<p><strong>ಹಾವೇರಿ:</strong> ‘ಆತ್ಮಹತ್ಯೆ ಬಿಟ್ಟು ಬೇರೆ ದಾರಿಯೇ ಇಲ್ಲ’ ಎಂದು ರೈತರು ಅಲವತ್ತು ಕೊಂಡರೂ, ಸಬ್ಸಿಡಿ ಬಿಡುಗಡೆ ಮಾಡದ ಹಾನಗಲ್ಲಿನ ಕೃಷಿ ಇಲಾಖೆ ಸಹಾಯಕ ನಿರ್ದೇಶಕರು, ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ‘ದಾಳಿ’ ಬಳಿಕ 257 ರೈತರ ₹1.06 ಕೋಟಿ ಬಿಡುಗಡೆ ಮಾಡಿದ್ದಾರೆ. ದಾಳಿ ಪ್ರಭಾವಕ್ಕೆ ಜಿಲ್ಲೆಯ ಇತರ ಕಡೆಯ ಸಬ್ಸಿಡಿ ಹಣವೂ ಲಂಚ ಇಲ್ಲದೇ ಬಿಡುಗಡೆ ಆಗುತ್ತಿದೆ.</p>.<p>ಪ್ರಕರಣ: ಹಾನಗಲ್ನ ಡೀಲರ್ ವೀರಣ್ಣ ಸಿಂಧೂರ, 2016–17ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಇತರ ರೈತರಿಗೆ ಸರ್ಕಾರದ ಸಹಾಯಧನದಲ್ಲಿ ಕೃಷಿ ಉಪಕರಣಗಳನ್ನು ನೀಡಿದ್ದರು. ಈ ಸಬ್ಸಿಡಿ ಬಿಡುಗಡೆ ಮಾಡಲು ಅಂದಿನ ಸಹಾಯಕ ಕೃಷಿ ನಿರ್ದೇಶಕ ಡಾ. ಜಿ.ಬಸವರಾಜ ₹2 ಲಕ್ಷ ಲಂಚದ ಬೇಡಿಕೆ ಇಟ್ಟಿದ್ದರು. ಸತತ ಬರಗಾಲವಿದ್ದು, ಬಡ– ಪರಿಶಿಷ್ಟ ರೈತರಿಂದ ಹಣ ಸಂಗ್ರಹಿಸಿ ನೀಡಲು ಸಾಧ್ಯವಿಲ್ಲ ಎಂದು ಸಿಂಧೂರ ನಿರಾಕರಿಸಿದ್ದರು. ಆದರೆ, ಹಣ ಕೊಡದೇ ಕಡತಕ್ಕೆ ಸಹಿ ಹಾಕಲು ಸಾಧ್ಯವಿಲ್ಲ ಎಂದು ಆ ಅಧಿಕಾರಿ ಪಟ್ಟು ಹಿಡಿದಿದ್ದರು.</p>.<p>‘ನಾನು, ಬ್ಯಾಂಕ್ ಸಾಲ ಮಾಡಿ ಡೀಲರ್ಶಿಪ್ ಪಡೆದುಕೊಂಡಿದ್ದೆ. ಸತತ ಬರದಿಂದ ರೈತರೂ ಸಂಕಷ್ಟದಲ್ಲಿದ್ದರು. ಲಂಚ ನೀಡುವುದು ಅಸಾಧ್ಯ<br />ವಾಗಿತ್ತು. ಇತ್ತ ಬ್ಯಾಂಕ್ ಬಡ್ಡಿ ದಿನೇ ದಿನೇ ಹೆಚ್ಚಾಗುತ್ತಿತ್ತು. ರೈತರಿಗೂ ಕೈಸಾಲ. ನಮಗೆ ದಿಕ್ಕೇ ತೋಚದಾಯಿತು’ ಎಂದು ಸಿಂಧೂರ ಆ ದಿನಗಳನ್ನು ನೆನೆದರು.</p>.<p>‘ಒಂದು ದಿನ, ನಾನು ಮತ್ತು ರೈತರು ಅಧಿಕಾರಿ ಕಚೇರಿಗೆ ಹೋದೆವು. ನಮಗೆ ಆತ್ಮಹತ್ಯೆ ಬಿಟ್ಟು ಬೇರೆ ದಾರಿಯೇ ಇಲ್ಲ. ದಯವಿಟ್ಟು ಸಬ್ಸಿಡಿ ಮಂಜೂರು ಮಾಡಿ. ಜೀವ ಉಳಿಸಿ ಎಂದು ಅಲವತ್ತುಕೊಂಡೆವು. ಆದರೂ, ಕ್ಯಾರೇ ಎನ್ನಲಿಲ್ಲ’ ಎನ್ನುವಾಗ ಅವರ ಕಣ್ಣಾಲಿಗಳು ತೇವಗೊಂಡವು.