<p>ಸವಣೂರು: ನಿತ್ಯ ಒತ್ತಡದ ಜೀವನದಲ್ಲಿ ಸಮಾಜ, ಕುಟುಂಬದೊಂದಿಗೆ ಹೊಂದಾಣಿಕೆಯಿಂದ ವೈಯಕ್ತಿಕ ಆಸೆ ಬದಿಗಿರಿಸಿ ಮಾತೃ ಹೃದಯ ಹೊಂದಿರುವ ಹೆಣ್ಣು ಜೀವಕ್ಕೆ ಸರ್ವರ ಬೆಂಬಲ ಅವಶ್ಯವಾಗಿದೆ ಎಂದು ಪ್ರಭಾರ ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ ತಿಳಿಸಿದರು.</p>.<p>ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜೆಸಿಐ ನಮ್ಮ ಸವಣೂರು ಘಟಕ ಸಹಯೋಗದಲ್ಲಿ ಪಟ್ಟಣದ ಸ್ತ್ರೀ ಶಕ್ತಿ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ರಾಷ್ಟ್ರೀಯ ಹೆಣ್ಣು ಮಗುವಿನ ದಿನ ಆಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.</p>.<p>ಹುಟ್ಟಿನಿಂದ ಸಾವಿನವರಿಗೂ ಕುಟಂಬಸ್ಥರಿಗೆ ಆಶ್ರಯ ನೀಡಲು ಬಯಸುವ ಜೀವ ಎಂದರೆ ಹೆಣ್ಣು. ಮಹಿಳೆ ಸಾಧನೆ ಮೂಲಕ ತನ್ನ ಶಕ್ತಿ ತೋರಿಸುತ್ತಿದ್ದಾಳೆ. ಮಹಿಳೆಯರಿಗೆ ಮಾತೃತ್ವ ಅನ್ನೋದು ದೇವರು ಕರುಣಿಸಿದ ಅದೃಷ್ಟದ ವರ ಎಂದರು.</p>.<p>ಸಿಡಿಪಿಒ ಉಮಾ ಕೆ.ಎಸ್., ಪ್ರಾಸ್ತಾವಿಕವಾಗಿ ಮಾತನಾಡಿದರು. ಜೆಸಿಐ ನಮ್ಮ ಸವಣೂರು ಘಟಕದ ನಿಕಟ ಪೂರ್ವ ಅಧ್ಯಕ್ಷ ಬಸವರಾಜ ಚಳ್ಳಾಳ ಅಧ್ಯಕ್ಷತೆ ವಹಿಸಿದ್ದರು. ಮಾತೃವಂದನಾ ತಾಲ್ಲೂಕು ಸಂಯೋಜಕಿ ರೇಷ್ಮಾ ನೀರಲಗಿ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆ ಪ್ರತಿಜ್ಞಾ ವಿಧಿ ಬೋಧಿಸಿದರು.</p>.<p>ಕಾರ್ಯಕ್ರಮದಲ್ಲಿ ಹೆಣ್ಣುಮಕ್ಕಳ ಜನ್ಮದಿನ ಆಚರಣೆ, ಮಕ್ಕಳಿಗೆ ಪೇಷಭೂಷಣ ಸ್ಪರ್ಧೆ ನಡೆಯಿತು.</p>.<p>ಟಿಎಚ್ಒ ಡಾ.ಚಂದ್ರಕಲಾ ಜೆ., ರಮೇಶ ಅರಗೋಳ, ಯೋಗೇಂದ್ರ ಜಂಬಗಿ, ಅಂಗನವಾಡಿ ಸುನಂದಾ ರೇವಣಕರ, ಸುಜಾತಾ ಬೆಟಗೇರಿ, ಮಧುಕರ ಜಾಲಿಹಾಳ, ಪುಷ್ಪಾ ಬತ್ತಿ, ಸೋನಿಯಾ ಮೇಟಿ, ಕವಿತಾ ಬಿಕ್ಕಣ್ಣನವರ, ಲಲಿತಾ ಅಪ್ಪಣ್ಣನವರ, ಉಮಾ ಭೂಸನೂರಮಠ, ತೇಜಸ್ವಿನಿ ಹೊಳಲ ಪಾಲ್ಗೊಂಡಿದ್ದರು.</p>.