<p><strong>ಅರಕಲಗೂಡು: ಅಡಿಕೆ ಬೊಮ್ಮನ ಹಳ್ಳಿ ಏತನೀರಾವರಿ ಯೋಜನೆಯು ಕಸಬಾ ಹೋಬಳಿಯ 33 ಗ್ರಾಮಗಳ 850 ಎಕರೆ ಕೃಷಿ ಜಮೀನಿಗೆ ನೀರೊದಗಿಸಲಿದೆ ಎಂದು ಶಾಸಕ ಎ. ಮಂಜು ತಿಳಿಸಿದರು. </strong></p>.<p><strong>ಏತನೀರಾವರಿ ಯೋಜನೆಯಿಂದ ನೀರು ಹರಿಸುವ ಕಾರ್ಯಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ‘2007ರಲ್ಲಿ ಪೂರ್ಣಗೊಂಡಿರುವ ಈ ಯೋಜನೆಯಿಂದ 65 ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ವಿತರಣಾ ನಾಲೆಗಳ ನಿರ್ಮಾಣಕ್ಕೆ ವಶಪಡಿಸಿ ಕೊಂಡಿರುವ 359 ಎಕರೆ ಪ್ರದೇಶ ವ್ಯಾಪ್ತಿಯಲ್ಲಿ 169 ಎಕರೆಗೆ ಪರಿಹಾರ ಧನ ವಿತರಿಸಲಾಗಿದೆ’ ಎಂದರು.</strong></p>.<p><strong> ಪ್ರಸ್ತುತ ₹ 2.5 ಕೋಟಿ ಹಣ ಬಿಡುಗಡೆಯಾಗಿದ್ದು ಉಳಿದ 120 ಎಕರೆ ಪ್ರದೇಶ ವ್ಯಾಪ್ತಿಗೆ ಪರಿಹಾರಧನ ವಿತರಿಸಲು ₹ 34 ಕೋಟಿ ಹಣ ಅಗತ್ಯವಿದ್ದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು.</strong></p>.<p><strong>ದಶಕ ಕಳೆದರೂ ಪರಿಹಾರ ಧನ ವಿತರಿಸಲು ಸರ್ಕಾರದ ಗಮನ ಸೆಳೆದು ಕ್ರಮ ವಹಿಸಲಾಗುವುದು. ರೈತರು ಅರೆ ನೀರಾವರಿ ಬೆಳೆ ಬೆಳೆಯುವುದು ಸೂಕ್ತವಾಗಿದ್ದು ಇದು ಆರ್ಥಿಕವಾಗಿ ಲಾಭ ತರಲಿದೆ ಎಂದರು.</strong></p>.<p><strong>ಮುಖಂಡ ನರಸೇಗೌಡ, ಎಂಜಿನಿಯರ್ ಸಿದ್ದರಾಜು,ಶಿವಕುಮಾರ್ ಉಪಸ್ಥಿತರಿದ್ದರು. </strong></p>.<p><strong>ಸಂಪರ್ಕ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ:</strong><strong> ತಾಲ್ಲೂಕಿನ ಮಲ್ಲಿ ಪಟ್ಟಣ ಹೋಬಳಿಯ ವಿವಿಧ ಗ್ರಾಮಗಳಲ್ಲಿ ₹1.67 ಕೋಟಿ ವೆಚ್ಚದಲ್ಲಿ ಸಂಪರ್ಕ ರಸ್ತೆ ನಿರ್ಮಾಣ ಕಾರ್ಯಕ್ಕೆ ಶಾಸಕ ಮಂಜು ಶನಿವಾರ ಭೂಮಿ ಪೂಜೆ ನೆರವೇರಿಸಿದರು.</strong></p>.<p><strong>‘ಅಂಬಿಗೋಡನಹಳ್ಳಿ, ಸಿಂಗನಕುಪ್ಪೆ, ಮಾಗಲು ಕೊಪ್ಪಲು ಗ್ರಾಮಗಳಿಗೆ ತಲಾ ₹20 ಲಕ್ಷ, ಬಸವನಹಳ್ಳಿ ₹25 ಲಕ್ಷ, ಯಡಿಯೂರು ರೂ 35 ಲಕ್ಷ, ಬೆಮ್ಮತ್ತಿ ₹ 22 ಲಕ್ಷ ಹಾಗೂ ಕಾಕೋಡನಹಳ್ಳಿ ಗ್ರಾಮಕ್ಕೆ ₹25 ಲಕ್ಷ ಹಣ ನೀಡಲಾಗಿದೆ. ಕ್ಷೇತ್ರಕ್ಕೆ ಒದಗಿಸಿದ್ದ ₹10 ಕೋಟಿ ಹಣದಲ್ಲಿ ಜಿಪಂ ಅನುದಾನದಲ್ಲಿ ಮಲ್ಲಿ ಪಟ್ಟಣ ಹೋಬಳಿಗೆ ₹1.67 ಕೋಟಿ ಅನುದಾನ ನೀಡಲಾಗಿದೆ. ಗುಣಮಟ್ಟದ ಕಾಮಗಾರಿ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು ಗ್ರಾಮಸ್ಥರು ಸಹ ಕಾಮಗಾರಿ ಬಗ್ಗೆ ಗಮನ ಹರಿಸಬೇಕು’ ಎಂದರು. </strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅರಕಲಗೂಡು: ಅಡಿಕೆ ಬೊಮ್ಮನ ಹಳ್ಳಿ ಏತನೀರಾವರಿ ಯೋಜನೆಯು ಕಸಬಾ ಹೋಬಳಿಯ 33 ಗ್ರಾಮಗಳ 850 ಎಕರೆ ಕೃಷಿ ಜಮೀನಿಗೆ ನೀರೊದಗಿಸಲಿದೆ ಎಂದು ಶಾಸಕ ಎ. ಮಂಜು ತಿಳಿಸಿದರು. </strong></p>.