<p><strong>ಹಾನಗಲ್:</strong> ಮೊಟ್ಟೆಗಳ ದರ ಏರಿಕೆಯಾಗಿದ್ದು, ಅಂಗನವಾಡಿಗಳ ಮೂಲಕ ಫಲಾನುಭವಿಗಳಿಗೆ ವಿತರಣೆಯಾಗುವ ಹೆಚ್ಚುವರಿ ಮೊತ್ತವನ್ನು ಕಾರ್ಯಕರ್ತೆಯರಿಗೆ ಜಮೆ ಮಾಡಬೇಕು ಎಂದು ಆಗ್ರಹಿಸಿ ಬುಧವಾರ ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಘಟಕದಿಂದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.</p>.<p>ಮೊಬೈಲಲ್ಲಿ ಪೋಷಣ್ ಟ್ರ್ಯಾಕರ್ಗೆ ಸಂಬಂಧಿಸಿದ ಕಾರ್ಯಕ್ರಮಗಳ ಕೆಲಸಗಳಿಗಾಗಿ ನೆಟ್ವರ್ಕ್ ಸಮಸ್ಯೆ ಸರಿಪಡಿಸಬೇಕು. ಇದರಿಂದ ಪೂರ್ಣ ಪ್ರಮಾಣದಲ್ಲಿ ಕೆಲಸ ಸಾಧ್ಯವಾಗಲಿದೆ. ಮೊಟ್ಟೆ ಬಿಲ್, ಗ್ಯಾಸ್ ಬಿಲ್ ಮುಂಗಡವಾಗಿ ಪಾವತಿಸಬೇಕು. ಗೌರವ ಧನವನ್ನು ಪ್ರತಿ ತಿಂಗಳ 5 ನೇ ದಿನಾಂಕದ ಒಳಗಾಗಿ ಜಮೆ ಮಾಡಬೇಕು ಎಂದು ಒತ್ತಾಯಿಸಲಾಗಿದೆ.</p>.<p>ಸಂಘದ ತಾಲ್ಲೂಕು ಘಟಕದ ಅಧ್ಯಕ್ಷೆ ರಾಜೇಶ್ವರಿ ಹಿರೇಮಠ, ಕಾರ್ಯದರ್ಶಿ ಸಿದ್ಧಮ್ಮ ಚೌಟಿ, ಕೋಶಾಧ್ಯಕ್ಷೆ ಸುನಿತಾ ದೊಡ್ಡಮನಿ, ಪ್ರಮುಖರಾದ ಶಾರದಾ ಶಿವಣ್ಣನವರ, ಕಮಲಾಕ್ಷಿ ಹೋತನಹಳ್ಳಿ, ಕುಸುಮಾ ಆಲದಕಟ್ಟಿ, ಗಿರಿಜಾ ದೊಡ್ಡಮನಿ, ಸುಮಿತ್ರಾ ಕೆರೆಕ್ಯಾತನಹಳ್ಳಿ, ಸುಮಂಗಲಾ ಕಮ್ಮಾರ, ಭುವನೇಶ್ವರಿ ಶೆಟ್ಟರ, ರೇಖಾ ವಿಭೂತಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾನಗಲ್:</strong> ಮೊಟ್ಟೆಗಳ ದರ ಏರಿಕೆಯಾಗಿದ್ದು, ಅಂಗನವಾಡಿಗಳ ಮೂಲಕ ಫಲಾನುಭವಿಗಳಿಗೆ ವಿತರಣೆಯಾಗುವ ಹೆಚ್ಚುವರಿ ಮೊತ್ತವನ್ನು ಕಾರ್ಯಕರ್ತೆಯರಿಗೆ ಜಮೆ ಮಾಡಬೇಕು ಎಂದು ಆಗ್ರಹಿಸಿ ಬುಧವಾರ ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಘಟಕದಿಂದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.</p>.<p>ಮೊಬೈಲಲ್ಲಿ ಪೋಷಣ್ ಟ್ರ್ಯಾಕರ್ಗೆ ಸಂಬಂಧಿಸಿದ ಕಾರ್ಯಕ್ರಮಗಳ ಕೆಲಸಗಳಿಗಾಗಿ ನೆಟ್ವರ್ಕ್ ಸಮಸ್ಯೆ ಸರಿಪಡಿಸಬೇಕು. ಇದರಿಂದ ಪೂರ್ಣ ಪ್ರಮಾಣದಲ್ಲಿ ಕೆಲಸ ಸಾಧ್ಯವಾಗಲಿದೆ. ಮೊಟ್ಟೆ ಬಿಲ್, ಗ್ಯಾಸ್ ಬಿಲ್ ಮುಂಗಡವಾಗಿ ಪಾವತಿಸಬೇಕು. ಗೌರವ ಧನವನ್ನು ಪ್ರತಿ ತಿಂಗಳ 5 ನೇ ದಿನಾಂಕದ ಒಳಗಾಗಿ ಜಮೆ ಮಾಡಬೇಕು ಎಂದು ಒತ್ತಾಯಿಸಲಾಗಿದೆ.</p>.<p>ಸಂಘದ ತಾಲ್ಲೂಕು ಘಟಕದ ಅಧ್ಯಕ್ಷೆ ರಾಜೇಶ್ವರಿ ಹಿರೇಮಠ, ಕಾರ್ಯದರ್ಶಿ ಸಿದ್ಧಮ್ಮ ಚೌಟಿ, ಕೋಶಾಧ್ಯಕ್ಷೆ ಸುನಿತಾ ದೊಡ್ಡಮನಿ, ಪ್ರಮುಖರಾದ ಶಾರದಾ ಶಿವಣ್ಣನವರ, ಕಮಲಾಕ್ಷಿ ಹೋತನಹಳ್ಳಿ, ಕುಸುಮಾ ಆಲದಕಟ್ಟಿ, ಗಿರಿಜಾ ದೊಡ್ಡಮನಿ, ಸುಮಿತ್ರಾ ಕೆರೆಕ್ಯಾತನಹಳ್ಳಿ, ಸುಮಂಗಲಾ ಕಮ್ಮಾರ, ಭುವನೇಶ್ವರಿ ಶೆಟ್ಟರ, ರೇಖಾ ವಿಭೂತಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>