<p><strong>ಹಿರೇಕೆರೂರ</strong>: ‘ಈ ವರ್ಷ ಮೂರು ಕಡೆ ಪಶು ವ್ಯದ್ಯಕೀಯ ಸಂಸ್ಥೆಗಳ ನೂತನ ಕಟ್ಟಡಗಳನ್ನು ನಿರ್ಮಿಸಲಾಗುವುದು. ಕೋಡ, ಕಚವಿ ಮತ್ತು ಹೊಸಕಟ್ಟಿಗಳಲ್ಲಿ ತಲಾ ₹ 60 ಲಕ್ಷ ವೆಚ್ಚದಲ್ಲಿ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಅನುಮೋದನೆ ನೀಡಿದೆ’ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.</p>.<p>ಪಟ್ಟಣದ ಪಶು ಆಸ್ಪತ್ರೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಳೆದ ಆಯವ್ಯಯದಲ್ಲಿ ಮುಖ್ಯಮಂತ್ರಿಯ ಸಿದ್ದರಾಮಯ್ಯನವರು 100 ಪಶು ವ್ಯದ್ಯಕೀಯ ಸಂಸ್ಥೆಗಳ ನೂತನ ಕಟ್ಟಡಗಳನ್ನು ನಬಾರ್ಡ್ನ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ಸಹಯೋಗದಲ್ಲಿ ನಿರ್ಮಿಸಲಾಗುವುದು ಎಂದು ಘೋಷಣೆ ಮಾಡಿದ್ದು ಆ ಪ್ರಕಾರ 100ರಲ್ಲಿ 3 ಕಟ್ಟಡಗಳು ಹಿರೇಕೆರೂರ ವಿಧಾನಸಬಾ ಕ್ಷೇತ್ರಕ್ಕೆ ಮಂಜೂರು ಮಾಡಲಾಗಿದೆ’ ಎಂದು ಹೇಳಿದರು.</p>.<p>‘2 ವರ್ಷಗಳಲ್ಲಿ ಸರ್ಕಾರ ಹಿರೇಕೆರೂರ ಕ್ಷೇತ್ರಕ್ಕೆ 2 ಪಶು ಚಿಕಿತ್ಸಾಲಯ ಕೋಡ ಮತ್ತು ಕಚವಿಗೆ ಮಂಜೂರು ಮಾಡಿದ್ದು. ಕಚವಿಗೆ ಪಶು ಚಿಕಿತ್ಸಾಲಯ ಉದ್ಘಾಟನೆ ಮಾಡಲು ಬಂದಿದ್ದ ಪಶು ಸಂಗೋಪನಾ ಸಚಿವರಾದ ವೇಂಕಟೇಶ ಅವರು ಕಟ್ಟಡವನ್ನು ಮಂಜೂರು ಮಾಡುವುದಾಗಿ ಘೊಷಣೆ ಮಾಡಿದ ಪ್ರಕಾರ, ಅಲ್ಲದೇ ಅಸ್ಕಾಡ್ ಯೋಜನೆಯಡಿ ಪ್ರಯೋಗಾಲಯ ಮಂಜೂರಾಗಿದ್ದು ಅದರಲ್ಲಿ ₹ 2 ಲಕ್ಷ ಪರಿಕರಗಳಿಗೆ, ₹ 8 ಲಕ್ಷ ಕಟ್ಟಡಕ್ಕೆ ಬಳಸಲಾಗುವುದು’ ಎಂದು ಹೇಳಿದರು.</p>.<p>‘ತಾಲ್ಲೂಕಿನಲ್ಲಿ ಜಾನುವಾರುಗಳಿಗೆ ಕಾಲುಬಾಯಿ ರೋಗಕ್ಕೆ 27,086 ಮತ್ತು ಚರ್ಮಗಂಟು ರೋಗಕ್ಕೆ 25,093 ಲಸಿಕೆ ಹಾಕಲಾಗಿದೆ. ಸದ್ಯ ಯಾವುದೇ ರೋಗ ಕಾಣಿಸಿಕೊಂಡಿಲ್ಲ’ ಎಂದು ತಿಳಿಸಿದರು.</p>.<p>ಜೂನ್ ಹಾಗೂ ಜುಲೈ ತಿಂಗಳಿನಲ್ಲಿ ಕುರಿ ಮತ್ತು ಮೇಕೆಗಳಿಗೆ ಕರುಳುಬೇನೆ ಲಸಿಕೆಯನ್ನು ಮಾಡಲು ಇಲಾಖೆ ಸದಾ ತಯಾರಿದೆ. ತಾಲ್ಲೂಕಿನ ಯಾವುದೇ ಆಸ್ಪತ್ರೆಯಲ್ಲಿ ಔಷಧ ಕೊರತೆ ಇಲ್ಲ. ಹೆಚ್ಚಿನ ಔಷಧಗಳ ಬೇಡಿಕೆ ಬಂದಲ್ಲಿ ಪೂರೈಸಲು ಸರ್ಕಾರ ಸಿದ್ಧವಿದೆ’ ಎಂದು ಹೇಳಿದರು.</p>.<p>ತಾಲ್ಲೂಕು ಮಟ್ಟದ ಗ್ಯಾರಂಟಿ ಸಮಿತಿಯ ಅಧ್ಯಕ್ಷ ಮಲ್ಲಿಕಾರ್ಜುನ ಬುರಡಿಕಟ್ಟಿ, ಮುಖ್ಯಪಶುವೈದ್ಯಾಧಿಕಾರಿ ಡಾ.ಕಿರಣ್ ಎಲ್. ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಿರೇಕೆರೂರ</strong>: ‘ಈ ವರ್ಷ ಮೂರು ಕಡೆ ಪಶು ವ್ಯದ್ಯಕೀಯ ಸಂಸ್ಥೆಗಳ ನೂತನ ಕಟ್ಟಡಗಳನ್ನು ನಿರ್ಮಿಸಲಾಗುವುದು. ಕೋಡ, ಕಚವಿ ಮತ್ತು ಹೊಸಕಟ್ಟಿಗಳಲ್ಲಿ ತಲಾ ₹ 60 ಲಕ್ಷ ವೆಚ್ಚದಲ್ಲಿ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಅನುಮೋದನೆ ನೀಡಿದೆ’ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.</p>.<p>ಪಟ್ಟಣದ ಪಶು ಆಸ್ಪತ್ರೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಳೆದ ಆಯವ್ಯಯದಲ್ಲಿ ಮುಖ್ಯಮಂತ್ರಿಯ ಸಿದ್ದರಾಮಯ್ಯನವರು 100 ಪಶು ವ್ಯದ್ಯಕೀಯ ಸಂಸ್ಥೆಗಳ ನೂತನ ಕಟ್ಟಡಗಳನ್ನು ನಬಾರ್ಡ್ನ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ಸಹಯೋಗದಲ್ಲಿ ನಿರ್ಮಿಸಲಾಗುವುದು ಎಂದು ಘೋಷಣೆ ಮಾಡಿದ್ದು ಆ ಪ್ರಕಾರ 100ರಲ್ಲಿ 3 ಕಟ್ಟಡಗಳು ಹಿರೇಕೆರೂರ ವಿಧಾನಸಬಾ ಕ್ಷೇತ್ರಕ್ಕೆ ಮಂಜೂರು ಮಾಡಲಾಗಿದೆ’ ಎಂದು ಹೇಳಿದರು.</p>.<p>‘2 ವರ್ಷಗಳಲ್ಲಿ ಸರ್ಕಾರ ಹಿರೇಕೆರೂರ ಕ್ಷೇತ್ರಕ್ಕೆ 2 ಪಶು ಚಿಕಿತ್ಸಾಲಯ ಕೋಡ ಮತ್ತು ಕಚವಿಗೆ ಮಂಜೂರು ಮಾಡಿದ್ದು. ಕಚವಿಗೆ ಪಶು ಚಿಕಿತ್ಸಾಲಯ ಉದ್ಘಾಟನೆ ಮಾಡಲು ಬಂದಿದ್ದ ಪಶು ಸಂಗೋಪನಾ ಸಚಿವರಾದ ವೇಂಕಟೇಶ ಅವರು ಕಟ್ಟಡವನ್ನು ಮಂಜೂರು ಮಾಡುವುದಾಗಿ ಘೊಷಣೆ ಮಾಡಿದ ಪ್ರಕಾರ, ಅಲ್ಲದೇ ಅಸ್ಕಾಡ್ ಯೋಜನೆಯಡಿ ಪ್ರಯೋಗಾಲಯ ಮಂಜೂರಾಗಿದ್ದು ಅದರಲ್ಲಿ ₹ 2 ಲಕ್ಷ ಪರಿಕರಗಳಿಗೆ, ₹ 8 ಲಕ್ಷ ಕಟ್ಟಡಕ್ಕೆ ಬಳಸಲಾಗುವುದು’ ಎಂದು ಹೇಳಿದರು.</p>.<p>‘ತಾಲ್ಲೂಕಿನಲ್ಲಿ ಜಾನುವಾರುಗಳಿಗೆ ಕಾಲುಬಾಯಿ ರೋಗಕ್ಕೆ 27,086 ಮತ್ತು ಚರ್ಮಗಂಟು ರೋಗಕ್ಕೆ 25,093 ಲಸಿಕೆ ಹಾಕಲಾಗಿದೆ. ಸದ್ಯ ಯಾವುದೇ ರೋಗ ಕಾಣಿಸಿಕೊಂಡಿಲ್ಲ’ ಎಂದು ತಿಳಿಸಿದರು.</p>.<p>ಜೂನ್ ಹಾಗೂ ಜುಲೈ ತಿಂಗಳಿನಲ್ಲಿ ಕುರಿ ಮತ್ತು ಮೇಕೆಗಳಿಗೆ ಕರುಳುಬೇನೆ ಲಸಿಕೆಯನ್ನು ಮಾಡಲು ಇಲಾಖೆ ಸದಾ ತಯಾರಿದೆ. ತಾಲ್ಲೂಕಿನ ಯಾವುದೇ ಆಸ್ಪತ್ರೆಯಲ್ಲಿ ಔಷಧ ಕೊರತೆ ಇಲ್ಲ. ಹೆಚ್ಚಿನ ಔಷಧಗಳ ಬೇಡಿಕೆ ಬಂದಲ್ಲಿ ಪೂರೈಸಲು ಸರ್ಕಾರ ಸಿದ್ಧವಿದೆ’ ಎಂದು ಹೇಳಿದರು.</p>.<p>ತಾಲ್ಲೂಕು ಮಟ್ಟದ ಗ್ಯಾರಂಟಿ ಸಮಿತಿಯ ಅಧ್ಯಕ್ಷ ಮಲ್ಲಿಕಾರ್ಜುನ ಬುರಡಿಕಟ್ಟಿ, ಮುಖ್ಯಪಶುವೈದ್ಯಾಧಿಕಾರಿ ಡಾ.ಕಿರಣ್ ಎಲ್. ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>