<p><strong>ಹಾವೇರಿ: </strong>ಕೆವಿಜಿ ಬ್ಯಾಂಕ್ ಮ್ಯಾನೇಜರ್, ಕೆ.ಎಸ್.ಆರ್.ಪಿ. ಸಿಬ್ಬಂದಿ, ಬಿಸಿಎಂ ಇಲಾಖೆ ವಾಹನ ಚಾಲಕ, ಗ್ರಾಮ ವಿದ್ಯುತ್ ಪ್ರತಿನಿಧಿ ಸೇರಿದಂತೆ ಜಿಲ್ಲೆಯಲ್ಲಿ ಮಂಗಳವಾರ 36 ಮಂದಿಗೆ ಕೋವಿಡ್-19 ದೃಢಪಟ್ಟಿದೆ ಹಾಗೂ 139 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ.</p>.<p>ಜಿಲ್ಲೆಯಲ್ಲಿ ಈವರೆಗೆ 1925 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಒಟ್ಟು 1237 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ ಹಾಗೂ ಮಂಗಳವಾರ ಮೂವರ ಸಾವು ಸೇರಿ ಒಟ್ಟಾರೆ 42 ಮಂದಿ ಕೋವಿಡ್ನಿಂದ ಮೃತಪಟ್ಟಿದ್ದಾರೆ. ಒಟ್ಟಾರೆ 646 ಸಕ್ರಿಯ ಪ್ರಕರಣಗಳಿವೆ.</p>.<p>ಮಂಗಳವಾರ ದೃಢಗೊಂಡ ಪ್ರಕರಣಗಳಲ್ಲಿ ಹಾವೇರಿ-10, ರಾಣೆಬೆನ್ನೂರು-7, ಶಿಗ್ಗಾವಿ, ಹಾನಗಲ್ ಹಾಗೂ ಹಿರೇಕೆರೂರಿನಲ್ಲಿ ತಲಾ 5 , ಸವಣೂರು-4 ಮಂದಿಗೆ ಸೋಂಕು ದೃಢಪಟ್ಟಿದೆ.</p>.<p>ಗುಣಮುಖ:ಕೋವಿಡ್ನಿಂದ ಗುಣಮುಖರಾಗಿ ರಾಣೆಬೆನ್ನೂರು-76, ಹಿರೇಕೆರೂರು-27, ಹಾವೇರಿ-19, ಬ್ಯಾಡಗಿ-14 ಹಾಗೂ ಹಾನಗಲ್ ತಾಲ್ಲೂಕಿನ ಮೂವರು ಬಿಡುಗಡೆ ಹೊಂದಿದ್ದಾರೆ.</p>.<p class="Subhead"><strong>ಸೋಂಕಿತರ ವಿವರ:</strong>ಹಾವೇರಿ ಪಟ್ಟಣ, ಬೆಳವಗಿ, ಕನವಳ್ಳಿ, ಕೋಳೂರು, ನಾಗನೂರ ಗ್ರಾಮ, ರಾಣೆಬೆನ್ನೂರ ಪಟ್ಟಣ ಹಾಗೂ ಅರೇಮಲ್ಲಾಪೂರದಲ್ಲಿ 1, ಅಕ್ಕಿಆಲೂರು-2, ಹಾನಗಲ್, ಶಂಕ್ರಿಕೊಪ್ಪ, ಡೊಳ್ಳಶ್ವರದಲ್ಲಿ ತಲಾ ಒಂದು ಪ್ರಕರಣ, ಶಿಗ್ಗಾವಿ ಹಾಗೂ ಗಂಗೀಬಾವಿ ಗ್ರಾಮದಲ್ಲಿ ಒಂದು ಪ್ರಕರಣ, ತೆವರಮೆಳ್ಳಿಹಳ್ಳಿ-2, ಚಿಲ್ಲೂರಬಡ್ನಿ, ಹಿರೇಮೆಳ್ಳಿಹಳ್ಳಿ ತಲಾ ಒಂದು ಪ್ರಕರಣ, ರಟ್ಟೀಹಳ್ಳಿಯಲ್ಲಿ-3, ಹಿರೇಕೆರೂರು, ಹಿರೇಮೊರಬದಲ್ಲಿ ತಲಾ ಒಂದು ಪ್ರಕರಣಗಳು ಪತ್ತೆಯಾಗಿವೆ.</p>.<p class="Subhead"><strong>ಮರಣದ ವಿವರ:</strong>ಹಾವೇರಿ ತಾಲ್ಲೂಕಿನ ಕನವಳ್ಳಿ ಗ್ರಾಮದ 42 ಪುರುಷ (ಪಿ-194147) ತೀವ್ರ ಉಸಿರಾಟದ ತೊಂದರೆಯಿಂದ ಆಗಸ್ಟ್ 7ರಂದು ಜಿಲ್ಲಾ ಆಸ್ಪತ್ರೆ ದಾಖಲಾಗಿದ್ದರು. ರ್ಯಾಪಿಡ್ ಆ್ಯಂಟಿಜೆನ್ ಪರೀಕ್ಷೆಯಲ್ಲಿ ಪಾಸಿಟಿವ್ ದೃಢಪಟ್ಟಿದ್ದು, ಅಂದೇ ಮೃತಪಟ್ಟಿದ್ದಾರೆ.</p>.<p>ಹಾವೇರಿ ನಗರದ ಪುರದ ಓಣಿಯ 70 ವರ್ಷದ ಮಹಿಳೆ (ಪಿ-194153) ತೀವ್ರ ಉಸಿರಾಟದ ತೊಂದರೆಯಿಂದ ಆಗಸ್ಟ್ 9ರಂದು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ರ್ಯಾಪಿಡ್ ಆ್ಯಂಟಿಜೆನ್ ಪರೀಕ್ಷೆಯಲ್ಲಿ ಪಾಸಿಟಿವ್ ದೃಢಪಟ್ಟಿದ್ದು, ಅಂದೇ ಮೃತಪಟ್ಟಿದ್ದಾರೆ.</p>.<p>ರಾಣೆಬೆನ್ನೂರ ತಾಲ್ಲೂಕು ಉಮಾಶಂಕರ ನಗರದ 62 ವರ್ಷದ ಮಹಿಳೆ (ಪಿ-1119878) ತೀವ್ರ ಉಸಿರಾಟದ ತೊಂದರೆಯಿಂದ ಜುಲೈ 24ರಂದು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ರ್ಯಾಪಿಡ್ ಆ್ಯಂಟಿಜೆನ್ ಪರೀಕ್ಷೆಯಲ್ಲಿ ದೃಢಪಟ್ಟಿದ್ದು, ಜುಲೈ 26ರಂದು ಮೃತಪಟ್ಟಿದ್ದಾರೆ. ಮೂವರ ಅಂತ್ಯಸಂಸ್ಕಾರವನ್ನು ಕೋವಿಡ್ ನಿಯಮಾನುಸಾರ ನೆರವೇರಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾವೇರಿ: </strong>ಕೆವಿಜಿ ಬ್ಯಾಂಕ್ ಮ್ಯಾನೇಜರ್, ಕೆ.ಎಸ್.ಆರ್.ಪಿ. ಸಿಬ್ಬಂದಿ, ಬಿಸಿಎಂ ಇಲಾಖೆ ವಾಹನ ಚಾಲಕ, ಗ್ರಾಮ ವಿದ್ಯುತ್ ಪ್ರತಿನಿಧಿ ಸೇರಿದಂತೆ ಜಿಲ್ಲೆಯಲ್ಲಿ ಮಂಗಳವಾರ 36 ಮಂದಿಗೆ ಕೋವಿಡ್-19 ದೃಢಪಟ್ಟಿದೆ ಹಾಗೂ 139 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ.</p>.<p>ಜಿಲ್ಲೆಯಲ್ಲಿ ಈವರೆಗೆ 1925 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಒಟ್ಟು 1237 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ ಹಾಗೂ ಮಂಗಳವಾರ ಮೂವರ ಸಾವು ಸೇರಿ ಒಟ್ಟಾರೆ 42 ಮಂದಿ ಕೋವಿಡ್ನಿಂದ ಮೃತಪಟ್ಟಿದ್ದಾರೆ. ಒಟ್ಟಾರೆ 646 ಸಕ್ರಿಯ ಪ್ರಕರಣಗಳಿವೆ.</p>.<p>ಮಂಗಳವಾರ ದೃಢಗೊಂಡ ಪ್ರಕರಣಗಳಲ್ಲಿ ಹಾವೇರಿ-10, ರಾಣೆಬೆನ್ನೂರು-7, ಶಿಗ್ಗಾವಿ, ಹಾನಗಲ್ ಹಾಗೂ ಹಿರೇಕೆರೂರಿನಲ್ಲಿ ತಲಾ 5 , ಸವಣೂರು-4 ಮಂದಿಗೆ ಸೋಂಕು ದೃಢಪಟ್ಟಿದೆ.</p>.