<p><strong>ಹಾವೇರಿ:</strong> ಇಲ್ಲಿಯ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಆಗಸ್ಟ್ 15ರಂದು ಸ್ವಾತಂತ್ರ್ಯೋತ್ಸವ ಆಚರಿಸಲು ಜಿಲ್ಲಾಡಳಿತ ತಯಾರಿ ಮಾಡುತ್ತಿದೆ. ಮಳೆಯಿಂದಾಗಿ ಮೈದಾನದ ಬಹುಪಾಲು ಜಾಗದಲ್ಲಿ ನೀರು ನಿಂತುಕೊಂಡು ಕೆಸರು ಹೆಚ್ಚಾಗಿದೆ. ಈ ಜಾಗಕ್ಕೆ ಬುಧವಾರ ಜಲ್ಲಿಕಲ್ಲು ಹಾಕುವ ಕೆಲಸ ನಡೆಯಿತು.</p>.<p>‘ಜಿಲ್ಲಾ ಕ್ರೀಡಾಂಗಣವನ್ನು ಸುಸಜ್ಜಿತ ಕ್ರೀಡಾಂಗಣವನ್ನಾಗಿ ಮಾಡಬೇಕು’ ಎಂದು ಸ್ಥಳೀಯರು ಹಲವು ವರ್ಷಗಳಿಂದ ಆಗ್ರಹಿಸುತ್ತಿದ್ದಾರೆ. ಆದರೆ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸುತ್ತಿಲ್ಲ. ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣ ಯೋಜನೆಯೂ ನನೆಗುದಿಗೆ ಬಿದ್ದಿದೆ.</p>.<p>ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ, ರಾಜ್ಯೋತ್ಸವ, ಜಿಲ್ಲಾ ಮಟ್ಟದ ಕ್ರೀಡಾಕೂಟ, ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಇತರೆ ಕ್ರೀಡಾಕೂಟಗಳನ್ನು ಮೈದಾನದಲ್ಲಿ ಆಯೋಜಿಸಲಾಗುತ್ತದೆ. ಆದರೆ, ಮೈದಾನದ ಅಭಿವೃದ್ಧಿಗೆ ಮಾತ್ರ ಜಿಲ್ಲಾಡಳಿತ ಆಸಕ್ತಿ ತೋರುತ್ತಿಲ್ಲ.</p>.<p>ಧ್ವಜಾರೋಹಣ ನೆಪದಲ್ಲಿ ತಾತ್ಕಾಲಿಕವಾಗಿ ಮೈದಾನಕ್ಕೆ ಜಲ್ಲಿಕಲ್ಲು ಹಾಕುವ ಅಧಿಕಾರಿಗಳು, ಮರುದಿನ ಮೈದಾನ ಹೇಗಿದೆ ಎಂಬುದನ್ನು ನೋಡುವುದಿಲ್ಲ. ವಾಯುವಿಹಾರಿಗಳು, ಕ್ರೀಡಾಪಟುಗಳು ಹಾಗೂ ವಿದ್ಯಾರ್ಥಿಗಳು, ಮೈದಾನದಲ್ಲಿರುವ ಕೆಸರಿನಲ್ಲಿ ವಿಹಾರ ಮಾಡುವ ಸ್ಥಿತಿ ಬಂದಿದೆ.</p>.<p>ಧಾರವಾಡ ಜಿಲ್ಲೆಯಿಂದ ವಿಭಜನೆಗೊಂಡು ಹೊಸ ಜಿಲ್ಲೆಯಾಗಿರುವ ಹಾವೇರಿಯಲ್ಲಿ ಸುಸಜ್ಜಿತ ಕ್ರೀಡಾಂಗಣವಿಲ್ಲ. ಜಿಲ್ಲಾ ಕ್ರೀಡಾಂಗಣವೂ ಸೌಲಭ್ಯಗಳಿಂದ ವಂಚಿತವಾಗಿದೆ. ಸುಸಜ್ಜಿತ ಶೌಚಾಲಯವಿಲ್ಲ. ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ. ಜೊತೆಗೆ, ಕ್ರೀಡಾಪಟುಗಳ ಅಭ್ಯಾಸಕ್ಕೂ ಅಗತ್ಯ ಪರಿಕರಗಳಿಲ್ಲವೆಂದು ಜನರು ದೂರುತ್ತಿದ್ದಾರೆ.</p>.<p><strong>ರಕ್ಷಣಾ ಪಡೆಗಳ ಅಭ್ಯಾಸ:</strong> ಮಳೆಯಿಂದಾಗಿ ಹಾಳಾದ ಮೈದಾನದಲ್ಲಿಯೇ ರಕ್ಷಣಾ ಪಡೆಗಳು ಬುಧವಾರ ಪಥಸಂಚಲನದ ಅಭ್ಯಾಸ ನಡೆಸಿದವು. ಪೊಲೀಸರು, ಗೃಹರಕ್ಷಕ ದಳ, ಅಗ್ನಿಶಾಮಕ ದಳ, ಎನ್ಸಿಸಿ ಹಾಗೂ ಇತರ ಪಡೆಗಳು ಅಭ್ಯಾಸದಲ್ಲಿದ್ದವು.</p>.<p>ಮೈದಾನದ ಬಹುಪಾಲು ಭಾಗದಲ್ಲಿ ನೀರು ನಿಂತು ಕೆಸರು ಹೆಚ್ಚಾಗಿತ್ತು. ಕೆಲ ಪಡೆಯ ಸದಸ್ಯರು, ಮೈದಾನದ ಮೂಲೆ ಸ್ಥಳದಲ್ಲಿ ಅಭ್ಯಾಸ ನಡೆಸಿದರು. ವಿದ್ಯಾರ್ಥಿಗಳು ಕೆಸರಿನಲ್ಲೇ ಪಥಸಂಚಲನದ ತಯಾರಿ ಮಾಡಿದರು.</p>.<p><strong>ನೃತ್ಯ ಅಭ್ಯಾಸಕ್ಕೆ ಕೆಸರು ಅಡ್ಡಿ:</strong> ಕ್ರೀಡಾಂಗಣದ ಮುಖ್ಯವೇದಿಕೆಯ ಎದುರಿನ ಸ್ಥಳದಲ್ಲಿಯೇ ನೀರು ನಿಂತು ಕೆಸರು ಹೆಚ್ಚಾಗಿದೆ. ಈ ಸ್ಥಳದಲ್ಲಿ ನೃತ್ಯ ಅಭ್ಯಾಸ ಮಾಡಲು ಅಸಾಧ್ಯವೆಂದು ಶಿಕ್ಷಕರು ಹೇಳಿದರು. ಹೀಗಾಗಿ, ಮಕ್ಕಳು ಬುಧವಾರ ನೃತ್ಯದ ಅಭ್ಯಾಸ ಮಾಡಲಿಲ್ಲ.</p>.<p>‘ಬುಧವಾರ ಇಡೀ ಮೈದಾನಕ್ಕೆ ಜಲ್ಲಿಕಲ್ಲು ಹಾಕಲಾಗುವುದು. ಇದರಿಂದಾಗಿ ಕೆಸರು ಇರುವುದಿಲ್ಲ. ಬಳಿಕ ಅಭ್ಯಾಸ ಮಾಡಿ’ ಎಂದು ತಾಲ್ಲೂಕು ಆಡಳಿತದ ಅಧಿಕಾರಿಗಳು ಶಿಕ್ಷಕರಿಗೆ ಹೇಳಿದರು. ಹೀಗಾಗಿ, ನೃತ್ಯ ಅಭ್ಯಾಸಕ್ಕೆ ಬಂದ ಮಕ್ಕಳು ವಾಪಸು ಹೋದರು. ಗುರುವಾರ ನೃತ್ಯ ಅಭ್ಯಾಸ ನಡೆಸುವುದಾಗಿ ಹೇಳಿದರು.</p>.