<p><strong>ಹಳೇಬೀಡು</strong>: ಮಳೆ ಹೊಡೆತಕ್ಕೆ ಈ ಭಾಗದ ತರಕಾರಿ ಬೆಳೆಗೆ ಹಾನಿಯಾಗಿದ್ದು, ಟೊಮೆಟೊ ಹಾಗೂ ಎಲೆಕೋಸು ಕೇಳುವವರೇ ಇಲ್ಲದಂತಾಗಿದೆ. ಟೊಮೆಟೊ ಬೆಳೆಯನ್ನು ರೈತರು ರಸ್ತೆಗೆ ಚೆಲ್ಲುತ್ತಿದ್ದಾರೆ.</p>.<p>ಮೋಡ ಕವಿದ ವಾತಾವರಣ, ತುಂತುರು ಮಳೆಯ ಕಾರಣದಿಂದ ಟೊಮೆಟೊ ಗುಣಮಟ್ಟ ಇಲ್ಲದಂತಾಗಿದೆ. ಬೆಲೆ ಇದ್ದರೂ ಖರೀದಿಸಲು ವರ್ತಕರು ಬರುತ್ತಿಲ್ಲ. ಮಾರುಕಟ್ಟೆಗೆ ಟೊಮೆಟೊ ಪೂರೈಸಲೂ ಸಾಧ್ಯವಾಗುತ್ತಿಲ್ಲ.</p>.<p>‘ಹಲವೆಡೆ ಹಣ್ಣಿನ ಮೇಲೆ ಚುಕ್ಕೆ ಮೂಡಿದೆ. ದೂರದ ಮಾರುಕಟ್ಟೆಗೆ ತಲುಪುವ ಹೊತ್ತಿಗೆ ಕೊಳೆತಿರುತ್ತದೆ. ಇಳುವರಿ ಹೆಚ್ಚಿದ್ದರೂ ಆದಾಯ ಸಿಗುತ್ತಿಲ್ಲ’ ಎಂದು ರೈತ ಉಮೇಶ್ ಬೇಸರ ವ್ಯಕ್ತಪಡಿಸಿದರು.</p>.<p>‘ತಾಲ್ಲೂಕಿನಲ್ಲಿ 400 ಹೆಕ್ಟೇರ್ ಪ್ರದೇಶದಲ್ಲಿ ಟೊಮೆಟೊ ಬೆಳೆಯಲಾಗುತ್ತಿದೆ. 25 ಕೆ.ಜಿ. ಟೊಮೆಟೊಗೆ ಮಾರುಕಟ್ಟೆಯಲ್ಲಿ ₹600ರಿಂದ ₹700 ದರವಿದೆ. ಆದರೆ ತಾಲ್ಲೂಕಿನ ಟೊಮೆಟೊ ₹200 ರಂತೆ ಮಾರಾಟವಾಗುತ್ತಿದೆ. ಈ ದರದಿಂದ ಖರ್ಚು –ವೆಚ್ಚ ನಿಭಾಯಿಸುವುದು ಅಸಾಧ್ಯ. ಮಾರಾಟವಾಗದೆ ಉಳಿದ ಬೆಳೆಯನ್ನು ವಾಪಸು ತರುವುದೂ ಕಷ್ಟ. ಎಲ್ಲಾದರೂ ಸುರಿಯಬೇಕಷ್ಟೆ’ ಎಂಬುದು ಬೆಳೆಗಾರ ಮಾಯಗೊಂಡನಹಳ್ಳಿ ಸತೀಶ್ ಅವರ ಅಸಹಾಯಕತೆ.</p>.<p>‘ಮಳೆಯಿಂದ ಎಲೆಕೋಸಿನ ಗುಣಮಟ್ಟವೂ ಕುಸಿದಿದೆ. ನಗರದ ಮಾರುಕಟ್ಟೆಯಲ್ಲಿ ಎಲೆಕೋಸು ಕೆ.ಜಿಗೆ ₹ 8ರಂತೆ ಮಾರಾಟವಾಗುತ್ತಿದೆ. ಮಾರುಕಟ್ಟೆಗೆ ಸಾಗಿಸಲು ₹4 ಖರ್ಚಾಗುತ್ತದೆ. ಸಾಗಣೆ ವೆಚ್ಚವೂ ದಕ್ಕದ ಪರಿಸ್ಥಿತಿ. ಹೊಲದಲ್ಲಿಯೇ ಖರೀದಿಸಲು ವರ್ತಕರು ಬರುತ್ತಿಲ್ಲ’ ಎಂದು ರೈತ ರವಿಶಂಕರ್ ಅಸಹಾಯಕತೆ ವ್ಯಕ್ತಪಡಿಸಿದರು.</p>.<p>‘ಹೊಲದಲ್ಲಿ ಎಲೆಕೋಸಿನ ಜೊತೆ ಗಿಡ, ಕಂಟಿ ಬೆಳೆಯುತ್ತಿವೆ. ಸಾಕಷ್ಟು ಜಮೀನುಗಳಲ್ಲಿ ಜಾನುವಾರು ಮೇಯಲು ಬಿಡಲಾಗಿದೆ’ ಎಂದರು.