ಹಾವೇರಿ ತಾಲ್ಲೂಕಿನ ಅಗಡಿ ಗ್ರಾಮದಲ್ಲಿ ಶನಿವಾರ ಬೆಳೆ ಸಮೀಕ್ಷಾ ಕಾರ್ಯಕ್ಕೆ ಚಾಲನೆ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದರು. ಬೆಳೆ ಸಮೀಕ್ಷೆಯಲ್ಲಿ ಕೆಲವು ವ್ಯತ್ಯಾಸವಾದ ಕಾರಣ 2019–20ನೇ ಸಾಲಿನಲ್ಲಿ ‘ಬೆಳೆ ವಿಮೆ’ ಹಣ ಕೆಲವು ರೈತರಿಗೆ ಸಿಕ್ಕಿರಲಿಲ್ಲ. ಈಗ ಎಲ್ಲ ಸಮಸ್ಯೆಗಳು ನಿವಾರಣೆಯಾಗಿದ್ದು, ಮಂಗಳವಾರದಿಂದ ‘ಬೆಳೆ ವಿಮೆ’ಯ ಸಂಪೂರ್ಣ ಹಣ ರೈತರ ಖಾತೆಗೆ ನೇರವಾಗಿ ಹೋಗಲಿದೆ ಎಂದು ತಿಳಿಸಿದರು.