<p><strong>‘ಸಚಿವ ಸಂಸದ ಶಾಸಕರ ವಿರುದ್ಧ ಆಕ್ರೋಶ’</strong> </p><p>‘ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಹಲವು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಸಂಸದ ಬಸವರಾಜ ಬೊಮ್ಮಾಯಿ ಹಾಗೂ ಇತರೆ ಶಾಸಕರು ಕ್ರೀಡಾಂಗಣದ ಅಭಿವೃದ್ಧಿಗೆ ಗಮನಹರಿಸುತ್ತಿಲ್ಲ’ ಎಂದು ವಾಯುವಿಹಾರಿಗಳು ಆಕ್ರೋಶ ಹೊರಹಾಕಿದ್ದಾರೆ. ‘ಕ್ರೀಡಾಂಗಣ ಹೇಗಿದೆ ? ಅಭಿವೃದ್ಧಿಗೆ ಏನು ಮಾಡಬೇಕು ? ಕ್ರೀಡಾಪಟುಗಳ ಅಭ್ಯಾಸ ಹೇಗೆ ನಡೆದಿದೆ ? ಕ್ರೀಡಾಕ್ಷೇತ್ರದಲ್ಲಿ ಸಾಧಕರನ್ನು ಹೇಗೆ ಸಿದ್ಧಪಡಿಸುವುದು ? ಎಂಬಿತ್ಯಾದಿ ಆಲೋಚನೆಗಳನ್ನು ಜನಪ್ರತಿನಿಧಿಗಳು ಮರೆತಿದ್ದಾರೆ. ಯಾರಾದರೂ ಕ್ರೀಡೆಯಲ್ಲಿ ಗೆದ್ದು ಬಂದರೆ ಮಾತ್ರ ಪ್ರಚಾರಕ್ಕಾಗಿ ಅವರನ್ನು ಸನ್ಮಾನಿಸುವ ಜನಪ್ರತಿನಿಧಿಗಳು ಕ್ರೀಡಾಂಗಣದ ಅಭಿವೃದ್ಧಿಗೆ ಶ್ರಮಿಸುತ್ತಿಲ್ಲ’ ಎಂದು ದೂರಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾವೇರಿ:</strong> ಇಲ್ಲಿಯ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಆಗಸ್ಟ್ 15ರಂದು ಸ್ವಾತಂತ್ರ್ಯೋತ್ಸವ ಆಚರಿಸಲು ಜಿಲ್ಲಾಡಳಿತ ತಯಾರಿ ಮಾಡುತ್ತಿದೆ. ಮಳೆಯಿಂದಾಗಿ ಮೈದಾನದ ಬಹುಪಾಲು ಜಾಗದಲ್ಲಿ ನೀರು ನಿಂತುಕೊಂಡು ಕೆಸರು ಹೆಚ್ಚಾಗಿದೆ. ಈ ಜಾಗಕ್ಕೆ ಬುಧವಾರ ಜಲ್ಲಿಕಲ್ಲು ಹಾಕುವ ಕೆಲಸ ನಡೆಯಿತು.</p>.<p>‘ಜಿಲ್ಲಾ ಕ್ರೀಡಾಂಗಣವನ್ನು ಸುಸಜ್ಜಿತ ಕ್ರೀಡಾಂಗಣವನ್ನಾಗಿ ಮಾಡಬೇಕು’ ಎಂದು ಸ್ಥಳೀಯರು ಹಲವು ವರ್ಷಗಳಿಂದ ಆಗ್ರಹಿಸುತ್ತಿದ್ದಾರೆ. ಆದರೆ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸುತ್ತಿಲ್ಲ. ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣ ಯೋಜನೆಯೂ ನನೆಗುದಿಗೆ ಬಿದ್ದಿದೆ.</p>.