<p><strong>ಹಾವೇರಿ:</strong> ‘ಕೇಂದ್ರ ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ನಲ್ಲಿ ಒಂದೇ ಮುದ್ರಿತ ಬಿಲ್ನಲ್ಲಿ ₹400ಅಥವಾ ಅಧಿಕ ಮೌಲ್ಯದ ಪೆಟ್ರೋಲ್/ ಡೀಸೆಲ್ ತುಂಬಿಸಿಕೊಳ್ಳವ ಗ್ರಾಹಕರಿಗೆ ಆಕರ್ಷಕ ಉಡುಗೊರೆ ಯೋಜನೆಯು ಡಿ.31ರವರೆಗೆ ಇರಲಿದ್ದು, ಗ್ರಾಹಕರು ಅವಕಾಶ ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಹಾವೇರಿ ಜಿಲ್ಲೆಯ ಇಂಡಿಯನ್ ಆಯಿಲ್ ಸೇಲ್ಸ್ ವ್ಯವಸ್ಥಾಪಕ ರಮೇಶ ನಾಯಕ ಹೇಳಿದರು.</p>.<p>ನಗರದ ಡಾ.ಶಿಮೂಶ ಪೆಟ್ರೋಲಿಯಂ ಬಂಕ್ನಲ್ಲಿ ಶನಿವಾರ ಏರ್ಪಡಿಸಿದ್ದ‘ತುಂಬಿಸಿ ಇಂಧನ, ಗೆಲ್ಲಿರಿ ಕಾರು’ ಕರಪತ್ರಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.</p>.<p>ಬಿಲ್ಸಂಖ್ಯೆ ಹಾಗೂ ಮೊತ್ತವನ್ನು ಎಸ್.ಎಂ.ಎಸ್ ಮಾಡಿದರೇ ಅದೃಷ್ಟವಂತರಿಗೆ ಒಂದು ಕಾರು, 16 ಬೈಕ್ಗಳು, ₹100 ಇತರೆ ಬಹುಮಾನಗಳು ಪ್ರತಿದಿನ ಹಾಗೂ ಪ್ರತಿವಾರ ವಿಜೇತರಿಗೆ ₹5000 ನಗದು ಗೆಲ್ಲಬಹುದಾಗಿದೆ ಎಂದು ಅವರು ತಿಳಿಸಿದರು.</p>.<p>ಗ್ರಾಹಕರ ಪರವಾಗಿ ಮಾತನಾಡಿದ ಎಸ್.ಎಫ್.ಎನ್ ಗಾಜಿಗೌಡ್ರ, ಪೆಟ್ರೋಲ್ ಬಂಕ್ಗಳು ಗ್ರಾಹಕ ಸ್ನೇಹಿಯಾಗಿರುಬೇಕು, ಇಂದು ಪೈಪೋಟಿ ಹೆಚ್ಚಾಗಿದೆ. ಇಂಧನ ಹಾಕುವವರು ಗ್ರಾಹಕರ ಜೊತೆಗೆ ಉತ್ತಮವಾಗಿ ನಡೆದುಕೊಳ್ಳಬೇಕು. ಗ್ರಾಹಕರಿಗಾಗಿ ಕಂಪನಿ ತಂದಿರುವ ಈ ಯೋಜನೆ ಉಪಯುಕ್ತವಾಗಿದೆ ಎಂದರು.</p>.<p>ನಗರಸಭಾ ಸದಸ್ಯ ಬಸವರಾಜ ಬೆಳವಡಿ, ಚನ್ನಪ್ಪ ಮಲ್ಲಾಡದ ಇದ್ದರು. ಡಾ.ಶಿಮೂಶ ಪೆಟ್ರೋಲಿಯಂ ಮಾಲೀಕಪರಮೇಶ್ವರಪ್ಪ ಮೇಗಳಮನಿ ಸ್ವಾಗತಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾವೇರಿ:</strong> ‘ಕೇಂದ್ರ ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ನಲ್ಲಿ ಒಂದೇ ಮುದ್ರಿತ ಬಿಲ್ನಲ್ಲಿ ₹400ಅಥವಾ ಅಧಿಕ ಮೌಲ್ಯದ ಪೆಟ್ರೋಲ್/ ಡೀಸೆಲ್ ತುಂಬಿಸಿಕೊಳ್ಳವ ಗ್ರಾಹಕರಿಗೆ ಆಕರ್ಷಕ ಉಡುಗೊರೆ ಯೋಜನೆಯು ಡಿ.31ರವರೆಗೆ ಇರಲಿದ್ದು, ಗ್ರಾಹಕರು ಅವಕಾಶ ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಹಾವೇರಿ ಜಿಲ್ಲೆಯ ಇಂಡಿಯನ್ ಆಯಿಲ್ ಸೇಲ್ಸ್ ವ್ಯವಸ್ಥಾಪಕ ರಮೇಶ ನಾಯಕ ಹೇಳಿದರು.</p>.<p>ನಗರದ ಡಾ.ಶಿಮೂಶ ಪೆಟ್ರೋಲಿಯಂ ಬಂಕ್ನಲ್ಲಿ ಶನಿವಾರ ಏರ್ಪಡಿಸಿದ್ದ‘ತುಂಬಿಸಿ ಇಂಧನ, ಗೆಲ್ಲಿರಿ ಕಾರು’ ಕರಪತ್ರಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.</p>.<p>ಬಿಲ್ಸಂಖ್ಯೆ ಹಾಗೂ ಮೊತ್ತವನ್ನು ಎಸ್.ಎಂ.ಎಸ್ ಮಾಡಿದರೇ ಅದೃಷ್ಟವಂತರಿಗೆ ಒಂದು ಕಾರು, 16 ಬೈಕ್ಗಳು, ₹100 ಇತರೆ ಬಹುಮಾನಗಳು ಪ್ರತಿದಿನ ಹಾಗೂ ಪ್ರತಿವಾರ ವಿಜೇತರಿಗೆ ₹5000 ನಗದು ಗೆಲ್ಲಬಹುದಾಗಿದೆ ಎಂದು ಅವರು ತಿಳಿಸಿದರು.</p>.<p>ಗ್ರಾಹಕರ ಪರವಾಗಿ ಮಾತನಾಡಿದ ಎಸ್.ಎಫ್.ಎನ್ ಗಾಜಿಗೌಡ್ರ, ಪೆಟ್ರೋಲ್ ಬಂಕ್ಗಳು ಗ್ರಾಹಕ ಸ್ನೇಹಿಯಾಗಿರುಬೇಕು, ಇಂದು ಪೈಪೋಟಿ ಹೆಚ್ಚಾಗಿದೆ. ಇಂಧನ ಹಾಕುವವರು ಗ್ರಾಹಕರ ಜೊತೆಗೆ ಉತ್ತಮವಾಗಿ ನಡೆದುಕೊಳ್ಳಬೇಕು. ಗ್ರಾಹಕರಿಗಾಗಿ ಕಂಪನಿ ತಂದಿರುವ ಈ ಯೋಜನೆ ಉಪಯುಕ್ತವಾಗಿದೆ ಎಂದರು.</p>.<p>ನಗರಸಭಾ ಸದಸ್ಯ ಬಸವರಾಜ ಬೆಳವಡಿ, ಚನ್ನಪ್ಪ ಮಲ್ಲಾಡದ ಇದ್ದರು. ಡಾ.ಶಿಮೂಶ ಪೆಟ್ರೋಲಿಯಂ ಮಾಲೀಕಪರಮೇಶ್ವರಪ್ಪ ಮೇಗಳಮನಿ ಸ್ವಾಗತಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>