<p><strong>ಬ್ಯಾಡಗಿ</strong>: ಎಲ್ಲೆಂದರಲ್ಲಿ ಕಸ, ಕಿತ್ತು ಹೋದ ತಂತಿ ಬೇಲಿ, ತುಕ್ಕು ಹಿಡಿದ ಮಕ್ಕಳ ಆಟಿಕೆಗಳು, ನಿರ್ವಹಣೆ ಕೊರತೆಯಿಂದ ಸೊರಗಿದ ಮರಗಳು.</p>.<p>ಇದು ಪಟ್ಟಣದ ರೈಲ್ವೆ ನಿಲ್ದಾಣ ರಸ್ತೆಯಲ್ಲಿರುವ ಸುಭಾಷ ನಗರದ (ಜನತಾ ಪ್ಲಾಟ್) ಉದ್ಯಾನದ ದುಸ್ಥಿತಿ. ಬಡವರು ಹಾಗೂ ಮಧ್ಯಮ ವರ್ಗದವರೇ ಹೆಚ್ಚು ವಾಸವಿರುವ ಈ ನಗರದ ಅಭಿವೃದ್ಧಿ ಮರೀಚಿಕೆಯಾಗಿದೆ.</p>.<p>ಉದ್ಯಾನ ಅಭಿವೃದ್ಧಿಗೆ ಪುರಸಭೆ ದಿವ್ಯ ನಿರ್ಲಕ್ಷ್ಯ ವಹಿಸಿದೆ. ಅಕ್ಕ–ಪಕ್ಕದಲ್ಲಿ ಮನೆ ಕಟ್ಟುವ ಜನರು ಕಟ್ಟಡ ಸಾಮಗ್ರಿಗಳನ್ನು ಉದ್ಯಾನದಲ್ಲಿ ಹಾಕುತ್ತಿದ್ದಾರೆ. ಬೇಡವಾದ ತ್ಯಾಜ್ಯವನ್ನು ಇಲ್ಲಿಯೇ ಎಸೆಯುತ್ತಿದ್ದಾರೆ.</p>.<p>ಉದ್ಯಾನ ಬಳಿಯ ಚರಂಡಿಗಳು ಹೂಳು ತುಂಬಿಕೊಂಡು ದುರ್ನಾತ ಬೀರುತ್ತಿವೆ. ಸೊಳ್ಳೆಗಳ ಉತ್ಪತ್ತಿ ಹೆಚ್ಚುತ್ತಿದೆ. ಡೆಂಗಿಯಂಥ ಸಾಂಕ್ರಾಮಿಕ ಕಾಯಿಲೆ ಹರಡುವ ಭೀತಿ ಜನರಲ್ಲಿ ಕಾಡುತ್ತಿದೆ.</p>.<p>‘ಉದ್ಯಾನದಲ್ಲಿ ಎಸೆಯುವ ಘನ ತ್ಯಾಜ್ಯದಿಂದ ವಾತಾವರಣ ಹಾಳಾಗಿದ್ದು, ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ಕೈಕೊಳ್ಳಬೇಕಾಗಿದೆ. ಅಲ್ಲದೆ ಉದ್ಯಾನದ ಅಭಿವೃದ್ಧಿಗೆ ಪುರಸಭೆ ಮುಂದಾಗಬೇಕು‘ ಎಂದು ಸ್ಥಳೀಯ ನಿವಾಸಿ ಚಂದ್ರಶೇಖರ ಗದಗಕರ ಒತ್ತಾಯಿಸಿದರು.</p>.<p>‘ಇಲ್ಲಿಯ ದುಸ್ಥಿತಿಯ ಬಗ್ಗೆ ವಾರ್ಡ್ ಸದಸ್ಯರ ಗಮನಕ್ಕೆ ತರಲಾಗಿದೆ. ಶ್ರೀಮಂತರು ಹಾಗೂ ಪ್ರಭಾವಿಗಳು ಮಾತ್ರ ವಾಸವಿರುವ ಉದ್ಯಾನಗಳನ್ನು ಸಾಕಷ್ಟು ಅಭಿವೃದ್ಧಿಪಡಿಸಲಾಗಿದೆ. ಆದರೆ, ಬಡವರು ವಾಸಿಸುವ ಉದ್ಯಾನ ಜಾಗವನ್ನು ನಿರ್ಲಕ್ಷಿಸಲಾಗುತ್ತಿದೆ’ ಎಂದು ನಿವಾಸಿ ಸಂಜೀವ ಹಂಜಗಿ ದೂರಿದರು.</p>.<p>‘ಉದ್ಯಾನ ಜಾಗವನ್ನು ತಿಂಗಳಿಗೊಮ್ಮೆಯಾದರೂ ಸ್ವಚ್ಛಗೊಳಿಸಬೇಕು. ಉದ್ಯಾನದಲ್ಲಿ ಒಂದು ಕೊಳವೆ ಬಾವಿ ಕೊರೆಯಲಾಗಿದ್ದು, ಅದು ಸಹ ಬಂದ್ ಆಗಿದೆ. ಅದರ ದುರಸ್ತಿಗೆ ಪುರಸಭೆ ಕ್ರಮ ಕೈಗೊಂಡಿಲ್ಲ’ ಎಂದು ದೂರಿದರು.