<p><strong>ಹಾವೇರಿ: </strong>‘ಹರಪ್ಪ- ಮೆಹಂಜದಾರೊ ಕ್ರಿ.ಪೂ. 8000 ಸಾವಿರ ವರ್ಷಗಳ ಹಿಂದೆಯೇ ಸಿಂಧೂ ನಾಗರಿಕತೆ ಇತ್ತು ಎಂಬುದು ಅಧ್ಯಯನಗಳಿಂದ ಸಾಬೀತಾಗಿದೆ. ಈ ಸಿಂಧೂ ನಾಗರಿಕತೆಯೇ ಜಗತ್ತಿನ ಪುರಾತನ ನಾಗರಿಕತೆ ಎಂದು ಹೇಳಬೇಕಾಗುತ್ತದೆ. ಹರಪ್ಪ ನಾಗರಿಕತೆಯೊಂದಿಗೆ ಆಧುನಿಕ ನಾಗರಿಕತೆ ಬೆಳೆದು ಬಂದಿದೆ’ ಎಂದು ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ ಹೇಳಿದರು.</p>.<p>ಇಲ್ಲಿನ ಕಾಗಿನಲೆರಸ್ತೆಗೆ ಹೊಂದಿಕೊಂಡಿರುವ ಮುರುಘಾಮಠದಲ್ಲಿ ಚಂದ್ರಗುಪ್ತ ಮೌರ್ಯ ಫೌಂಡೇಶನ್ವತಿಯಿಂದ ಶನಿವಾರ ಆಯೋಜಿಸಿದ್ದ ಹರಪ್ಪ- ಮೆಹಂಜದಾರೊ ಜಿಲ್ಲಾ ಮಟ್ಟದ ವಿಚಾರ ಸಂಕಿರಣ ಮತ್ತು ಸಾಂಸ್ಕೃತಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಮನುಷ್ಯರಲ್ಲಿ ನಾಗರಿಕತೆಯ ಚಿಂತನೆಗಳು ಇರುವುದರಿಂದ ಕಾಲ–ಕಾಲಕ್ಕೆ ಧಾರ್ಮಿಕ ಚಿಂತಕರು ಆಯಾ ಕಾಲಘಟ್ಟದಲ್ಲಿ ಉದ್ಭವಿಸುವ ಮೂಲಕ ಅನಾಗರಿಕತೆಯ ಸಮತೋಲನವನ್ನು ಧಾರ್ಮಿಕ ರೂಪದಲ್ಲಿ ಬೆಳಗಿದ್ದಾರೆ. 12ನೇ ಶತಮಾನದಲ್ಲಿ ಬಸವಾದಿ ಶರಣರು ವೈಜ್ಞಾನಿಕ ತಳಹದಿಯ ಮೇಲೆ ನವ ನಾಗರಿಕತೆಯ ಸಮ-ಸಮಾಜವನ್ನು ವೈಜ್ಞಾನಿಕ ತಳಹದಿಯ ಮೇಲೆ ಕಟ್ಟಲು ಹೊರಟಿದ್ದಿದ್ದು ಸ್ಪಷ್ಟವಾಗುತ್ತದೆ’ ಎಂದು ಅವರು ಹೇಳಿದರು.</p>.<p>ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಪರಮೇಶ್ವರಪ್ಪ ಮೇಗಳಮನಿ ಮಾತನಾಡಿ, ‘ದಲಿತರನ್ನು ಪಶು-ಪಕ್ಷಿಗಳಿಗಿಂತ ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದ ಕಾಲದಲ್ಲಿ ಶರಣರು ಹಾಗೂ ಡಾ.ಅಂಬೇಡ್ಕರ ಅವರು ನಾಗರಿಕತೆಯ ಬಗ್ಗೆ ಜಾಗೃತಿ ಮೂಡಿಸುತ್ತಾ ಸಮ ಸಮಾಜವನ್ನು ನಿರ್ಮಿಸಲು ಶ್ರಮಿಸಿದ ಕಾರಣಕ್ಕೆ ಇಂದು ಉಸಿರಾಡುವ ವಾತಾವರಣ ಇದೆ’ ಎಂದರು.</p>.<p>ಪತ್ರಕರ್ತ ಪರಶುರಾಮ ಡೂಗನವರ ಉಪನ್ಯಾಸ ನೀಡಿದರು.ಚಂದ್ರಗುಪ್ತ ಮೌರ್ಯ ಫೌಂಡೇಶನ್ ಕಾರ್ಯದರ್ಶಿ ಎನ್.ಎನ್.ಗಾಳೆಮ್ಮನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಕಾರ್ಯಾಧ್ಯಕ್ಷ ತಿಮ್ಮಣ್ಣ ಹಿರೇಮನಿ, ವಕೀಲರಾದ ಬಸವರಾಜ ಹಾದಿಮನಿ, ರವಿ ಕಬಾಡಿ, ಸುಶೀಲಾ ಕೋಮನಾಳ, ಗಿರಿಜಮ್ಮ ಅಂಚಿ, ಮಂಜುನಾಥ ಹಸವಿ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾವೇರಿ: </strong>‘ಹರಪ್ಪ- ಮೆಹಂಜದಾರೊ ಕ್ರಿ.