ಕರ್ನಾಟಕದಲ್ಲಿ ಸಂಪೂರ್ಣ ಪ್ರಾಣಿಬಲಿ ನಿಷೇಧ ಕಾಯ್ದೆ ಜಾರಿಗೆ ಬಂದು 63 ವರ್ಷಗಳು ಗತಿಸಿದರೂ, ಪ್ರತಿವರ್ಷ ರಾಜ್ಯದ ಸಾವಿರಾರು ಧಾರ್ಮಿಕ ಸ್ಥಳಗಳಲ್ಲಿ ಜಾತ್ರಾ ಪರಿಸರಗಳಲ್ಲಿ ಸುಮಾರು 1.5 ಕೋಟಿಗೂ ಹೆಚ್ಚು ಆಡು, ಕುರಿ, ಕೋಳಿ, ಕೋಣ, ಟಗರು, ಹಂದಿ, ಹಸು, ಕರು, ಎತ್ತು ಮುಂತಾದ ಪ್ರಾಣಿಗಳ ಮಾರಣಹೋಮ ರಾಜಾರೋಷವಾಗಿ ನಡೆಯುತ್ತಿದೆ ಎಂದು ವಿಷಾದಿಸಿದರು.