<p><strong>ಹಿರೇಕೆರೂರ</strong>: ಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ದಾಳಿ ಮಾಡಿದ್ದ ಉಗ್ರರನ್ನು ಮಟ್ಟಹಾಕಲು ಕೇಂದ್ರ ಸರ್ಕಾರ ನಡೆಸಿದ್ದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯನ್ನು ಸಂಭ್ರಮಿಸಿ ಪಟ್ಟಣದಲ್ಲಿ ಮಂಗಳವಾರ ತಿರಂಗಾ ಯಾತ್ರೆ ನಡೆಸಲಾಯಿತು.</p>.<p>ದೇಶಭಕ್ತ ನಾಗರಿಕರ ವೇದಿಕೆಯಡಿ ಬೃಹತ್ ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಪಟ್ಟಣ ಹಾಗೂ ತಾಲ್ಲೂಕಿನಲ್ಲಿರುವ ನಿವೃತ್ತ ಸೈನಿಕರು, ಶಾಲಾ–ಕಾಲೇಜು ವಿದ್ಯಾರ್ಥಿಗಳು, ಸಂಘ–ಸಂಸ್ಥೆಗಳ ಮುಖ್ಯಸ್ಥರು, ಪದಾಧಿಕಾರಿಗಳು ಯಾತ್ರೆಯಲ್ಲಿ ಭಾಗವಹಿಸಿದ್ದರು.</p>.<p>ಪಟ್ಟಣದ ಸರ್ವಜ್ಞ ವೃತ್ತದಿಂದ ಜಿ.ಬಿ. ಶಂಕರರಾವ ವೃತ್ತದವರೆಗೆ ಯಾತ್ರೆ ನಡೆಯಿತು. 200 ಮೀಟರ್ ಉದ್ದದ ತಿರಂಗಾ ಧ್ವಜ ಹಿಡಿದು ಹೆಜ್ಜೆ ಹಾಕಿದರು. ‘ಜಮ್ಮು ಮತ್ತು ಕಾಶ್ಮೀರ; ಭಾರತ ಮಾತೆಯ ಸಿಂಧೂರ’ ಎನ್ನುವ ಘೋಷಣೆ ಕೂಗಿದರು.</p>.<p>ಯಾತ್ರೆ ಆರಂಭಕ್ಕೂ ಮುನ್ನ ಮಾಜಿ ಸೈನಿಕರನ್ನು ಸನ್ಮಾನಿಸಲಾಯಿತು.</p>.<p>ಮಾಜಿ ಸೈನಿಕರ ಸಂಘದ ಅಧ್ಯಕ್ಷ ಬಿ.ವಿ. ಸೊರಟೂರ, ಮುಖಂಡ ಬಿ.ಸಿ. ಪಾಟೀಲ, ಎಬಿವಿಪಿ ಸಂಚಾಲಕ ಅಭಿಷೇಕ ದೊಡ್ಮನಿ, ಎಸ್.ಎಸ್. ಪಾಟೀಲ, ಹರೀಶ ಕಲಾಲ, ಎಸ್. ವೀರಭದ್ರಯ್ಯ, ಶಿವಕುಮಾರ ತಿಪಶೆಟ್ಟಿ, ಲಿಂಗಾಚಾರ್ ಮಾಯಾಚಾರ್, ರುದ್ರೇಶ್ ಬೆಂತೂರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಿರೇಕೆರೂರ</strong>: ಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ದಾಳಿ ಮಾಡಿದ್ದ ಉಗ್ರರನ್ನು ಮಟ್ಟಹಾಕಲು ಕೇಂದ್ರ ಸರ್ಕಾರ ನಡೆಸಿದ್ದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯನ್ನು ಸಂಭ್ರಮಿಸಿ ಪಟ್ಟಣದಲ್ಲಿ ಮಂಗಳವಾರ ತಿರಂಗಾ ಯಾತ್ರೆ ನಡೆಸಲಾಯಿತು.</p>.<p>ದೇಶಭಕ್ತ ನಾಗರಿಕರ ವೇದಿಕೆಯಡಿ ಬೃಹತ್ ತಿರಂಗಾ ಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಪಟ್ಟಣ ಹಾಗೂ ತಾಲ್ಲೂಕಿನಲ್ಲಿರುವ ನಿವೃತ್ತ ಸೈನಿಕರು, ಶಾಲಾ–ಕಾಲೇಜು ವಿದ್ಯಾರ್ಥಿಗಳು, ಸಂಘ–ಸಂಸ್ಥೆಗಳ ಮುಖ್ಯಸ್ಥರು, ಪದಾಧಿಕಾರಿಗಳು ಯಾತ್ರೆಯಲ್ಲಿ ಭಾಗವಹಿಸಿದ್ದರು.</p>.<p>ಪಟ್ಟಣದ ಸರ್ವಜ್ಞ ವೃತ್ತದಿಂದ ಜಿ.ಬಿ. ಶಂಕರರಾವ ವೃತ್ತದವರೆಗೆ ಯಾತ್ರೆ ನಡೆಯಿತು. 200 ಮೀಟರ್ ಉದ್ದದ ತಿರಂಗಾ ಧ್ವಜ ಹಿಡಿದು ಹೆಜ್ಜೆ ಹಾಕಿದರು. ‘ಜಮ್ಮು ಮತ್ತು ಕಾಶ್ಮೀರ; ಭಾರತ ಮಾತೆಯ ಸಿಂಧೂರ’ ಎನ್ನುವ ಘೋಷಣೆ ಕೂಗಿದರು.</p>.<p>ಯಾತ್ರೆ ಆರಂಭಕ್ಕೂ ಮುನ್ನ ಮಾಜಿ ಸೈನಿಕರನ್ನು ಸನ್ಮಾನಿಸಲಾಯಿತು.</p>.<p>ಮಾಜಿ ಸೈನಿಕರ ಸಂಘದ ಅಧ್ಯಕ್ಷ ಬಿ.ವಿ. ಸೊರಟೂರ, ಮುಖಂಡ ಬಿ.ಸಿ. ಪಾಟೀಲ, ಎಬಿವಿಪಿ ಸಂಚಾಲಕ ಅಭಿಷೇಕ ದೊಡ್ಮನಿ, ಎಸ್.ಎಸ್. ಪಾಟೀಲ, ಹರೀಶ ಕಲಾಲ, ಎಸ್. ವೀರಭದ್ರಯ್ಯ, ಶಿವಕುಮಾರ ತಿಪಶೆಟ್ಟಿ, ಲಿಂಗಾಚಾರ್ ಮಾಯಾಚಾರ್, ರುದ್ರೇಶ್ ಬೆಂತೂರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>