ಆಗಸ್ 15 ರೊಳಗೆ ನಾಯಕತ್ವ ಬದಲಾವಣೆ ಎಂದು ಬಸನಗೌಡ ಪಾಟೀಲ ಯತ್ನಾಳ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿ, ಇದು ಹಾದಿ ಬೀದಿಯಲ್ಲಿ ತೀರ್ಮಾನಿಸುವ ವಿಚಾರವಲ್ಲ. ದಾರಿಯಲ್ಲಿ ಮಾತನಾಡಿ ನಾಯಕತ್ವ ಬದಲಿಸಲು ಸಾಧ್ಯವಿಲ್ಲ. ಶಾಸಕಾಂಗ ಸಭೆ ಇರುತ್ತದೆ. ಅಲ್ಲಿ ಚರ್ಚೆ ಮಾಡಿ, ತೀರ್ಮಾನಿಸುವಂಥದ್ದು. ಇದರಲ್ಲಿ ಯಾವುದೇ ಗೊಂದಲ ಬೇಡ ಎಂದು ವಿವಾದಾತ್ಮಕ ಹೇಳಿಕೆಗೆ ತೆರೆ ಎಳೆಯಲು ಯತ್ನಿಸಿದರು.