<p><strong>ಹಾನಗಲ್</strong>: ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಮೇ 20ರಂದು ನಡೆಯುವ ರಾಜ್ಯದ ಒಂದು ಲಕ್ಷ ಕುಟುಂಬಗಳಿಗೆ ಕಂದಾಯ ಗ್ರಾಮ ಹಕ್ಕುಪತ್ರ ವಿತರಣೆ ಸಮಾರಂಭಕ್ಕೆ ಹಾನಗಲ್ ತಾಲ್ಲೂಕಿನಿಂದ ತೆರಳುವ ಫಲಾನುಭವಿಗಳಿಗೆ 40 ಸಾರಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ತಹಶೀಲ್ದಾರ್ ರೇಣುಕಾ.ಎಸ್ ಹೇಳಿದರು.</p>.<p>ಹಾನಗಲ್ ತಾಲ್ಲೂಕಿನ ಕಂದಾಯಗ್ರಾಮ ಹಕ್ಕುಪತ್ರ ಮತ್ತು ಪೋಡಿಮುಕ್ತ ಅಭಿಯಾನದ 2 ಸಾವಿರ ಫಲಾನುಭವಿಗಳು ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಶನಿವಾರ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.</p>.<p>ತಾಲ್ಲೂಕಿನ ಕೆಲವು ಜನವಸತಿ ಪ್ರದೇಶಗಳಿಗೆ ಕಂದಾಯ ಗ್ರಾಮ, ಕಂದಾಯ ಉಪಗ್ರಾಮ ಹಕ್ಕುಪತ್ರ ಲಭ್ಯವಾಗಲಿದೆ. ದಾಖಲೆ ಇಲ್ಲದ ಸ್ಥಳದಲ್ಲಿ ಮನೆ ಕಟ್ಟಿಕೊಂಡ 990 ಕುಟುಂಬಗಳಿಗೆ ಹಕ್ಕುಪತ್ರ ಮತ್ತು ಉಪನೊಂದಣಾಧಿಕಾರಿಯಲ್ಲಿ ನೋಂದಣಿಯಾದ ಖರೀದಿಪತ್ರ, ಇ-ಸ್ವತ್ತು ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.</p>.<p>ಹಳ್ಳಿಬೈಲ್, ಲಕ್ಷ್ಮೀಪೂರ, ಹುಲಗಿನಹಳ್ಳಿ, ಹರಳಕೊಪ್ಪ, ಉಪ್ಪಣಶಿ, ಕೊಂಡೋಜಿ, ತಿಳವಳ್ಳಿ, ಕಲಕೇರಿ, ಕೆಲವರಕೊಪ್ಪ, ಬಿಂಗಾಪೂರ, ಆಲದಕಟ್ಟಿ, ಅಕ್ಕಿವಳ್ಳಿ ಗ್ರಾಮಗಳ ಫಲಾನುಭವಿಗಳು ಹಕ್ಕುಪತ್ರ ಪಡೆಯಲಿದ್ದಾರೆ ಎಂದರು.</p>.<p>ಇಂತಹ ಇನ್ನೂ 7 ರಿಂದ 8 ಸಾವಿರ ಪ್ರಕರಣಗಳು ತಾಲ್ಲೂಕಿನಲ್ಲಿ ಇತ್ಯರ್ಥಕ್ಕೆ ಬಾಕಿ ಇವೆ. ಪೋಡಿಮುಕ್ತ ಅಭಿಯಾನದ 2300 ಫಲಾನುಭವಿಗಳ ಪೈಕಿ ಹೊಸಪೇಟೆ ಕಾರ್ಯಕ್ರಮಕ್ಕೆ 1 ಸಾವಿರ ಫಲಾನುಭವಿಗಳು ಪಾಲ್ಗೊಳ್ಳಲಿದ್ದಾರೆ ಎಂದು ರೇಣುಕಾ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾನಗಲ್</strong>: ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಮೇ 20ರಂದು ನಡೆಯುವ ರಾಜ್ಯದ ಒಂದು ಲಕ್ಷ ಕುಟುಂಬಗಳಿಗೆ ಕಂದಾಯ ಗ್ರಾಮ ಹಕ್ಕುಪತ್ರ ವಿತರಣೆ ಸಮಾರಂಭಕ್ಕೆ ಹಾನಗಲ್ ತಾಲ್ಲೂಕಿನಿಂದ ತೆರಳುವ ಫಲಾನುಭವಿಗಳಿಗೆ 40 ಸಾರಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ತಹಶೀಲ್ದಾರ್ ರೇಣುಕಾ.ಎಸ್ ಹೇಳಿದರು.</p>.<p>ಹಾನಗಲ್ ತಾಲ್ಲೂಕಿನ ಕಂದಾಯಗ್ರಾಮ ಹಕ್ಕುಪತ್ರ ಮತ್ತು ಪೋಡಿಮುಕ್ತ ಅಭಿಯಾನದ 2 ಸಾವಿರ ಫಲಾನುಭವಿಗಳು ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಶನಿವಾರ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.</p>.<p>ತಾಲ್ಲೂಕಿನ ಕೆಲವು ಜನವಸತಿ ಪ್ರದೇಶಗಳಿಗೆ ಕಂದಾಯ ಗ್ರಾಮ, ಕಂದಾಯ ಉಪಗ್ರಾಮ ಹಕ್ಕುಪತ್ರ ಲಭ್ಯವಾಗಲಿದೆ. ದಾಖಲೆ ಇಲ್ಲದ ಸ್ಥಳದಲ್ಲಿ ಮನೆ ಕಟ್ಟಿಕೊಂಡ 990 ಕುಟುಂಬಗಳಿಗೆ ಹಕ್ಕುಪತ್ರ ಮತ್ತು ಉಪನೊಂದಣಾಧಿಕಾರಿಯಲ್ಲಿ ನೋಂದಣಿಯಾದ ಖರೀದಿಪತ್ರ, ಇ-ಸ್ವತ್ತು ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.</p>.<p>ಹಳ್ಳಿಬೈಲ್, ಲಕ್ಷ್ಮೀಪೂರ, ಹುಲಗಿನಹಳ್ಳಿ, ಹರಳಕೊಪ್ಪ, ಉಪ್ಪಣಶಿ, ಕೊಂಡೋಜಿ, ತಿಳವಳ್ಳಿ, ಕಲಕೇರಿ, ಕೆಲವರಕೊಪ್ಪ, ಬಿಂಗಾಪೂರ, ಆಲದಕಟ್ಟಿ, ಅಕ್ಕಿವಳ್ಳಿ ಗ್ರಾಮಗಳ ಫಲಾನುಭವಿಗಳು ಹಕ್ಕುಪತ್ರ ಪಡೆಯಲಿದ್ದಾರೆ ಎಂದರು.</p>.<p>ಇಂತಹ ಇನ್ನೂ 7 ರಿಂದ 8 ಸಾವಿರ ಪ್ರಕರಣಗಳು ತಾಲ್ಲೂಕಿನಲ್ಲಿ ಇತ್ಯರ್ಥಕ್ಕೆ ಬಾಕಿ ಇವೆ. ಪೋಡಿಮುಕ್ತ ಅಭಿಯಾನದ 2300 ಫಲಾನುಭವಿಗಳ ಪೈಕಿ ಹೊಸಪೇಟೆ ಕಾರ್ಯಕ್ರಮಕ್ಕೆ 1 ಸಾವಿರ ಫಲಾನುಭವಿಗಳು ಪಾಲ್ಗೊಳ್ಳಲಿದ್ದಾರೆ ಎಂದು ರೇಣುಕಾ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>