ಕಾರ್ಯಾಧ್ಯಕ್ಷ ಕಿರಣ ಗಡಿಗೋಳ ಮಾತನಾಡಿ, ಪ್ರಸಕ್ತ ಮುಂಗಾರು ಹಂಗಾಮಿನ ಮೆಕ್ಕೆಜೋಳ ಕೊಯ್ಲಿಗೆ ಬಂದಿದ್ದು, ಶೀಘ್ರ ಖರೀದಿ ಕೇಂದ್ರವನ್ನು ಸ್ಥಾಪಿಸುವಂತೆ ಆಗ್ರಹಿಸಿದರು. ಪಟ್ಟಣದಲ್ಲಿ ಬಸ್ ಸಂಚಾರ ಎಂದಿನಂತೆ ಇತ್ತು. ಅಂಗಡಿ ಮುಂಗಟ್ಟುಗಳು ತೆರೆದಿದ್ದವು. ಚಿಕ್ಕಪ್ಪ ಛತ್ರದ , ಮೌನೇಶ ಕಮ್ಮಾರ, ಶಿವರುದ್ದರಪ್ಪ ಮೂಡೇರ, ಮಂಜು ತೋಟದ, ಬಿ.ಎಸ್.ಪಾಟೀಲ, ಪ್ರಕಾಶ ಸಿದ್ದಪ್ಪನವರ, ಮಲ್ಲೇಶಪ್ಪ ಡಂಬಳ ಪಾಲ್ಗೊಂಡಿದ್ದರು.