<p>ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ, ರಾಜ್ಯೋತ್ಸವ, ಜಿಲ್ಲಾ ಮಟ್ಟದ ಕ್ರೀಡಾಕೂಟ, ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಇತರೆ ಕ್ರೀಡಾಕೂಟಗಳನ್ನು ಮೈದಾನದಲ್ಲಿ ಆಯೋಜಿಸಲಾಗುತ್ತದೆ. ಆದರೆ, ಮೈದಾನದ ಅಭಿವೃದ್ಧಿಗೆ ಮಾತ್ರ ಜಿಲ್ಲಾಡಳಿತ ಆಸಕ್ತಿ ತೋರುತ್ತಿಲ್ಲ.</p>.<p>ಧ್ವಜಾರೋಹಣ ನೆಪದಲ್ಲಿ ತಾತ್ಕಾಲಿಕವಾಗಿ ಮೈದಾನಕ್ಕೆ ಜಲ್ಲಿಕಲ್ಲು ಹಾಕುವ ಅಧಿಕಾರಿಗಳು, ಮರುದಿನ ಮೈದಾನ ಹೇಗಿದೆ ಎಂಬುದನ್ನು ನೋಡುವುದಿಲ್ಲ. ವಾಯುವಿಹಾರಿಗಳು, ಕ್ರೀಡಾಪಟುಗಳು ಹಾಗೂ ವಿದ್ಯಾರ್ಥಿಗಳು, ಮೈದಾನದಲ್ಲಿರುವ ಕೆಸರಿನಲ್ಲಿ ವಿಹಾರ ಮಾಡುವ ಸ್ಥಿತಿ ಬಂದಿದೆ.</p>.<p>ಧಾರವಾಡ ಜಿಲ್ಲೆಯಿಂದ ವಿಭಜನೆಗೊಂಡು ಹೊಸ ಜಿಲ್ಲೆಯಾಗಿರುವ ಹಾವೇರಿಯಲ್ಲಿ ಸುಸಜ್ಜಿತ ಕ್ರೀಡಾಂಗಣವಿಲ್ಲ. ಜಿಲ್ಲಾ ಕ್ರೀಡಾಂಗಣವೂ ಸೌಲಭ್ಯಗಳಿಂದ ವಂಚಿತವಾಗಿದೆ. ಸುಸಜ್ಜಿತ ಶೌಚಾಲಯವಿಲ್ಲ. ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ. ಜೊತೆಗೆ, ಕ್ರೀಡಾಪಟುಗಳ ಅಭ್ಯಾಸಕ್ಕೂ ಅಗತ್ಯ ಪರಿಕರಗಳಿಲ್ಲವೆಂದು ಜನರು ದೂರುತ್ತಿದ್ದಾರೆ.</p>.<p><strong>ರಕ್ಷಣಾ ಪಡೆಗಳ ಅಭ್ಯಾಸ:</strong> ಮಳೆಯಿಂದಾಗಿ ಹಾಳಾದ ಮೈದಾನದಲ್ಲಿಯೇ ರಕ್ಷಣಾ ಪಡೆಗಳು ಬುಧವಾರ ಪಥಸಂಚಲನದ ಅಭ್ಯಾಸ ನಡೆಸಿದವು. ಪೊಲೀಸರು, ಗೃಹರಕ್ಷಕ ದಳ, ಅಗ್ನಿಶಾಮಕ ದಳ, ಎನ್ಸಿಸಿ ಹಾಗೂ ಇತರ ಪಡೆಗಳು ಅಭ್ಯಾಸದಲ್ಲಿದ್ದವು.</p>.<p>ಮೈದಾನದ ಬಹುಪಾಲು ಭಾಗದಲ್ಲಿ ನೀರು ನಿಂತು ಕೆಸರು ಹೆಚ್ಚಾಗಿತ್ತು. ಕೆಲ ಪಡೆಯ ಸದಸ್ಯರು, ಮೈದಾನದ ಮೂಲೆ ಸ್ಥಳದಲ್ಲಿ ಅಭ್ಯಾಸ ನಡೆಸಿದರು. ವಿದ್ಯಾರ್ಥಿಗಳು ಕೆಸರಿನಲ್ಲೇ ಪಥಸಂಚಲನದ ತಯಾರಿ ಮಾಡಿದರು.</p>.