ಹಾವೇರಿ: ‘ಪ್ರಧಾನಿ ನರೇಂದ್ರ ಮೋದಿ ಅವರು ಕೃಷಿಗೆ ಸಂಬಂಧಿಸಿದ ಮೂರು ಕರಾಳ ಕಾಯ್ದೆಗಳನ್ನು ಜಾರಿಗೊಳಿಸುವ ಮೂಲಕ, ಭೂಮಿ, ಮಾರುಕಟ್ಟೆ, ವಿದ್ಯುತ್ ಎಲ್ಲವನ್ನು ಬಂಡವಾಳಶಾಹಿಗಳ ಪಾಲು ಮಾಡುತ್ತಿದ್ದಾರೆ. ಅನ್ನದಾತರ ತಟ್ಟೆಗೆ ಕೈ ಹಾಕಿದ್ದಾರೆ, ದುಡಿಯುವ ಕೈಗಳನ್ನು ಕಟ್ಟಿ ಹಾಕಲು ಹೊರಟಿದ್ದಾರೆ’ ಎಂದು ರೈತ ಮುಖಂಡ ಕೆ.ಟಿ.ಗಂಗಾಧರ ಕಿಡಿಕಾರಿದರು.