</p>.<p>ಬೆಳೆಗೆ ಹಾಕಿದ ಬಂಡವಾಳವೂ ಸಿಗದಂತಾದ ರೈತರು ಮಳೆಯಿಂದ ಎಲೆಕೋಸಿನ ಪದರಗಳ ಮೇಲೆ ರಂಧ್ರ ಉತ್ತಮ ಫಸಲಿದ್ದರೂ ಮಾರುಕಟ್ಟೆಯಲ್ಲಿ ಸಿಗದ ಬೆಲೆ</p>.<div><blockquote>ಎಲೆಕೋಸು ಕಟಾವು ಆಗದೇ ಉಳಿದರೆ ಅದನ್ನು ತೆಗೆದು ಮುಂದಿನ ಬೆಳೆಗೆ ಸಿದ್ದ ಮಾಡುವುದಕ್ಕೂ ಖರ್ಚು ಬರುತ್ತದೆ. ಆದಾಯಕ್ಕಿಂತ ರೈತರಿಗೆ ನಷ್ಟ ಹೆಚ್ಚಾಗಿದೆ </blockquote><span class="attribution">ಈಶ್ವರಪ್ಪ ಬಸ್ತಿಹಳ್ಳಿ ರೈತ</span></div>.<div><blockquote>ಟೊಮೆಟೊದಲ್ಲಿ ಹುಳಿ ಅಂಶ ಇರುವುದರಿಂದ ಹೊಲದಲ್ಲಿ ಉಳಿಸಿ ಕಾಂಪೋಸ್ಟ್ ಮಾಡುವಂತಿಲ್ಲ. ಟೊಮೆಟೊ ಹಣ್ಣನ್ನು ಹೊರ ಸಾಗಿಸಲೇಬೇಕು </blockquote><span class="attribution">ಸುರೇಶ್ ಹಳೇಬೀಡಿನ ಟೊಮೆಟೊ ಬೆಳೆಗಾರ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಳೇಬೀಡು</strong>: ಮಳೆ ಹೊಡೆತಕ್ಕೆ ಈ ಭಾಗದ ತರಕಾರಿ ಬೆಳೆಗೆ ಹಾನಿಯಾಗಿದ್ದು, ಟೊಮೆಟೊ ಹಾಗೂ ಎಲೆಕೋಸು ಕೇಳುವವರೇ ಇಲ್ಲದಂತಾಗಿದೆ. ಟೊಮೆಟೊ ಬೆಳೆಯನ್ನು ರೈತರು ರಸ್ತೆಗೆ ಚೆಲ್ಲುತ್ತಿದ್ದಾರೆ.</p>.<p>ಮೋಡ ಕವಿದ ವಾತಾವರಣ, ತುಂತುರು ಮಳೆಯ ಕಾರಣದಿಂದ ಟೊಮೆಟೊ ಗುಣಮಟ್ಟ ಇಲ್ಲದಂತಾಗಿದೆ. ಬೆಲೆ ಇದ್ದರೂ ಖರೀದಿಸಲು ವರ್ತಕರು ಬರುತ್ತಿಲ್ಲ. ಮಾರುಕಟ್ಟೆಗೆ ಟೊಮೆಟೊ ಪೂರೈಸಲೂ ಸಾಧ್ಯವಾಗುತ್ತಿಲ್ಲ.</p>.<p>‘ಹಲವೆಡೆ ಹಣ್ಣಿನ ಮೇಲೆ ಚುಕ್ಕೆ ಮೂಡಿದೆ. ದೂರದ ಮಾರುಕಟ್ಟೆಗೆ ತಲುಪುವ ಹೊತ್ತಿಗೆ ಕೊಳೆತಿರುತ್ತದೆ. ಇಳುವರಿ ಹೆಚ್ಚಿದ್ದರೂ ಆದಾಯ ಸಿಗುತ್ತಿಲ್ಲ’ ಎಂದು ರೈತ ಉಮೇಶ್ ಬೇಸರ ವ್ಯಕ್ತಪಡಿಸಿದರು.</p>.<p>‘ತಾಲ್ಲೂಕಿನಲ್ಲಿ 400 ಹೆಕ್ಟೇರ್ ಪ್ರದೇಶದಲ್ಲಿ ಟೊಮೆಟೊ ಬೆಳೆಯಲಾಗುತ್ತಿದೆ. 25 ಕೆ.