<p><strong>ಹಾವೇರಿ:</strong> ಬಸ್, ಜಾತ್ರೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮೊಬೈಲ್ ಕಳೆದುಕೊಂಡಿದ್ದ 245 ಮಂದಿಯ ಮೊಬೈಲ್ ಪತ್ತೆ ಮಾಡಿರುವ ಪೊಲೀಸರು, ದೂರುದಾರರಿಗೆ ಮೊಬೈಲ್ ವಾಪಾಸು ಕೊಟ್ಟಿದ್ದಾರೆ.</p><p>ಜಿಲ್ಲೆಯ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಜನರು ಮೊಬೈಲ್ ಕಳೆದುಕೊಂಡಿದ್ದರು. ಈ ಬಗ್ಗೆ ಇ-ಲಾಸ್ಟ್ ಹಾಗೂ ಕೇಂದ್ರ ಸರ್ಕಾರದ ಸಿಇಐಆರ್ ಜಾಲತಾಣದಲ್ಲಿ ದೂರು ದಾಖಲಿಸಿದ್ದರು. </p><p>ಕಳ್ಳತನವಾಗಿದ್ದ ಮೊಬೈಲ್ಗಳನ್ನು ಆರೋಪಿಗಳು, ಹಲವೆಡೆ ಮಾರಿದ್ದರು. ಅವುಗಳನ್ನು ಪತ್ತೆ ಮಾಡಿರುವ ಪೊಲೀಸರು, ಗ್ರಾಹಕರಿಂದ ಮೊಬೈಲ್ ಜಪ್ತಿ ಮಾಡಿ ದೂರುದಾರರಿಗೆ ವಾಪಸು ನೀಡಿದ್ದಾರೆ.</p><p>ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಎಸ್ಪಿ ಅಂಶುಕುಮಾರ್ ಹಾಗೂ ಹೆಚ್ಚುವರಿ ಎಸ್ಪಿ ಸಿ.ಗೋಪಾಲ್ ಅವರು ದೂರುದಾರರಿಗೆ ಮೊಬೈಲ್ ಹಸ್ತಾಂತರಿಸಿದರು.</p><p><strong>ಆರೋಪಿಗಳ ಬಂಧನವಿಲ್ಲ:</strong> ಮೊಬೈಲ್ ಕಳ್ಳತನ ಮಾಡಿದ್ದ ಆರೋಪಿಗಳನ್ನು ಪೊಲೀಸರು ಇದುವರೆಗೂ ಬಂಧನ ಮಾಡಿಲ್ಲ. ಕೇವಲ ಮೊಬೈಲ್ ಖರೀದಿಸಿದ್ದ ಗ್ರಾಹಕರನ್ನು ಮಾತ್ರ ಪತ್ತೆ ಮಾಡಿ, ಅವರಿಂದ ಮೊಬೈಲ್ ಜಪ್ತಿ ಮಾಡಿದ್ದಾರೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾವೇರಿ:</strong> ಬಸ್, ಜಾತ್ರೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮೊಬೈಲ್ ಕಳೆದುಕೊಂಡಿದ್ದ 245 ಮಂದಿಯ ಮೊಬೈಲ್ ಪತ್ತೆ ಮಾಡಿರುವ ಪೊಲೀಸರು, ದೂರುದಾರರಿಗೆ ಮೊಬೈಲ್ ವಾಪಾಸು ಕೊಟ್ಟಿದ್ದಾರೆ.</p><p>ಜಿಲ್ಲೆಯ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಜನರು ಮೊಬೈಲ್ ಕಳೆದುಕೊಂಡಿದ್ದರು. ಈ ಬಗ್ಗೆ ಇ-ಲಾಸ್ಟ್ ಹಾಗೂ ಕೇಂದ್ರ ಸರ್ಕಾರದ ಸಿಇಐಆರ್ ಜಾಲತಾಣದಲ್ಲಿ ದೂರು ದಾಖಲಿಸಿದ್ದರು. </p><p>ಕಳ್ಳತನವಾಗಿದ್ದ ಮೊಬೈಲ್ಗಳನ್ನು ಆರೋಪಿಗಳು, ಹಲವೆಡೆ ಮಾರಿದ್ದರು. ಅವುಗಳನ್ನು ಪತ್ತೆ ಮಾಡಿರುವ ಪೊಲೀಸರು, ಗ್ರಾಹಕರಿಂದ ಮೊಬೈಲ್ ಜಪ್ತಿ ಮಾಡಿ ದೂರುದಾರರಿಗೆ ವಾಪಸು ನೀಡಿದ್ದಾರೆ.</p><p>ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಎಸ್ಪಿ ಅಂಶುಕುಮಾರ್ ಹಾಗೂ ಹೆಚ್ಚುವರಿ ಎಸ್ಪಿ ಸಿ.ಗೋಪಾಲ್ ಅವರು ದೂರುದಾರರಿಗೆ ಮೊಬೈಲ್ ಹಸ್ತಾಂತರಿಸಿದರು.</p><p><strong>ಆರೋಪಿಗಳ ಬಂಧನವಿಲ್ಲ:</strong> ಮೊಬೈಲ್ ಕಳ್ಳತನ ಮಾಡಿದ್ದ ಆರೋಪಿಗಳನ್ನು ಪೊಲೀಸರು ಇದುವರೆಗೂ ಬಂಧನ ಮಾಡಿಲ್ಲ. ಕೇವಲ ಮೊಬೈಲ್ ಖರೀದಿಸಿದ್ದ ಗ್ರಾಹಕರನ್ನು ಮಾತ್ರ ಪತ್ತೆ ಮಾಡಿ, ಅವರಿಂದ ಮೊಬೈಲ್ ಜಪ್ತಿ ಮಾಡಿದ್ದಾರೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>