ಹೋರಿಗಳ ಕೊರಳಿಗೆ ಗೆಜ್ಜೆ ಕಟ್ಟಿದ ದಿನದಿಂದ ಅವುಗಳ ನಡತೆಯೇ ಬದಲಾಗುತ್ತದೆ. ಹೋರಿಗಳು ಚಿನ್ನಾಟವಾಡಲು ಆರಂಭಿಸುತ್ತವೆ. ನಾಡಿನ ಸಂಸ್ಕೃತಿ ಮತ್ತು ಪರಂಪರೆಯ ಧ್ಯೋತಕವಾಗಿ ‘ಹೋರಿ ಹಬ್ಬ’ವನ್ನು ಕೋವಿಡ್ ಮಾರ್ಗಸೂಚಿ ಪ್ರಕಾರ ಅಂತರ ಕಾಯ್ದುಕೊಂಡು, ಸರಳವಾಗಿ ಆಚರಿಸಲು ನಿರ್ಧರಿಸಿದ್ದೇವೆ. ಈಗಾಗಲೇ ಕೃಷಿ ಸಚಿವ, ಗೃಹ ಸಚಿವ, ಸಂಸದರ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದೇವೆ. ಹಾಗಾಗಿ ಅವಕಾಶ ಮಾಡಿಕೊಡಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.