ಶಿಗ್ಗಾವಿ: ಆಕಸ್ಮಿಕವಾಗಿ ಬೆಂಕಿ ತಗುಲಿ ಶೆಡ್ಡಿನ ಮನೆ ಸೇರಿದಂತೆ ಮನೆಯಲ್ಲಿದ್ದ 50 ಗ್ರಾಂ. ಬಂಗಾರ, ₹20 ಸಾವಿರ ನಗದು, ಬಟ್ಟೆಗಳು ಸುಟ್ಟು ಕರಕಲಾದ ಘಟನೆ ತಾಲ್ಲೂಕಿನ ಚಂದಾಪುರ–ನೀರಲಕಟ್ಟಿ ತಾಂಡದಲ್ಲಿ ತಡವಾಗಿ ಗಮನಕ್ಕೆ ಬಂದಿದೆ.
ಪರಮೇಶ ತಿಪ್ಪಣ್ಣ ಲಮಾಣಿ ಎಂಬುವವರಿಗೆ ಸೇರಿದ ಶೆಡ್ಡಿನಮನೆ ಹಾನಿಯಾಗಿದ್ದು, ಅ.14ರಂದು ಮಧ್ಯರಾತ್ರಿ ಆಕಸ್ಮಿಕವಾಗಿ ಹೊತ್ತಿಕೊಂಡಿರುವ ಬೆಂಕಿಯಲ್ಲಿ ಸುಟ್ಟು ಕರಕಲಾಗಿದೆ. ಮನೆಯ ಸದಸ್ಯರು ಎರಡು ದಿನಗಳಿಂದ ಪಕ್ಕದ ಸರ್ಕಾರಿ ಶಾಲೆ ಆವರಣದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.