ಹಳೇಬೀಡಿನ ನಾಡ ಕಚೇರಿ ಉಪತಹಶೀಲ್ದಾರ್ ಮೊಹನ್ ಕುಮಾರ್ ಸಹಾಯಕ ಸ್ಮಾರಕ ಸಂರಕ್ಷಣಾಧಿಕಾರಿ ಗೌತಮ್ ಅವರಿಗೆ ದೂರವಾಣಿ ಕರೆ ಮಾಡಿ, ‘ಬಸ್ತಿಹಳ್ಳಿಯಲ್ಲಿ ಒಂದೇ ಸ್ಥಳದಲ್ಲಿರುವ ವಿಜಯಿ ಪಾರ್ಶ್ವನಾಥ, ಶಾಂತಿನಾಥ ಹಾಗೂ ಆದಿನಾಥ ಎಂಬ ಬಸದಿಗಳು ಜಿನ್ನೆ ದೇವರು ಎಂಬ ಹೆಸರಿನಲ್ಲಿ ಮುಜರಾಯಿ ಇಲಾಖೆಯಿಂದ ಪೂಜೆ ನೆರವೇರಿಸಲಾಗುತ್ತಿದೆ. ಜಿನ್ನೆ ದೇವರು ಕಾಲಕ್ರಮೇಣ ದಾಖಲೆಯಲ್ಲಿ ಜಂಗಮ ದೇವರು ಎಂದು ತಪ್ಪಾಗಿದೆ. ದಾಖಲಾತಿ ಸರಿಪಡಿಸಲು ಜೈನ ಸಮಾಜದವರು ಅರ್ಜಿ ಸಲ್ಲಿಸಿದ್ದಾರೆ. ಪೂಜೆ ನಡೆಸಲು ಅವಕಾಶ ಕೊಡಿ’ ಎಂದು ಮನವಿ ಮಾಡಿದರು. ಗೌತಮ್ ಒಪ್ಪಿಗೆ ನೀಡಿದ್ದರಿಂದ ಬುಧವಾರ ಬೆಳಿಗ್ಗೆಯಿಂದ ಪೂಜೆ ಆರಂಭವಾಯಿತು.