲ ತಪ್ಪುಗಳಿಂದ ಅದು ಸಾಧ್ಯವಾಗಿಲ್ಲ’ ಎಂದು ಅಮೃತ್‌ ‘ಪ್ರಜಾವಾಣಿ’ಗೆತಿಳಿಸಿದರು.

‘ಯುಪಿಎಸ್‌ಸಿಗಾಗಿ ಯಾವುದೇ ಕೋಚಿಂಗ್‌ ತೆಗೆದುಕೊಂಡಿಲ್ಲ. ವೆಬ್‌ಸೈಟ್‌, ಪುಸ್ತಕ ಓದಿಯೇ ಪರೀಕ್ಷೆಗೆ
ಸಿದ್ಧತೆ ನಡೆಸಿದ್ದೆ. ಹಳ್ಳಿಯ ಅಜ್ಜಿ ಮನೆಯಲ್ಲಿ ಪರೀಕ್ಷೆಗೆ ಸಿದ್ಧತೆ ನಡೆಸಿ, ಆಂಥ್ರೋಪಾಲಜಿ ವಿಷಯ ಆಯ್ದುಕೊಂಡು ವ್ಯಾಸಂಗ ಆರಂಭಿಸಿದೆ. ಮೊದಲ ಎರಡು ಪ್ರಯತ್ನದಲ್ಲಿ ಫಲ ದೊರೆಯಲಿಲ್ಲ. ಮೂರನೇಯತ್ನದಲ್ಲಿ ಯಶಸ್ಸು ಸಿಕ್ಕಿದೆ. ಐಆರ್‌ಎಸ್‌ ಹುದ್ದೆ ದೊರೆಯುವ ನಿರೀಕ್ಷೆಯಿದೆ’ ಎಂದು ಅಮೃತ್‌ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT