ಅಂತರ್ಜಲ ಮಟ್ಟ ಕುಸಿದಿದ್ದು, ಕೊಳವೆ ಬಾವಿಗಳಲ್ಲಿ ನೀರಿಲ್ಲದೆ ಕೃಷಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಇದನ್ನು ಮನಗಂಡಿರುವ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಸೂಡಂಬಿ ಗ್ರಾಮದಲ್ಲಿ 4, ಹಿರೇ ಅಣಜಿ ಗ್ರಾಮದಲ್ಲಿ 3 ಕೊಳವೆ ಬಾವಿಗಳನ್ನು ಕೊರೆಸಿದೆ. ಆದರೆ, ತಲಾ ಒಂದರಲ್ಲಿ ಮಾತ್ರ ನೀರು ದೊರೆತಿದೆ. ಕೆರೆಗಳು ಬತ್ತಿದ್ದು, ರೈತರ ಕೊಳವೆ ಬಾವಿಗಳನ್ನು ಎರವಲು ಪಡೆದು ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲಾಗಿದೆ ಎಂದು ಎಇಇ ಸುರೇಶ ಬೇಡರ ತಿಳಿಸಿದರು.