<p><strong>ನೃತ್ಯ ಅಭ್ಯಾಸಕ್ಕೆ ಕೆಸರು ಅಡ್ಡಿ:</strong> ಕ್ರೀಡಾಂಗಣದ ಮುಖ್ಯವೇದಿಕೆಯ ಎದುರಿನ ಸ್ಥಳದಲ್ಲಿಯೇ ನೀರು ನಿಂತು ಕೆಸರು ಹೆಚ್ಚಾಗಿದೆ. ಈ ಸ್ಥಳದಲ್ಲಿ ನೃತ್ಯ ಅಭ್ಯಾಸ ಮಾಡಲು ಅಸಾಧ್ಯವೆಂದು ಶಿಕ್ಷಕರು ಹೇಳಿದರು. ಹೀಗಾಗಿ, ಮಕ್ಕಳು ಬುಧವಾರ ನೃತ್ಯದ ಅಭ್ಯಾಸ ಮಾಡಲಿಲ್ಲ.</p>.<p>‘ಬುಧವಾರ ಇಡೀ ಮೈದಾನಕ್ಕೆ ಜಲ್ಲಿಕಲ್ಲು ಹಾಕಲಾಗುವುದು. ಇದರಿಂದಾಗಿ ಕೆಸರು ಇರುವುದಿಲ್ಲ. ಬಳಿಕ ಅಭ್ಯಾಸ ಮಾಡಿ’ ಎಂದು ತಾಲ್ಲೂಕು ಆಡಳಿತದ ಅಧಿಕಾರಿಗಳು ಶಿಕ್ಷಕರಿಗೆ ಹೇಳಿದರು. ಹೀಗಾಗಿ, ನೃತ್ಯ ಅಭ್ಯಾಸಕ್ಕೆ ಬಂದ ಮಕ್ಕಳು ವಾಪಸು ಹೋದರು. ಗುರುವಾರ ನೃತ್ಯ ಅಭ್ಯಾಸ ನಡೆಸುವುದಾಗಿ ಹೇಳಿದರು.</p>.<p><strong>‘ಸಚಿವ ಸಂಸದ ಶಾಸಕರ ವಿರುದ್ಧ ಆಕ್ರೋಶ’</strong> </p><p>‘ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಹಲವು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಸಂಸದ ಬಸವರಾಜ ಬೊಮ್ಮಾಯಿ ಹಾಗೂ ಇತರೆ ಶಾಸಕರು ಕ್ರೀಡಾಂಗಣದ ಅಭಿವೃದ್ಧಿಗೆ ಗಮನಹರಿಸುತ್ತಿಲ್ಲ’ ಎಂದು ವಾಯುವಿಹಾರಿಗಳು ಆಕ್ರೋಶ ಹೊರಹಾಕಿದ್ದಾರೆ. ‘ಕ್ರೀಡಾಂಗಣ ಹೇಗಿದೆ ? ಅಭಿವೃದ್ಧಿಗೆ ಏನು ಮಾಡಬೇಕು ? ಕ್ರೀಡಾಪಟುಗಳ ಅಭ್ಯಾಸ ಹೇಗೆ ನಡೆದಿದೆ ? ಕ್ರೀಡಾಕ್ಷೇತ್ರದಲ್ಲಿ ಸಾಧಕರನ್ನು ಹೇಗೆ ಸಿದ್ಧಪಡಿಸುವುದು ? ಎಂಬಿತ್ಯಾದಿ ಆಲೋಚನೆಗಳನ್ನು ಜನಪ್ರತಿನಿಧಿಗಳು ಮರೆತಿದ್ದಾರೆ. ಯಾರಾದರೂ ಕ್ರೀಡೆಯಲ್ಲಿ ಗೆದ್ದು ಬಂದರೆ ಮಾತ್ರ ಪ್ರಚಾರಕ್ಕಾಗಿ ಅವರನ್ನು ಸನ್ಮಾನಿಸುವ ಜನಪ್ರತಿನಿಧಿಗಳು ಕ್ರೀಡಾಂಗಣದ ಅಭಿವೃದ್ಧಿಗೆ ಶ್ರಮಿಸುತ್ತಿಲ್ಲ’ ಎಂದು ದೂರಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>