</p>.<p>ಅವರ ಮಾತನ್ನು, ಅವರೊಂದಿಗಿದ್ದ ಡೀಲರ್ ಸಂಜಯ್ ಬಾಬುಸಾಹೇಬ ತೋರಣಗಟ್ಟಿ ಮುಂದುವರಿಸಿದರು.</p>.<p>‘ಆ ನೋವು ಹೇಳತೀರಲಾಗದು. ಹಣ ಮಾತ್ರವಲ್ಲ ಇನ್ನಷ್ಟು ಬೇಡಿಕೆಗಳನ್ನೂ ಪೂರೈಸಬೇಕಿತ್ತು. ಆದರೆ, ಆತ್ಮಹತ್ಯೆ ನಿರ್ಧಾರ ಬಿಟ್ಟು, ಎಸಿಬಿಗೆ ದೂರು ನೀಡಲು ನಿರ್ಧರಿಸಿದೆವು’ ಎಂದು ತಿಳಿಸಿದರು.</p>.<p>ಕೊನೆಗೂ, ಅವರು ಹಾವೇರಿಯ ಎಸಿಬಿ ಡಿವೈಎಸ್ಪಿ ಎಸ್.ಕೆ. ಪ್ರಹ್ಲಾದ್ ಹಾಗೂ ಇನ್ಸ್ಪೆಕ್ಟರ್ ಬಿ.ಕೆ. ಹಳಬಣ್ಣನವರ ಅವರನ್ನು ಭೇಟಿಯಾಗಿ, ಜನವರಿ 10ರಂದು ದೂರು ದಾಖಲಿಸಿದರು.</p>.<p>ಎಸಿಬಿ ಅಧಿಕಾರಿಗಳು, ಈ ದೂರನ್ನು ರಹಸ್ಯವಾಗಿಟ್ಟುಕೊಂಡರು. ಫೆಬ್ರುವರಿ 6ರಂದು ಬಲೆ ಬೀಸಿದಾಗ, ದೂರಿನ ಹೊರತಾಗಿಯೂ 257 ರೈತರ ಸಬ್ಸಿಡಿ ಬಾಕಿ ಇರುವುದು ಅವರ ಗಮನಕ್ಕೆ ಬಂತು. ಅಲ್ಲದೆ, ಇತರ ಕಡತಗಳನ್ನೂ ಇಲಾಖೆಯು ವಾರದೊಳಗೆ ವಿಲೇವಾರಿ ಮಾಡಿತು.</p>.<p>ಒಂದು ದಾಳಿಯಿಂದಾಗಿ ಜಿಲ್ಲೆಯ ಹಲವಾರು ಡೀಲರ್ಗಳು ಹಾಗೂ ರೈತರ ಸಬ್ಸಿಡಿ ಮಂಜೂರಾಯಿತು. ಸುಮಾರು 930 ರೈತರು ಹಾಗೂ ಇತರ ಡೀಲರ್ಗಳು ಕರೆ ಮಾಡಿ ತಮ್ಮನ್ನು ಅಭಿನಂದಿಸಿದರು ಎಂದು ಸಿಂಧೂರ ಅವರು ಹೇಳುವಾಗ, ಭ್ರಷ್ಟಾಚಾರದ ವಿರುದ್ಧ ಹೋರಾಡಿ ಗೆದ್ದ ಖುಷಿ, ಹೆಮ್ಮೆ ಇತ್ತು.</p>.<p><strong>ಲಂಚದ ವಿರುದ್ಧ #ಮೀ– ಟೂ’</strong></p>.<p>ಲಂಚಬಾಕರ ವಿರುದ್ಧವೂ #ಮೀ– ಟೂ ಅಭಿಯಾನ ಶುರು ಮಾಡಬೇಕು. ಆಗ, ರೈತರ ಆತ್ಮಹತ್ಯೆ ಕಡಿಮೆಯಾಗಿ, ಸಮಾಜ ಸುಧಾರಣೆ ಕಾಣಲು ಸಾಧ್ಯ ಎನ್ನುತ್ತಾರೆ ದೂರು ನೀಡಲು ನೆರವಾದ ಹಾನಗಲ್ನ ಸಂಜಯ್ ಬಾಬುಸಾಹೇಬ ತೋರಣಗಟ್ಟಿ ಹಾಗೂ ದೂರುದಾರ ವೀರಣ್ಣ ಸಿಂಧೂರ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾವೇರಿ:</strong> ‘ಆತ್ಮಹತ್ಯೆ ಬಿಟ್ಟು ಬೇರೆ ದಾರಿಯೇ ಇಲ್ಲ’ ಎಂದು ರೈತರು ಅಲವತ್ತು ಕೊಂಡರೂ, ಸಬ್ಸಿಡಿ ಬಿಡುಗಡೆ ಮಾಡದ ಹಾನಗಲ್ಲಿನ ಕೃಷಿ ಇಲಾಖೆ ಸಹಾಯಕ ನಿರ್ದೇಶಕರು, ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ‘ದಾಳಿ’ ಬಳಿಕ 257 ರೈತರ ₹1.06 ಕೋಟಿ ಬಿಡುಗಡೆ ಮಾಡಿದ್ದಾರೆ. ದಾಳಿ ಪ್ರಭಾವಕ್ಕೆ ಜಿಲ್ಲೆಯ ಇತರ ಕಡೆಯ ಸಬ್ಸಿಡಿ ಹಣವೂ ಲಂಚ ಇಲ್ಲದೇ ಬಿಡುಗಡೆ ಆಗುತ್ತಿದೆ.</p>.<p>ಪ್ರಕರಣ: ಹಾನಗಲ್ನ ಡೀಲರ್ ವೀರಣ್ಣ ಸಿಂಧೂರ, 2016–17ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಇತರ ರೈತರಿಗೆ ಸರ್ಕಾರದ ಸಹಾಯಧನದಲ್ಲಿ ಕೃಷಿ ಉಪಕರಣಗಳನ್ನು ನೀಡಿದ್ದರು. ಈ ಸಬ್ಸಿಡಿ ಬಿಡುಗಡೆ ಮಾಡಲು ಅಂದಿನ ಸಹಾಯಕ ಕೃಷಿ ನಿರ್ದೇಶಕ ಡಾ. ಜಿ.ಬಸವರಾಜ ₹2 ಲಕ್ಷ ಲಂಚದ ಬೇಡಿಕೆ ಇಟ್ಟಿದ್ದರು. ಸತತ ಬರಗಾಲವಿದ್ದು, ಬಡ– ಪರಿಶಿಷ್ಟ ರೈತರಿಂದ ಹಣ ಸಂಗ್ರಹಿಸಿ ನೀಡಲು ಸಾಧ್ಯವಿಲ್ಲ ಎಂದು ಸಿಂಧೂರ ನಿರಾಕರಿಸಿದ್ದರು. ಆದರೆ, ಹಣ ಕೊಡದೇ ಕಡತಕ್ಕೆ ಸಹಿ ಹಾಕಲು ಸಾಧ್ಯವಿಲ್ಲ ಎಂದು ಆ ಅಧಿಕಾರಿ ಪಟ್ಟು ಹಿಡಿದಿದ್ದರು.</p>.<p>‘ನಾನು, ಬ್ಯಾಂಕ್ ಸಾಲ ಮಾಡಿ ಡೀಲರ್ಶಿಪ್ ಪಡೆದುಕೊಂಡಿದ್ದೆ. ಸತತ ಬರದಿಂದ ರೈತರೂ ಸಂಕಷ್ಟದಲ್ಲಿದ್ದರು. ಲಂಚ ನೀಡುವುದು ಅಸಾಧ್ಯ<br />ವಾಗಿತ್ತು. ಇತ್ತ ಬ್ಯಾಂಕ್ ಬಡ್ಡಿ ದಿನೇ ದಿನೇ ಹೆಚ್ಚಾಗುತ್ತಿತ್ತು. ರೈತರಿಗೂ ಕೈಸಾಲ. ನಮಗೆ ದಿಕ್ಕೇ ತೋಚದಾಯಿತು’ ಎಂದು ಸಿಂಧೂರ ಆ ದಿನಗಳನ್ನು ನೆನೆದರು.</p>.<p>‘ಒಂದು ದಿನ, ನಾನು ಮತ್ತು ರೈತರು ಅಧಿಕಾರಿ ಕಚೇರಿಗೆ ಹೋದೆವು. ನಮಗೆ ಆತ್ಮಹತ್ಯೆ ಬಿಟ್ಟು ಬೇರೆ ದಾರಿಯೇ ಇಲ್ಲ. ದಯವಿಟ್ಟು ಸಬ್ಸಿಡಿ ಮಂಜೂರು ಮಾಡಿ. ಜೀವ ಉಳಿಸಿ ಎಂದು ಅಲವತ್ತುಕೊಂಡೆವು. ಆದರೂ, ಕ್ಯಾರೇ ಎನ್ನಲಿಲ್ಲ’ ಎನ್ನುವಾಗ ಅವರ ಕಣ್ಣಾಲಿಗಳು ತೇವಗೊಂಡವು.