ಪ್ರಕರಣದ ವಿಚಾರಣೆಯನ್ನು ನಡೆಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಅಧ್ಯಕ್ಷೆ ಸುನಂದಾ ಹಾಗೂ ಸದಸ್ಯರಾದ ಮಹೇಶ್ವರಿ ಬಿ.ಎಸ್. ಅವರು ರಾಣೆಬೆನ್ನೂರಿನ ಮಹಾರಾಷ್ಟ್ರ ಬೈಬ್ರೀಡ್ ಸೀಡ್ಸ್ ಕಂಪನಿ ಹಾಗೂ ಹಾವೇರಿ ನಗರದ ಗಜಾನನ ಆಗ್ರೋ ಸೆಂಟರ್ ವತಿಯಿಂದ ಬೆಳೆ ಹಾನಿ ನಷ್ಟ ಪರಿಹಾರವಾಗಿ ₹60 ಸಾವಿರ, ಮೆಣಸಿನಕಾಯಿ ಬೀಜ ಖರೀದಿಸಿದ ಮೊತ್ತ ₹2,280, ಪ್ರಕರಣದ ಖರ್ಚು ₹2 ಸಾವಿರ ಹಾಗೂ ಮಾನಸಿಕ ವ್ಯಥೆಗಾಗಿ ₹2 ಸಾವಿರ ಪಾವತಿಸಲು ಆದೇಶ ಹೊರಡಿಸಿದ್ದಾರೆ.