‘ಲಾಕ್ಡೌನ್ನಿಂದ ಮಾರುಕಟ್ಟೆ ಬಂದ್ ಇದ್ದ ಕಾರಣ ಬೆಳೆದಿದ್ದ ಹೂ ಗಿಡಗಳನ್ನು ಟ್ರಾಕ್ಟರ್ ಮೂಲಕ ನಾಶಪಡಿಸಿದ್ದೆ. ನನ್ನಂತೆಯೇ ಗಣಜೂರ ಸುತ್ತಮುತ್ತಲಿನ ರೈತರು ಹೂಗಳನ್ನು ಬಿಡಿಸಿ, ಉತ್ತಮ ದರವಿಲ್ಲದ ಕಾರಣ ಬದುವಿನಲ್ಲೇ ಸುರಿದಿದ್ದರು. ಮಾಧ್ಯಮ ವರದಿಯಿಂದ ಸರ್ಕಾರ ಎಚ್ಚೆತ್ತುಕೊಂಡು, ಪುಷ್ಪ ಬೆಳೆಗಾರರ ನೆರವಿಗೆ ಧಾವಿಸಿರುವುದು ಸ್ವಾಗತಾರ್ಹ. ಬಿತ್ತನೆ ಬೀಜ, ರಸಗೊಬ್ಬರ, ಕೂಲಿಕಾರ್ಮಿಕರಿಗೆ ಭರಿಸಿದ ವೆಚ್ಚವಾದರೂ ಪರಿಹಾರದಿಂದ ಸಿಗುತ್ತದೆ ಎಂಬುದೇ ಸಮಾಧಾನ’ ಎಂದು ಗಣಜೂರು ರೈತ ಷಣ್ಮುಖ ಶಿವಪುತ್ರಪ್ಪ ಅಣಜಿ ತಿಳಿಸಿದ್ದಾರೆ.