<p><strong>ಹಾವೇರಿ:</strong> ಜಿಲ್ಲೆಯ ಶಿಗ್ಗಾವಿ ಬಳಿಯ ಗೊಟಗೋಡಿಯಲ್ಲಿರುವ ಜಾನಪದ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭಕ್ಕೆ ಆಹ್ವಾನ ನೀಡಿಲ್ಲವೆಂದು ಆರೋಪಿಸಿದ ನೂತನ ಶಾಸಕ ಯಾಸೀರ ಅಹಮದ್ ಖಾನ್ ಪಠಾಣ ಹಾಗೂ ಬೆಂಬಲಿಗರು, ಕುಲಪತಿ ಕೊಠಡಿಗೆ ನುಗ್ಗಿ ದುಂಡಾವರ್ತನೆ ತೋರಿದ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ.</p><p>ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಜಾನಪದ ವಿವಿ ಘಟಿಕೋತ್ಸವ ಸೋಮವಾರ ಹಮ್ಮಿಕೊಳ್ಳಲಾಗಿದೆ. ವಿಶ್ವವಿದ್ಯಾಲಯ ನಿಯಮದ ಪ್ರಕಾರ ಅರ್ಹರನ್ನು ಮಾತ್ರ ಘಟಿಕೋತ್ಸವಕ್ಕೆ ಆಹ್ವಾನಿಸಲಾಗಿದೆ.</p><p>ಆಹ್ವಾನವಿಲ್ಲದೇ ವಿಶ್ವವಿದ್ಯಾಲಯಕ್ಕೆ ಬಂದ ಪಠಾಣ, 'ನನ್ನನ್ನು ಏಕೆ ಘಟಿಕೋತ್ಸವಕ್ಕೆ ಆಹ್ವಾನಿಸಿಲ್ಲ. ಆಮಂತ್ರಣ ಪತ್ರಿಕೆಯಲ್ಲೂ ಹೆಸರು ಹಾಕಿಲ್ಲ' ಎಂದು ಹರಿಹಾಯ್ದರು.</p><p>ಘಟಿಕೋತ್ಸವ ಮೆರವಣಿಗೆ ವೇದಿಕೆ ತಲುಪುತ್ತಿದ್ದಂತೆ, ಕುಲಪತಿ ಕಚೇರಿಗೆ ಪಠಾಣ ಹಾಗೂ ಬೆಂಬಲಿಗರು ನುಗ್ಗಿದರು.</p><p>ಕಚೇರಿಯಲ್ಲಿದ್ದ ಸಹಾಯಕ ಪ್ರಾಧ್ಯಾಪಕ ಚಂದ್ರಪ್ಪ ಅವರ ಜೊತೆ ಜಗಳ ತೆಗೆದ ಪಠಾಣ ಹಾಗೂ ಬೆಂಬಲಿಗರು, ದುಂಡಾವರ್ತನೆ ತೋರಿದರು. ವಿವಿ ವಿರುದ್ಧ ಘೋಷಣೆ ಕೂಗಿದರು.</p><p>'ನಾನು ಸದ್ಯದಲ್ಲೇ ಶಾಸಕನಾಗಿ ಪ್ರಮಾಣ ವಚನ ಸ್ವೀಕರಿಸುತ್ತೇನೆ. ಆ ಮೇಲೆ ನಾನು ವಾಪಸು ಬಂದು ನಿಮ್ಮನ್ನು ನೋಡಿಕೊಳ್ಳುತ್ತೇನೆ. ವಿವಿಯ ನೇಮಕಾತಿಯಲ್ಲಿ ಅಕ್ರಮ ಆಗಿದೆ. ಎಲ್ಲವೂ ನನಗೆ ಗೊತ್ತಿದೆ. ಇಲ್ಲಿ ನೀವು ಹೇಗೆ ಬದುಕುತ್ತೀರಾ ನೋಡುತ್ತೇನೆ' ಎಂದು ಪಠಾಣ, ಪ್ರಾಧ್ಯಾಪಕರಿಗೆ ಬೆದರಿಕೆ ಹಾಕಿದರು.</p><p>ಈ ಗಲಾಟೆಯಿಂದಾಗಿ ವಿವಿ ಕುಲಪತಿ ಕಚೇರಿಯಲ್ಲಿ ಪರಿಸ್ಥಿತಿ ಬಿಗಡಾಯಿಸಿತ್ತು. ಪೊಲೀಸರು ಮದ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.</p><p>ನಂತರ, ಪಠಾಣ ಅವರು ಬೆಂಬಲಿಗರ ಸಮೇತ ಸ್ಥಳದಿಂದ ಹೊರಟು ಹೋದರು.</p><p>ಈ ಬಗ್ಗೆ ಪ್ರತಿಕ್ರಿಯಿಸಿದ ಪಠಾಣ, 'ಸಚಿವರು ಕರೆದಿದ್ದಕ್ಕೆ ವಿವಿಗೆ ಬಂದೆ. ಇಲ್ಲಿ ನನ್ನನ್ನು ಯಾರೂ ಸ್ವಾಗತಿಸಲಿಲ್ಲ. ಇದರಿಂದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಹಾಕಿಲ್ಲವೆಂದು ಬೇಸರಗೊಂಡು ಘೋಷಣೆ ಕೂಗಿದರು' ಎಂದರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾವೇರಿ:</strong> ಜಿಲ್ಲೆಯ ಶಿಗ್ಗಾವಿ ಬಳಿಯ ಗೊಟಗೋಡಿಯಲ್ಲಿರುವ ಜಾನಪದ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭಕ್ಕೆ ಆಹ್ವಾನ ನೀಡಿಲ್ಲವೆಂದು ಆರೋಪಿಸಿದ ನೂತನ ಶಾಸಕ ಯಾಸೀರ ಅಹಮದ್ ಖಾನ್ ಪಠಾಣ ಹಾಗೂ ಬೆಂಬಲಿಗರು, ಕುಲಪತಿ ಕೊಠಡಿಗೆ ನುಗ್ಗಿ ದುಂಡಾವರ್ತನೆ ತೋರಿದ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ.</p><p>ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಜಾನಪದ ವಿವಿ ಘಟಿಕೋತ್ಸವ ಸೋಮವಾರ ಹಮ್ಮಿಕೊಳ್ಳಲಾಗಿದೆ. ವಿಶ್ವವಿದ್ಯಾಲಯ ನಿಯಮದ ಪ್ರಕಾರ ಅರ್ಹರನ್ನು ಮಾತ್ರ ಘಟಿಕೋತ್ಸವಕ್ಕೆ ಆಹ್ವಾನಿಸಲಾಗಿದೆ.</p><p>ಆಹ್ವಾನವಿಲ್ಲದೇ ವಿಶ್ವವಿದ್ಯಾಲಯಕ್ಕೆ ಬಂದ ಪಠಾಣ, 'ನನ್ನನ್ನು ಏಕೆ ಘಟಿಕೋತ್ಸವಕ್ಕೆ ಆಹ್ವಾನಿಸಿಲ್ಲ. ಆಮಂತ್ರಣ ಪತ್ರಿಕೆಯಲ್ಲೂ ಹೆಸರು ಹಾಕಿಲ್ಲ' ಎಂದು ಹರಿಹಾಯ್ದರು.</p><p>ಘಟಿಕೋತ್ಸವ ಮೆರವಣಿಗೆ ವೇದಿಕೆ ತಲುಪುತ್ತಿದ್ದಂತೆ, ಕುಲಪತಿ ಕಚೇರಿಗೆ ಪಠಾಣ ಹಾಗೂ ಬೆಂಬಲಿಗರು ನುಗ್ಗಿದರು.</p><p>ಕಚೇರಿಯಲ್ಲಿದ್ದ ಸಹಾಯಕ ಪ್ರಾಧ್ಯಾಪಕ ಚಂದ್ರಪ್ಪ ಅವರ ಜೊತೆ ಜಗಳ ತೆಗೆದ ಪಠಾಣ ಹಾಗೂ ಬೆಂಬಲಿಗರು, ದುಂಡಾವರ್ತನೆ ತೋರಿದರು. ವಿವಿ ವಿರುದ್ಧ ಘೋಷಣೆ ಕೂಗಿದರು.</p><p>'ನಾನು ಸದ್ಯದಲ್ಲೇ ಶಾಸಕನಾಗಿ ಪ್ರಮಾಣ ವಚನ ಸ್ವೀಕರಿಸುತ್ತೇನೆ. ಆ ಮೇಲೆ ನಾನು ವಾಪಸು ಬಂದು ನಿಮ್ಮನ್ನು ನೋಡಿಕೊಳ್ಳುತ್ತೇನೆ. ವಿವಿಯ ನೇಮಕಾತಿಯಲ್ಲಿ ಅಕ್ರಮ ಆಗಿದೆ. ಎಲ್ಲವೂ ನನಗೆ ಗೊತ್ತಿದೆ. ಇಲ್ಲಿ ನೀವು ಹೇಗೆ ಬದುಕುತ್ತೀರಾ ನೋಡುತ್ತೇನೆ' ಎಂದು ಪಠಾಣ, ಪ್ರಾಧ್ಯಾಪಕರಿಗೆ ಬೆದರಿಕೆ ಹಾಕಿದರು.</p><p>ಈ ಗಲಾಟೆಯಿಂದಾಗಿ ವಿವಿ ಕುಲಪತಿ ಕಚೇರಿಯಲ್ಲಿ ಪರಿಸ್ಥಿತಿ ಬಿಗಡಾಯಿಸಿತ್ತು. ಪೊಲೀಸರು ಮದ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.</p><p>ನಂತರ, ಪಠಾಣ ಅವರು ಬೆಂಬಲಿಗರ ಸಮೇತ ಸ್ಥಳದಿಂದ ಹೊರಟು ಹೋದರು.</p><p>ಈ ಬಗ್ಗೆ ಪ್ರತಿಕ್ರಿಯಿಸಿದ ಪಠಾಣ, 'ಸಚಿವರು ಕರೆದಿದ್ದಕ್ಕೆ ವಿವಿಗೆ ಬಂದೆ. ಇಲ್ಲಿ ನನ್ನನ್ನು ಯಾರೂ ಸ್ವಾಗತಿಸಲಿಲ್ಲ. ಇದರಿಂದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಹಾಕಿಲ್ಲವೆಂದು ಬೇಸರಗೊಂಡು ಘೋಷಣೆ ಕೂಗಿದರು' ಎಂದರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>