<p><strong>ಏತನೀರಾವರಿ ಯೋಜನೆಯಿಂದ ನೀರು ಹರಿಸುವ ಕಾರ್ಯಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ‘2007ರಲ್ಲಿ ಪೂರ್ಣಗೊಂಡಿರುವ ಈ ಯೋಜನೆಯಿಂದ 65 ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ವಿತರಣಾ ನಾಲೆಗಳ ನಿರ್ಮಾಣಕ್ಕೆ ವಶಪಡಿಸಿ ಕೊಂಡಿರುವ 359 ಎಕರೆ ಪ್ರದೇಶ ವ್ಯಾಪ್ತಿಯಲ್ಲಿ 169 ಎಕರೆಗೆ ಪರಿಹಾರ ಧನ ವಿತರಿಸಲಾಗಿದೆ’ ಎಂದರು.</strong></p>.<p><strong> ಪ್ರಸ್ತುತ ₹ 2.5 ಕೋಟಿ ಹಣ ಬಿಡುಗಡೆಯಾಗಿದ್ದು ಉಳಿದ 120 ಎಕರೆ ಪ್ರದೇಶ ವ್ಯಾಪ್ತಿಗೆ ಪರಿಹಾರಧನ ವಿತರಿಸಲು ₹ 34 ಕೋಟಿ ಹಣ ಅಗತ್ಯವಿದ್ದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು.</strong></p>.<p><strong>ದಶಕ ಕಳೆದರೂ ಪರಿಹಾರ ಧನ ವಿತರಿಸಲು ಸರ್ಕಾರದ ಗಮನ ಸೆಳೆದು ಕ್ರಮ ವಹಿಸಲಾಗುವುದು. ರೈತರು ಅರೆ ನೀರಾವರಿ ಬೆಳೆ ಬೆಳೆಯುವುದು ಸೂಕ್ತವಾಗಿದ್ದು ಇದು ಆರ್ಥಿಕವಾಗಿ ಲಾಭ ತರಲಿದೆ ಎಂದರು.</strong></p>.<p><strong>ಮುಖಂಡ ನರಸೇಗೌಡ, ಎಂಜಿನಿಯರ್ ಸಿದ್ದರಾಜು,ಶಿವಕುಮಾರ್ ಉಪಸ್ಥಿತರಿದ್ದರು. </strong></p>.<p><strong>ಸಂಪರ್ಕ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆ:</strong><strong> ತಾಲ್ಲೂಕಿನ ಮಲ್ಲಿ ಪಟ್ಟಣ ಹೋಬಳಿಯ ವಿವಿಧ ಗ್ರಾಮಗಳಲ್ಲಿ ₹1.67 ಕೋಟಿ ವೆಚ್ಚದಲ್ಲಿ ಸಂಪರ್ಕ ರಸ್ತೆ ನಿರ್ಮಾಣ ಕಾರ್ಯಕ್ಕೆ ಶಾಸಕ ಮಂಜು ಶನಿವಾರ ಭೂಮಿ ಪೂಜೆ ನೆರವೇರಿಸಿದರು.</strong></p>.<p><strong>‘ಅಂಬಿಗೋಡನಹಳ್ಳಿ, ಸಿಂಗನಕುಪ್ಪೆ, ಮಾಗಲು ಕೊಪ್ಪಲು ಗ್ರಾಮಗಳಿಗೆ ತಲಾ ₹20 ಲಕ್ಷ, ಬಸವನಹಳ್ಳಿ ₹25 ಲಕ್ಷ, ಯಡಿಯೂರು ರೂ 35 ಲಕ್ಷ, ಬೆಮ್ಮತ್ತಿ ₹ 22 ಲಕ್ಷ ಹಾಗೂ ಕಾಕೋಡನಹಳ್ಳಿ ಗ್ರಾಮಕ್ಕೆ ₹25 ಲಕ್ಷ ಹಣ ನೀಡಲಾಗಿದೆ. ಕ್ಷೇತ್ರಕ್ಕೆ ಒದಗಿಸಿದ್ದ ₹10 ಕೋಟಿ ಹಣದಲ್ಲಿ ಜಿಪಂ ಅನುದಾನದಲ್ಲಿ ಮಲ್ಲಿ ಪಟ್ಟಣ ಹೋಬಳಿಗೆ ₹1.67 ಕೋಟಿ ಅನುದಾನ ನೀಡಲಾಗಿದೆ. ಗುಣಮಟ್ಟದ ಕಾಮಗಾರಿ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು ಗ್ರಾಮಸ್ಥರು ಸಹ ಕಾಮಗಾರಿ ಬಗ್ಗೆ ಗಮನ ಹರಿಸಬೇಕು’ ಎಂದರು. </strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>