ಜಿ. ಟೊಮೆಟೊಗೆ ಮಾರುಕಟ್ಟೆಯಲ್ಲಿ ₹600ರಿಂದ ₹700 ದರವಿದೆ. ಆದರೆ ತಾಲ್ಲೂಕಿನ ಟೊಮೆಟೊ ₹200 ರಂತೆ ಮಾರಾಟವಾಗುತ್ತಿದೆ. ಈ ದರದಿಂದ ಖರ್ಚು –ವೆಚ್ಚ ನಿಭಾಯಿಸುವುದು ಅಸಾಧ್ಯ. ಮಾರಾಟವಾಗದೆ ಉಳಿದ ಬೆಳೆಯನ್ನು ವಾಪಸು ತರುವುದೂ ಕಷ್ಟ. ಎಲ್ಲಾದರೂ ಸುರಿಯಬೇಕಷ್ಟೆ’ ಎಂಬುದು ಬೆಳೆಗಾರ ಮಾಯಗೊಂಡನಹಳ್ಳಿ ಸತೀಶ್ ಅವರ ಅಸಹಾಯಕತೆ.</p>.<p>‘ಮಳೆಯಿಂದ ಎಲೆಕೋಸಿನ ಗುಣಮಟ್ಟವೂ ಕುಸಿದಿದೆ. ನಗರದ ಮಾರುಕಟ್ಟೆಯಲ್ಲಿ ಎಲೆಕೋಸು ಕೆ.ಜಿಗೆ ₹ 8ರಂತೆ ಮಾರಾಟವಾಗುತ್ತಿದೆ. ಮಾರುಕಟ್ಟೆಗೆ ಸಾಗಿಸಲು ₹4 ಖರ್ಚಾಗುತ್ತದೆ. ಸಾಗಣೆ ವೆಚ್ಚವೂ ದಕ್ಕದ ಪರಿಸ್ಥಿತಿ. ಹೊಲದಲ್ಲಿಯೇ ಖರೀದಿಸಲು ವರ್ತಕರು ಬರುತ್ತಿಲ್ಲ’ ಎಂದು ರೈತ ರವಿಶಂಕರ್ ಅಸಹಾಯಕತೆ ವ್ಯಕ್ತಪಡಿಸಿದರು.</p>.<p>‘ಹೊಲದಲ್ಲಿ ಎಲೆಕೋಸಿನ ಜೊತೆ ಗಿಡ, ಕಂಟಿ ಬೆಳೆಯುತ್ತಿವೆ. ಸಾಕಷ್ಟು ಜಮೀನುಗಳಲ್ಲಿ ಜಾನುವಾರು ಮೇಯಲು ಬಿಡಲಾಗಿದೆ’ ಎಂದರು.</p>.<p>ಬೆಳೆಗೆ ಹಾಕಿದ ಬಂಡವಾಳವೂ ಸಿಗದಂತಾದ ರೈತರು ಮಳೆಯಿಂದ ಎಲೆಕೋಸಿನ ಪದರಗಳ ಮೇಲೆ ರಂಧ್ರ ಉತ್ತಮ ಫಸಲಿದ್ದರೂ ಮಾರುಕಟ್ಟೆಯಲ್ಲಿ ಸಿಗದ ಬೆಲೆ</p>.<div><blockquote>ಎಲೆಕೋಸು ಕಟಾವು ಆಗದೇ ಉಳಿದರೆ ಅದನ್ನು ತೆಗೆದು ಮುಂದಿನ ಬೆಳೆಗೆ ಸಿದ್ದ ಮಾಡುವುದಕ್ಕೂ ಖರ್ಚು ಬರುತ್ತದೆ. ಆದಾಯಕ್ಕಿಂತ ರೈತರಿಗೆ ನಷ್ಟ ಹೆಚ್ಚಾಗಿದೆ </blockquote><span class="attribution">ಈಶ್ವರಪ್ಪ ಬಸ್ತಿಹಳ್ಳಿ ರೈತ</span></div>.<div><blockquote>ಟೊಮೆಟೊದಲ್ಲಿ ಹುಳಿ ಅಂಶ ಇರುವುದರಿಂದ ಹೊಲದಲ್ಲಿ ಉಳಿಸಿ ಕಾಂಪೋಸ್ಟ್ ಮಾಡುವಂತಿಲ್ಲ. ಟೊಮೆಟೊ ಹಣ್ಣನ್ನು ಹೊರ ಸಾಗಿಸಲೇಬೇಕು </blockquote><span class="attribution">ಸುರೇಶ್ ಹಳೇಬೀಡಿನ ಟೊಮೆಟೊ ಬೆಳೆಗಾರ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>