ರಟ್ಟೀಹಳ್ಳಿಯ ಮಲ್ಲಿಕಾರ್ಜುನ ಹೆರಕಾರ, ರಾಣೆಬೆನ್ನೂರಿನ ರಾಮಪ್ಪ ನಂದಿಹಳ್ಳಿ, ಹಾವೇರಿಯ ಸಿದ್ಧೇಶ್ವರ ಕಾಡದೇವರಮಠ, ರಾಣೆಬೆನ್ನೂರಿನ ಹಾಲೇಶ ಶಿವಪ್ಪನವರ ಈ ನಾಲ್ವರೂ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಸೋಮವಾರ ಹಿಂತೆಗೆದುಕೊಂಡು ಚುನಾವಣೆಯಿಂದ ಹಿಂದೆ ಸರಿದರು.ಏ. 12ರಂದು ನಾಮಪತ್ರ ಹಿಂತೆಗೆದುಕೊಳ್ಳಲು ಕಡೆಯ ದಿನವಾಗಿತ್ತು.