ಸಾಂವಿಧಾನಿಕವಾಗಿ ಬದುಕೋಣ..: ‘ಕೇರಳದಲ್ಲಿ ಸಾಕಷ್ಟು ಮಂದಿ ಪ್ರತಿಭಾವಂತ ಕನ್ನಡಿಗರಿದ್ದಾರೆ. ಕನ್ನಡ ಶಾಲೆ ಇಲ್ಲದ ಕಾರಣ ಕನ್ನಡ ಕಲಿಕೆಯಿಂದ ವಂಚಿತರಾಗುತ್ತಿದ್ದಾರೆ. ಕನ್ನಡ ಶಾಲೆಗಳನ್ನು ತೆರೆಯಲು ಅಲ್ಲಿಯ ಸರ್ಕಾರ ಕಠೋರವಾಗಿ ವರ್ತಿಸುತ್ತಿದೆ. ಜಾಣಕುರುಡುತನ ಬಿಟ್ಟು, ಕನ್ನಡ ಶಾಲೆ ಕಟ್ಟಿ, ಶಿಕ್ಷಕರನ್ನು ನೇಮಕ ಮಾಡಬೇಕು’ ಎಂದು ಆಗ್ರಹಿಸಿದ ಡಾ. ದೊಡ್ಡರಂಗೇಗೌಡ, ಪು.ತಿ.ನ ಅವರ ‘ಗುಡಿಯಾಚೆ, ಗಡಿಯಾಚೆ ಕನ್ನಡ ಕಟ್ಟೋಣ’ ಕವನದ ಸಾಲನ್ನು ವಾಚಿಸಿ, ‘ಅಂತಹ ಮಧುರ ಮೈತ್ರಿಗೆ ನಾಂದಿಯಾಗಿ, ಸಾಂವಿಧಾನಿಕವಾಗಿ ಬದುಕೋಣ’ ಎಂದು ಆಶಿಸಿದರು.