</p>.<p>‘ಮಕ್ಕಳ ಆಟದ ಸಾಮಗ್ರಿಗಳು ತುಕ್ಕು ಹಿಡಿದಿದ್ದು, ಅವೆಲ್ಲ ಕಿತ್ತು ಹೋಗಿವೆ. ಮೆಣಸಿನಕಾಯಿ ಚೀಲಗಳನ್ನು ಸಹ ಉದ್ಯಾನದಲ್ಲಿ ತಂದು ಹಾಕಲಾಗುತ್ತದೆ. ಅಂತಹ ವ್ಯಕ್ತಿಗಳಿಗೆ ದಂಡ ವಿಧಿಸಿದರೆ ಉಳಿದವರಿಗೆ ಭಯ ಹುಟ್ಟುತ್ತದೆ. ಈ ನಿಟ್ಟಿನಲ್ಲಿ ಪುರಸಭೆ ಜಾಗೃತರಾಗಬೇಕಾಗಿದೆ‘ ಎಂದು ನಿವಾಸಿ ಈರಪ್ಪ ಬಳಿಗಾರ ಹೇಳಿದರು.</p>.<div><blockquote>ಸುಭಾಷನಗರ ಉದ್ಯಾನದ ಅಭಿವೃದ್ಧಿ ಬಗ್ಗೆ ಸದಸ್ಯರ ಜೊತೆ ಚರ್ಚಿಸಿ ಕ್ರಮ ಜರುಗಿಸಲಾಗುವುದು. ಸ್ಥಳೀಯರು ಸಹ ಸ್ವಚ್ಛತೆಗಾಗಿ ನಮ್ಮೊಂದಿಗೆ ಸಹಕರಿಸಬೇಕು</blockquote><span class="attribution">ವಿನಯಕುಮಾರ ಹೊಳೆಯಪ್ಪಗೋಳ, ಮುಖ್ಯಾಧಿಕಾರಿ ಬ್ಯಾಡಗಿ ಪುರಸಭೆ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬ್ಯಾಡಗಿ</strong>: ಎಲ್ಲೆಂದರಲ್ಲಿ ಕಸ, ಕಿತ್ತು ಹೋದ ತಂತಿ ಬೇಲಿ, ತುಕ್ಕು ಹಿಡಿದ ಮಕ್ಕಳ ಆಟಿಕೆಗಳು, ನಿರ್ವಹಣೆ ಕೊರತೆಯಿಂದ ಸೊರಗಿದ ಮರಗಳು.</p>.<p>ಇದು ಪಟ್ಟಣದ ರೈಲ್ವೆ ನಿಲ್ದಾಣ ರಸ್ತೆಯಲ್ಲಿರುವ ಸುಭಾಷ ನಗರದ (ಜನತಾ ಪ್ಲಾಟ್) ಉದ್ಯಾನದ ದುಸ್ಥಿತಿ. ಬಡವರು ಹಾಗೂ ಮಧ್ಯಮ ವರ್ಗದವರೇ ಹೆಚ್ಚು ವಾಸವಿರುವ ಈ ನಗರದ ಅಭಿವೃದ್ಧಿ ಮರೀಚಿಕೆಯಾಗಿದೆ.</p>.<p>ಉದ್ಯಾನ ಅಭಿವೃದ್ಧಿಗೆ ಪುರಸಭೆ ದಿವ್ಯ ನಿರ್ಲಕ್ಷ್ಯ ವಹಿಸಿದೆ. ಅಕ್ಕ–ಪಕ್ಕದಲ್ಲಿ ಮನೆ ಕಟ್ಟುವ ಜನರು ಕಟ್ಟಡ ಸಾಮಗ್ರಿಗಳನ್ನು ಉದ್ಯಾನದಲ್ಲಿ ಹಾಕುತ್ತಿದ್ದಾರೆ. ಬೇಡವಾದ ತ್ಯಾಜ್ಯವನ್ನು ಇಲ್ಲಿಯೇ ಎಸೆಯುತ್ತಿದ್ದಾರೆ.</p>.<p>ಉದ್ಯಾನ ಬಳಿಯ ಚರಂಡಿಗಳು ಹೂಳು ತುಂಬಿಕೊಂಡು ದುರ್ನಾತ ಬೀರುತ್ತಿವೆ. ಸೊಳ್ಳೆಗಳ ಉತ್ಪತ್ತಿ ಹೆಚ್ಚುತ್ತಿದೆ. ಡೆಂಗಿಯಂಥ ಸಾಂಕ್ರಾಮಿಕ ಕಾಯಿಲೆ ಹರಡುವ ಭೀತಿ ಜನರಲ್ಲಿ ಕಾಡುತ್ತಿದೆ.