</p>.<p>ಅವರ ಮಾತನ್ನು, ಅವರೊಂದಿಗಿದ್ದ ಡೀಲರ್ ಸಂಜಯ್ ಬಾಬುಸಾಹೇಬ ತೋರಣಗಟ್ಟಿ ಮುಂದುವರಿಸಿದರು.</p>.<p>‘ಆ ನೋವು ಹೇಳತೀರಲಾಗದು. ಹಣ ಮಾತ್ರವಲ್ಲ ಇನ್ನಷ್ಟು ಬೇಡಿಕೆಗಳನ್ನೂ ಪೂರೈಸಬೇಕಿತ್ತು. ಆದರೆ, ಆತ್ಮಹತ್ಯೆ ನಿರ್ಧಾರ ಬಿಟ್ಟು, ಎಸಿಬಿಗೆ ದೂರು ನೀಡಲು ನಿರ್ಧರಿಸಿದೆವು’ ಎಂದು ತಿಳಿಸಿದರು.</p>.<p>ಕೊನೆಗೂ, ಅವರು ಹಾವೇರಿಯ ಎಸಿಬಿ ಡಿವೈಎಸ್ಪಿ ಎಸ್.ಕೆ. ಪ್ರಹ್ಲಾದ್ ಹಾಗೂ ಇನ್ಸ್ಪೆಕ್ಟರ್ ಬಿ.ಕೆ. ಹಳಬಣ್ಣನವರ ಅವರನ್ನು ಭೇಟಿಯಾಗಿ, ಜನವರಿ 10ರಂದು ದೂರು ದಾಖಲಿಸಿದರು.</p>.<p>ಎಸಿಬಿ ಅಧಿಕಾರಿಗಳು, ಈ ದೂರನ್ನು ರಹಸ್ಯವಾಗಿಟ್ಟುಕೊಂಡರು. ಫೆಬ್ರುವರಿ 6ರಂದು ಬಲೆ ಬೀಸಿದಾಗ, ದೂರಿನ ಹೊರತಾಗಿಯೂ 257 ರೈತರ ಸಬ್ಸಿಡಿ ಬಾಕಿ ಇರುವುದು ಅವರ ಗಮನಕ್ಕೆ ಬಂತು. ಅಲ್ಲದೆ, ಇತರ ಕಡತಗಳನ್ನೂ ಇಲಾಖೆಯು ವಾರದೊಳಗೆ ವಿಲೇವಾರಿ ಮಾಡಿತು.</p>.<p>ಒಂದು ದಾಳಿಯಿಂದಾಗಿ ಜಿಲ್ಲೆಯ ಹಲವಾರು ಡೀಲರ್ಗಳು ಹಾಗೂ ರೈತರ ಸಬ್ಸಿಡಿ ಮಂಜೂರಾಯಿತು. ಸುಮಾರು 930 ರೈತರು ಹಾಗೂ ಇತರ ಡೀಲರ್ಗಳು ಕರೆ ಮಾಡಿ ತಮ್ಮನ್ನು ಅಭಿನಂದಿಸಿದರು ಎಂದು ಸಿಂಧೂರ ಅವರು ಹೇಳುವಾಗ, ಭ್ರಷ್ಟಾಚಾರದ ವಿರುದ್ಧ ಹೋರಾಡಿ ಗೆದ್ದ ಖುಷಿ, ಹೆಮ್ಮೆ ಇತ್ತು.</p>.<p><strong>ಲಂಚದ ವಿರುದ್ಧ #ಮೀ– ಟೂ’</strong></p>.<p>ಲಂಚಬಾಕರ ವಿರುದ್ಧವೂ #ಮೀ– ಟೂ ಅಭಿಯಾನ ಶುರು ಮಾಡಬೇಕು. ಆಗ, ರೈತರ ಆತ್ಮಹತ್ಯೆ ಕಡಿಮೆಯಾಗಿ, ಸಮಾಜ ಸುಧಾರಣೆ ಕಾಣಲು ಸಾಧ್ಯ ಎನ್ನುತ್ತಾರೆ ದೂರು ನೀಡಲು ನೆರವಾದ ಹಾನಗಲ್ನ ಸಂಜಯ್ ಬಾಬುಸಾಹೇಬ ತೋರಣಗಟ್ಟಿ ಹಾಗೂ ದೂರುದಾರ ವೀರಣ್ಣ ಸಿಂಧೂರ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>