ಪೂ. 8000 ಸಾವಿರ ವರ್ಷಗಳ ಹಿಂದೆಯೇ ಸಿಂಧೂ ನಾಗರಿಕತೆ ಇತ್ತು ಎಂಬುದು ಅಧ್ಯಯನಗಳಿಂದ ಸಾಬೀತಾಗಿದೆ. ಈ ಸಿಂಧೂ ನಾಗರಿಕತೆಯೇ ಜಗತ್ತಿನ ಪುರಾತನ ನಾಗರಿಕತೆ ಎಂದು ಹೇಳಬೇಕಾಗುತ್ತದೆ. ಹರಪ್ಪ ನಾಗರಿಕತೆಯೊಂದಿಗೆ ಆಧುನಿಕ ನಾಗರಿಕತೆ ಬೆಳೆದು ಬಂದಿದೆ’ ಎಂದು ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ ಹೇಳಿದರು.</p>.<p>ಇಲ್ಲಿನ ಕಾಗಿನಲೆರಸ್ತೆಗೆ ಹೊಂದಿಕೊಂಡಿರುವ ಮುರುಘಾಮಠದಲ್ಲಿ ಚಂದ್ರಗುಪ್ತ ಮೌರ್ಯ ಫೌಂಡೇಶನ್ವತಿಯಿಂದ ಶನಿವಾರ ಆಯೋಜಿಸಿದ್ದ ಹರಪ್ಪ- ಮೆಹಂಜದಾರೊ ಜಿಲ್ಲಾ ಮಟ್ಟದ ವಿಚಾರ ಸಂಕಿರಣ ಮತ್ತು ಸಾಂಸ್ಕೃತಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಮನುಷ್ಯರಲ್ಲಿ ನಾಗರಿಕತೆಯ ಚಿಂತನೆಗಳು ಇರುವುದರಿಂದ ಕಾಲ–ಕಾಲಕ್ಕೆ ಧಾರ್ಮಿಕ ಚಿಂತಕರು ಆಯಾ ಕಾಲಘಟ್ಟದಲ್ಲಿ ಉದ್ಭವಿಸುವ ಮೂಲಕ ಅನಾಗರಿಕತೆಯ ಸಮತೋಲನವನ್ನು ಧಾರ್ಮಿಕ ರೂಪದಲ್ಲಿ ಬೆಳಗಿದ್ದಾರೆ. 12ನೇ ಶತಮಾನದಲ್ಲಿ ಬಸವಾದಿ ಶರಣರು ವೈಜ್ಞಾನಿಕ ತಳಹದಿಯ ಮೇಲೆ ನವ ನಾಗರಿಕತೆಯ ಸಮ-ಸಮಾಜವನ್ನು ವೈಜ್ಞಾನಿಕ ತಳಹದಿಯ ಮೇಲೆ ಕಟ್ಟಲು ಹೊರಟಿದ್ದಿದ್ದು ಸ್ಪಷ್ಟವಾಗುತ್ತದೆ’ ಎಂದು ಅವರು ಹೇಳಿದರು.</p>.<p>ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಪರಮೇಶ್ವರಪ್ಪ ಮೇಗಳಮನಿ ಮಾತನಾಡಿ, ‘ದಲಿತರನ್ನು ಪಶು-ಪಕ್ಷಿಗಳಿಗಿಂತ ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದ ಕಾಲದಲ್ಲಿ ಶರಣರು ಹಾಗೂ ಡಾ.ಅಂಬೇಡ್ಕರ ಅವರು ನಾಗರಿಕತೆಯ ಬಗ್ಗೆ ಜಾಗೃತಿ ಮೂಡಿಸುತ್ತಾ ಸಮ ಸಮಾಜವನ್ನು ನಿರ್ಮಿಸಲು ಶ್ರಮಿಸಿದ ಕಾರಣಕ್ಕೆ ಇಂದು ಉಸಿರಾಡುವ ವಾತಾವರಣ ಇದೆ’ ಎಂದರು.</p>.<p>ಪತ್ರಕರ್ತ ಪರಶುರಾಮ ಡೂಗನವರ ಉಪನ್ಯಾಸ ನೀಡಿದರು.ಚಂದ್ರಗುಪ್ತ ಮೌರ್ಯ ಫೌಂಡೇಶನ್ ಕಾರ್ಯದರ್ಶಿ ಎನ್.ಎನ್.ಗಾಳೆಮ್ಮನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಕಾರ್ಯಾಧ್ಯಕ್ಷ ತಿಮ್ಮಣ್ಣ ಹಿರೇಮನಿ, ವಕೀಲರಾದ ಬಸವರಾಜ ಹಾದಿಮನಿ, ರವಿ ಕಬಾಡಿ, ಸುಶೀಲಾ ಕೋಮನಾಳ, ಗಿರಿಜಮ್ಮ ಅಂಚಿ, ಮಂಜುನಾಥ ಹಸವಿ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>