ಮೈಲಾರಲಿಂಗೇಶ್ವರ ದೇವಸ್ಥಾನದ ಬಾಬುದಾರರಾದ ಜಜ್ಜುರಿ ಲಿಂಗಪ್ಪ ಮಾತನಾಡಿ, ‘ಕಾರ್ಣಿಕ ಗೊರವಯ್ಯ 11 ದಿನ ಉಪವಾಸವಿದ್ದು, ರಥಸಪ್ತಮಿ ದಿನ ಸಂಜೆ 5.30ಕ್ಕೆ ಮೈಲಾರಲಿಂಗಪ್ಪನ ಬಿಲ್ಲನ್ನು ಏರಿ, ಮೈಲಾರಲಿಂಗ ಕೊಡುವ ವಾಣಿಯನ್ನು ನುಡಿಯುತ್ತಾರೆ. ಮಳೆ–ಬೆಳೆ ಮತ್ತು ರಾಜಕೀಯಕ್ಕೆ ಸಂಬಂಧಿಸಿದಂತೆ ವರ್ಷಕ್ಕೊಮ್ಮೆ ನುಡಿಯುವ ಈ ಕಾರ್ಣಿಕವನ್ನು ಭಕ್ತರು ಹಲವಾರು ವರ್ಷಗಳಿಂದ ನಂಬಿಕೊಂಡು ಬಂದಿದ್ದಾರೆ. ಆದರೆ, ವೆಂಕಪ್ಪಯ್ಯ ಒಡೆಯರ್ ಸುಳ್ಳು ಹೇಳಿಕೆ ನೀಡುವ ಮೂಲಕ ಭಕ್ತರಲ್ಲಿ ಗೊಂದಲ ಉಂಟು ಮಾಡುತ್ತಿದ್ದಾರೆ’ ಎಂದು ದೂರಿದರು.