ಬ್ಯಾಡಗಿ ತಾಲ್ಲೂಕು ಚಿಕ್ಕಬಾಸೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡ
ಸೊಂದೆ ಅರಸರಿಗೆ ಸಂತಾನ ಕರುಣಿಸಿದ ಗುರು ಸಿದ್ಧರಾಮೇಶ್ವರ
ಉತ್ತರ ಕನ್ನಡ ಜಿಲ್ಲೆಯ ಸಾಮಂತ ಸೊಂದೆಯ ಅರಸರು ಬೇಟೆಯಾಡುತ್ತಾ ಈ ಭಾಗಕ್ಕೆ ಬಂದಾಗ ಗುಹೆಯಲ್ಲಿ ದೊರೆಗೆ ಊಟ ಮಾಡಿಸಿ ಯೋಗಕ್ಷೇಮ ವಿಚಾರಿಸಿದಾಗ ಅರಸನಿಗೆ ಪುತ್ರ ಸಂತಾನವಿಲ್ಲದ್ದು ತಿಳಿದುಬರುತ್ತದೆ. ವರ್ಷದೊಳಗೆ ಗಂಡು ಸಂತಾನವಾಗುತ್ತದೆ ಎಂದು ಆಶೀರ್ವದಿಸಿದ್ದರಂತೆ. ಹೀಗಾಗಿ ಭಕ್ತನ ಒತ್ತಾಯವನ್ನು ತಿರಸ್ಕರಿಸಲಾಗದೇ ಸಿದ್ಧರಾಮೇಶ್ವರರು ಲಿಂಗಪೂಜೆಗಾಗಿ ಕಲ್ಲಿನ ಬಾವಿಯನ್ನು ನಿರ್ಮಿಸಿ ಹೂವಿನ ತೋಟ ವಾಸವಾಗಿರಲು ಕಲ್ಲಿನ ಮಂಟಪ ಹಾಗೂ ಮಂಚವೊಂದನ್ನು ಸಿದ್ಧರಾಮೇಶ್ವರಿಗೆ ನಿರ್ಮಿಸಿಕೊಟ್ಟಿದ್ದರೆನ್ನುವುದು ಶಾಸನದಿಂದ ತಿಳಿದು ಬರುತ್ತದೆ. 14ರಿಂದ ಜಯಂತಿ: ಬ್ಯಾಡಗಿ ತಾಲ್ಲೂಕಿನ ಚಿಕ್ಕಬಾಸೂರ ಗ್ರಾಮದಲ್ಲಿ ಸಿದ್ಧರಾಮೇಶ್ವರರ ರಾಜ್ಯ ಮಟ್ಟದ ಜಯಂತಿ ಕಾರ್ಯಕ್ರಮ ಜ.14ರಿಂದ ಎರಡು ದಿನಗಳ ವರೆಗೆ ನಡೆಯಲಿದೆ.