</p>.<p>‘ಉದ್ಯಾನದಲ್ಲಿ ಎಸೆಯುವ ಘನ ತ್ಯಾಜ್ಯದಿಂದ ವಾತಾವರಣ ಹಾಳಾಗಿದ್ದು, ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ಕೈಕೊಳ್ಳಬೇಕಾಗಿದೆ. ಅಲ್ಲದೆ ಉದ್ಯಾನದ ಅಭಿವೃದ್ಧಿಗೆ ಪುರಸಭೆ ಮುಂದಾಗಬೇಕು‘ ಎಂದು ಸ್ಥಳೀಯ ನಿವಾಸಿ ಚಂದ್ರಶೇಖರ ಗದಗಕರ ಒತ್ತಾಯಿಸಿದರು.</p>.<p>‘ಇಲ್ಲಿಯ ದುಸ್ಥಿತಿಯ ಬಗ್ಗೆ ವಾರ್ಡ್ ಸದಸ್ಯರ ಗಮನಕ್ಕೆ ತರಲಾಗಿದೆ. ಶ್ರೀಮಂತರು ಹಾಗೂ ಪ್ರಭಾವಿಗಳು ಮಾತ್ರ ವಾಸವಿರುವ ಉದ್ಯಾನಗಳನ್ನು ಸಾಕಷ್ಟು ಅಭಿವೃದ್ಧಿಪಡಿಸಲಾಗಿದೆ. ಆದರೆ, ಬಡವರು ವಾಸಿಸುವ ಉದ್ಯಾನ ಜಾಗವನ್ನು ನಿರ್ಲಕ್ಷಿಸಲಾಗುತ್ತಿದೆ’ ಎಂದು ನಿವಾಸಿ ಸಂಜೀವ ಹಂಜಗಿ ದೂರಿದರು.</p>.<p>‘ಉದ್ಯಾನ ಜಾಗವನ್ನು ತಿಂಗಳಿಗೊಮ್ಮೆಯಾದರೂ ಸ್ವಚ್ಛಗೊಳಿಸಬೇಕು. ಉದ್ಯಾನದಲ್ಲಿ ಒಂದು ಕೊಳವೆ ಬಾವಿ ಕೊರೆಯಲಾಗಿದ್ದು, ಅದು ಸಹ ಬಂದ್ ಆಗಿದೆ. ಅದರ ದುರಸ್ತಿಗೆ ಪುರಸಭೆ ಕ್ರಮ ಕೈಗೊಂಡಿಲ್ಲ’ ಎಂದು ದೂರಿದರು.</p>.<p>‘ಮಕ್ಕಳ ಆಟದ ಸಾಮಗ್ರಿಗಳು ತುಕ್ಕು ಹಿಡಿದಿದ್ದು, ಅವೆಲ್ಲ ಕಿತ್ತು ಹೋಗಿವೆ. ಮೆಣಸಿನಕಾಯಿ ಚೀಲಗಳನ್ನು ಸಹ ಉದ್ಯಾನದಲ್ಲಿ ತಂದು ಹಾಕಲಾಗುತ್ತದೆ. ಅಂತಹ ವ್ಯಕ್ತಿಗಳಿಗೆ ದಂಡ ವಿಧಿಸಿದರೆ ಉಳಿದವರಿಗೆ ಭಯ ಹುಟ್ಟುತ್ತದೆ. ಈ ನಿಟ್ಟಿನಲ್ಲಿ ಪುರಸಭೆ ಜಾಗೃತರಾಗಬೇಕಾಗಿದೆ‘ ಎಂದು ನಿವಾಸಿ ಈರಪ್ಪ ಬಳಿಗಾರ ಹೇಳಿದರು.</p>.<div><blockquote>ಸುಭಾಷನಗರ ಉದ್ಯಾನದ ಅಭಿವೃದ್ಧಿ ಬಗ್ಗೆ ಸದಸ್ಯರ ಜೊತೆ ಚರ್ಚಿಸಿ ಕ್ರಮ ಜರುಗಿಸಲಾಗುವುದು. ಸ್ಥಳೀಯರು ಸಹ ಸ್ವಚ್ಛತೆಗಾಗಿ ನಮ್ಮೊಂದಿಗೆ ಸಹಕರಿಸಬೇಕು</blockquote><span class="attribution">ವಿನಯಕುಮಾರ ಹೊಳೆಯಪ್ಪಗೋಳ, ಮುಖ್ಯಾಧಿಕಾರಿ ಬ್ಯಾಡಗಿ ಪುರಸಭೆ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>