<p>ಸುನಂದಾ ಚಿನ್ನಾಪೂರ ಕಾರ್ಯಕ್ರಮ ನಿರ್ವಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸವಣೂರು: ನಿತ್ಯ ಒತ್ತಡದ ಜೀವನದಲ್ಲಿ ಸಮಾಜ, ಕುಟುಂಬದೊಂದಿಗೆ ಹೊಂದಾಣಿಕೆಯಿಂದ ವೈಯಕ್ತಿಕ ಆಸೆ ಬದಿಗಿರಿಸಿ ಮಾತೃ ಹೃದಯ ಹೊಂದಿರುವ ಹೆಣ್ಣು ಜೀವಕ್ಕೆ ಸರ್ವರ ಬೆಂಬಲ ಅವಶ್ಯವಾಗಿದೆ ಎಂದು ಪ್ರಭಾರ ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ ತಿಳಿಸಿದರು.</p>.<p>ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜೆಸಿಐ ನಮ್ಮ ಸವಣೂರು ಘಟಕ ಸಹಯೋಗದಲ್ಲಿ ಪಟ್ಟಣದ ಸ್ತ್ರೀ ಶಕ್ತಿ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ರಾಷ್ಟ್ರೀಯ ಹೆಣ್ಣು ಮಗುವಿನ ದಿನ ಆಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.</p>.<p>ಹುಟ್ಟಿನಿಂದ ಸಾವಿನವರಿಗೂ ಕುಟಂಬಸ್ಥರಿಗೆ ಆಶ್ರಯ ನೀಡಲು ಬಯಸುವ ಜೀವ ಎಂದರೆ ಹೆಣ್ಣು. ಮಹಿಳೆ ಸಾಧನೆ ಮೂಲಕ ತನ್ನ ಶಕ್ತಿ ತೋರಿಸುತ್ತಿದ್ದಾಳೆ. ಮಹಿಳೆಯರಿಗೆ ಮಾತೃತ್ವ ಅನ್ನೋದು ದೇವರು ಕರುಣಿಸಿದ ಅದೃಷ್ಟದ ವರ ಎಂದರು.</p>.<p>ಸಿಡಿಪಿಒ ಉಮಾ ಕೆ.ಎಸ್., ಪ್ರಾಸ್ತಾವಿಕವಾಗಿ ಮಾತನಾಡಿದರು. ಜೆಸಿಐ ನಮ್ಮ ಸವಣೂರು ಘಟಕದ ನಿಕಟ ಪೂರ್ವ ಅಧ್ಯಕ್ಷ ಬಸವರಾಜ ಚಳ್ಳಾಳ ಅಧ್ಯಕ್ಷತೆ ವಹಿಸಿದ್ದರು. ಮಾತೃವಂದನಾ ತಾಲ್ಲೂಕು ಸಂಯೋಜಕಿ ರೇಷ್ಮಾ ನೀರಲಗಿ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆ ಪ್ರತಿಜ್ಞಾ ವಿಧಿ ಬೋಧಿಸಿದರು.</p>.<p>ಕಾರ್ಯಕ್ರಮದಲ್ಲಿ ಹೆಣ್ಣುಮಕ್ಕಳ ಜನ್ಮದಿನ ಆಚರಣೆ, ಮಕ್ಕಳಿಗೆ ಪೇಷಭೂಷಣ ಸ್ಪರ್ಧೆ ನಡೆಯಿತು.</p>.<p>ಟಿಎಚ್ಒ ಡಾ.ಚಂದ್ರಕಲಾ ಜೆ., ರಮೇಶ ಅರಗೋಳ, ಯೋಗೇಂದ್ರ ಜಂಬಗಿ, ಅಂಗನವಾಡಿ ಸುನಂದಾ ರೇವಣಕರ, ಸುಜಾತಾ ಬೆಟಗೇರಿ, ಮಧುಕರ ಜಾಲಿಹಾಳ, ಪುಷ್ಪಾ ಬತ್ತಿ, ಸೋನಿಯಾ ಮೇಟಿ, ಕವಿತಾ ಬಿಕ್ಕಣ್ಣನವರ, ಲಲಿತಾ ಅಪ್ಪಣ್ಣನವರ, ಉಮಾ ಭೂಸನೂರಮಠ, ತೇಜಸ್ವಿನಿ ಹೊಳಲ ಪಾಲ್ಗೊಂಡಿದ್ದರು.</p>.<p>ಸುನಂದಾ ಚಿನ್ನಾಪೂರ ಕಾರ್ಯಕ್ರಮ ನಿರ್ವಹಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>