<p><strong>ರಾಣೆಬೆನ್ನೂರು:</strong> ತಾಲ್ಲೂಕಿನ ಅಂಕಸಾಪುರ ಗ್ರಾಮದ ರೈತ ರಾಮಪ್ಪ ಗೋಣೆಪ್ಪ ಅಡಿವೇರ ಎಂಬುವವರಿಗೆ ಸೇರಿದ 4 ಎತ್ತುಗಳು ಆಕಸ್ಮಿಕವಾಗಿ ದನದ ಕೊಟ್ಟಿಗೆಯಲ್ಲಿ ಮೃತಪಟ್ಟ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ.</p>.<p>ರೈತ ರಾಮಪ್ಪ ಭಾನುವಾರ ರಾತ್ರಿ ಎಲ್ಲ ಎತ್ತುಗಳಿಗೆ ನೀರು ಕುಡಿಸಿ ಮೇವು ಹಾಕಿ ಮಲಗಿದ್ದರು. ಬೆಳಗಿನ ಜಾವ ಎತ್ತುಗಳಿಗೆ ಮೇವು ಹಾಕಲು ಎಂದಿನಂತೆ ದನದ ಕೊಟ್ಟಿಗೆಗೆ ಹೋದಾಗ ಆಗ ನಾಲ್ಕು ಎತ್ತುಗಳು ಮೃತಪಟ್ಟಿದ್ದು ಕಂಡು ಬಂದಿದೆ.<br />ಘಟನಾ ಸ್ಥಳಕ್ಕೆ ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಪಶುವೈದ್ಯಾಧಿಕಾರಿ ಡಾ. ನೀಲಕಂಠ ಅಂಗಡಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.</p>.<p>ಶಾಸಕ ಅರುಣಕುಮಾರ ಪೂಜಾರ ಅವರು ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಜತೆಗೆ ಚರ್ಚಿಸಿ ಎತ್ತುಗಳ ಮಾಲೀಕರಿಗೆ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದರು.</p>.<p>ಎಪಿಎಂಸಿ ಸದಸ್ಯ ಬಸವರಾಜ ಹುಲ್ಲತ್ತಿ ಹಾಗೂ ಕೃಷಿ ಸಹಾಯಕ ನಿರ್ದೇಶಕ ಗೌಡಪ್ಪಗೌಡ್ರ, ತಾಲ್ಲೂಕು ಪಂಚಾಯ್ತಿ ಇಒ ಎಸ್.ಎಂ. ಕಾಂಬಳೆ ಭೇಟಿ ನೀಡಿದರು.</p>.<p>ರೈತ ಸಂಘದ ಮುಖಂಡ ರವೀಂದ್ರಗೌಡ ಪಾಟೀಲ ಮಾತನಾಡಿ, ಕೃಷಿ ಸಚಿವ ಬಿ.ಸಿ, ಪಾಟೀಲರ ತವರು ಜಿಲ್ಲೆಯಲ್ಲಿಯೇ ಈ ಘಟನೆ ನಡೆದಿದೆ. ಸಾವನ್ನಪ್ಪಿದ ಎತ್ತುಗಳ ಮಾಲೀಕರಿಗೆ ಕೃಷಿ ಸಚಿವರು ಈಗಿನ ಮಾರುಕಟ್ಟೆದರದಲ್ಲಿ ಕನಿಷ್ಠ ₹ 4 ಲಕ್ಷ ಪರಿಹಾರ ಕೊಡಿಸಬೇಕು ಎಂದು ಪರಿಹಾರ ಕೊಡಿಸಬೇಕೆಂದು ಒತ್ತಾಯಿಸಿದರು.</p>.<p>ದಿಳ್ಳೆಪ್ಪ ಸತ್ಯಪ್ಪನವರ, ಮಲ್ಲಿಕಾರ್ಜುನ ನಡುವಿನಮನಿ, ನಾಗರಾಜು ಸೂರ್ವೆ ಮಂಜುನಾಥ, ಹರಿಹರಗೌಡ ಪಾಟೀಲ, ನಾಗಪ್ಪ ಬೆನ್ನೂರು, ಗಣೇಶ ಬಂಡಿವಡ್ಡರ, ಸುರೇಶಪ್ಪ ಗರಡೀಮನಿ, ಪ್ರಕಾಶ ಲಮಾಣಿ, ಲಕ್ಷ್ಮಣ ಲಮಾಣಿ, ಊದೇಶ ನಡುವಿನಮನಿ ಇದ್ದರು. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಣೆಬೆನ್ನೂರು:</strong> ತಾಲ್ಲೂಕಿನ ಅಂಕಸಾಪುರ ಗ್ರಾಮದ ರೈತ ರಾಮಪ್ಪ ಗೋಣೆಪ್ಪ ಅಡಿವೇರ ಎಂಬುವವರಿಗೆ ಸೇರಿದ 4 ಎತ್ತುಗಳು ಆಕಸ್ಮಿಕವಾಗಿ ದನದ ಕೊಟ್ಟಿಗೆಯಲ್ಲಿ ಮೃತಪಟ್ಟ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ.</p>.<p>ರೈತ ರಾಮಪ್ಪ ಭಾನುವಾರ ರಾತ್ರಿ ಎಲ್ಲ ಎತ್ತುಗಳಿಗೆ ನೀರು ಕುಡಿಸಿ ಮೇವು ಹಾಕಿ ಮಲಗಿದ್ದರು. ಬೆಳಗಿನ ಜಾವ ಎತ್ತುಗಳಿಗೆ ಮೇವು ಹಾಕಲು ಎಂದಿನಂತೆ ದನದ ಕೊಟ್ಟಿಗೆಗೆ ಹೋದಾಗ ಆಗ ನಾಲ್ಕು ಎತ್ತುಗಳು ಮೃತಪಟ್ಟಿದ್ದು ಕಂಡು ಬಂದಿದೆ.<br />ಘಟನಾ ಸ್ಥಳಕ್ಕೆ ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಪಶುವೈದ್ಯಾಧಿಕಾರಿ ಡಾ. ನೀಲಕಂಠ ಅಂಗಡಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.</p>.<p>ಶಾಸಕ ಅರುಣಕುಮಾರ ಪೂಜಾರ ಅವರು ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಜತೆಗೆ ಚರ್ಚಿಸಿ ಎತ್ತುಗಳ ಮಾಲೀಕರಿಗೆ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದರು.</p>.<p>ಎಪಿಎಂಸಿ ಸದಸ್ಯ ಬಸವರಾಜ ಹುಲ್ಲತ್ತಿ ಹಾಗೂ ಕೃಷಿ ಸಹಾಯಕ ನಿರ್ದೇಶಕ ಗೌಡಪ್ಪಗೌಡ್ರ, ತಾಲ್ಲೂಕು ಪಂಚಾಯ್ತಿ ಇಒ ಎಸ್.ಎಂ. ಕಾಂಬಳೆ ಭೇಟಿ ನೀಡಿದರು.</p>.<p>ರೈತ ಸಂಘದ ಮುಖಂಡ ರವೀಂದ್ರಗೌಡ ಪಾಟೀಲ ಮಾತನಾಡಿ, ಕೃಷಿ ಸಚಿವ ಬಿ.ಸಿ, ಪಾಟೀಲರ ತವರು ಜಿಲ್ಲೆಯಲ್ಲಿಯೇ ಈ ಘಟನೆ ನಡೆದಿದೆ. ಸಾವನ್ನಪ್ಪಿದ ಎತ್ತುಗಳ ಮಾಲೀಕರಿಗೆ ಕೃಷಿ ಸಚಿವರು ಈಗಿನ ಮಾರುಕಟ್ಟೆದರದಲ್ಲಿ ಕನಿಷ್ಠ ₹ 4 ಲಕ್ಷ ಪರಿಹಾರ ಕೊಡಿಸಬೇಕು ಎಂದು ಪರಿಹಾರ ಕೊಡಿಸಬೇಕೆಂದು ಒತ್ತಾಯಿಸಿದರು.</p>.<p>ದಿಳ್ಳೆಪ್ಪ ಸತ್ಯಪ್ಪನವರ, ಮಲ್ಲಿಕಾರ್ಜುನ ನಡುವಿನಮನಿ, ನಾಗರಾಜು ಸೂರ್ವೆ ಮಂಜುನಾಥ, ಹರಿಹರಗೌಡ ಪಾಟೀಲ, ನಾಗಪ್ಪ ಬೆನ್ನೂರು, ಗಣೇಶ ಬಂಡಿವಡ್ಡರ, ಸುರೇಶಪ್ಪ ಗರಡೀಮನಿ, ಪ್ರಕಾಶ ಲಮಾಣಿ, ಲಕ್ಷ್ಮಣ ಲಮಾಣಿ, ಊದೇಶ ನಡುವಿನಮನಿ ಇದ್ದರು. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>