<p>ಗುಣಮುಖ:ಕೋವಿಡ್ನಿಂದ ಗುಣಮುಖರಾಗಿ ರಾಣೆಬೆನ್ನೂರು-76, ಹಿರೇಕೆರೂರು-27, ಹಾವೇರಿ-19, ಬ್ಯಾಡಗಿ-14 ಹಾಗೂ ಹಾನಗಲ್ ತಾಲ್ಲೂಕಿನ ಮೂವರು ಬಿಡುಗಡೆ ಹೊಂದಿದ್ದಾರೆ.</p>.<p class="Subhead"><strong>ಸೋಂಕಿತರ ವಿವರ:</strong>ಹಾವೇರಿ ಪಟ್ಟಣ, ಬೆಳವಗಿ, ಕನವಳ್ಳಿ, ಕೋಳೂರು, ನಾಗನೂರ ಗ್ರಾಮ, ರಾಣೆಬೆನ್ನೂರ ಪಟ್ಟಣ ಹಾಗೂ ಅರೇಮಲ್ಲಾಪೂರದಲ್ಲಿ 1, ಅಕ್ಕಿಆಲೂರು-2, ಹಾನಗಲ್, ಶಂಕ್ರಿಕೊಪ್ಪ, ಡೊಳ್ಳಶ್ವರದಲ್ಲಿ ತಲಾ ಒಂದು ಪ್ರಕರಣ, ಶಿಗ್ಗಾವಿ ಹಾಗೂ ಗಂಗೀಬಾವಿ ಗ್ರಾಮದಲ್ಲಿ ಒಂದು ಪ್ರಕರಣ, ತೆವರಮೆಳ್ಳಿಹಳ್ಳಿ-2, ಚಿಲ್ಲೂರಬಡ್ನಿ, ಹಿರೇಮೆಳ್ಳಿಹಳ್ಳಿ ತಲಾ ಒಂದು ಪ್ರಕರಣ, ರಟ್ಟೀಹಳ್ಳಿಯಲ್ಲಿ-3, ಹಿರೇಕೆರೂರು, ಹಿರೇಮೊರಬದಲ್ಲಿ ತಲಾ ಒಂದು ಪ್ರಕರಣಗಳು ಪತ್ತೆಯಾಗಿವೆ.</p>.<p class="Subhead"><strong>ಮರಣದ ವಿವರ:</strong>ಹಾವೇರಿ ತಾಲ್ಲೂಕಿನ ಕನವಳ್ಳಿ ಗ್ರಾಮದ 42 ಪುರುಷ (ಪಿ-194147) ತೀವ್ರ ಉಸಿರಾಟದ ತೊಂದರೆಯಿಂದ ಆಗಸ್ಟ್ 7ರಂದು ಜಿಲ್ಲಾ ಆಸ್ಪತ್ರೆ ದಾಖಲಾಗಿದ್ದರು. ರ್ಯಾಪಿಡ್ ಆ್ಯಂಟಿಜೆನ್ ಪರೀಕ್ಷೆಯಲ್ಲಿ ಪಾಸಿಟಿವ್ ದೃಢಪಟ್ಟಿದ್ದು, ಅಂದೇ ಮೃತಪಟ್ಟಿದ್ದಾರೆ.</p>.<p>ಹಾವೇರಿ ನಗರದ ಪುರದ ಓಣಿಯ 70 ವರ್ಷದ ಮಹಿಳೆ (ಪಿ-194153) ತೀವ್ರ ಉಸಿರಾಟದ ತೊಂದರೆಯಿಂದ ಆಗಸ್ಟ್ 9ರಂದು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ರ್ಯಾಪಿಡ್ ಆ್ಯಂಟಿಜೆನ್ ಪರೀಕ್ಷೆಯಲ್ಲಿ ಪಾಸಿಟಿವ್ ದೃಢಪಟ್ಟಿದ್ದು, ಅಂದೇ ಮೃತಪಟ್ಟಿದ್ದಾರೆ.</p>.<p>ರಾಣೆಬೆನ್ನೂರ ತಾಲ್ಲೂಕು ಉಮಾಶಂಕರ ನಗರದ 62 ವರ್ಷದ ಮಹಿಳೆ (ಪಿ-1119878) ತೀವ್ರ ಉಸಿರಾಟದ ತೊಂದರೆಯಿಂದ ಜುಲೈ 24ರಂದು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ರ್ಯಾಪಿಡ್ ಆ್ಯಂಟಿಜೆನ್ ಪರೀಕ್ಷೆಯಲ್ಲಿ ದೃಢಪಟ್ಟಿದ್ದು, ಜುಲೈ 26ರಂದು ಮೃತಪಟ್ಟಿದ್ದಾರೆ. ಮೂವರ ಅಂತ್ಯಸಂಸ್ಕಾರವನ್ನು ಕೋವಿಡ್ ನಿಯಮಾನುಸಾರ ನೆರವೇರಿಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>