‘ಪ್ರತಿ ವರ್ಷ ಗೌರಿ–ಗಣೇಶ, ವರಮಹಾಲಕ್ಷ್ಮಿ, ದೀಪಾವಳಿ... ಸೇರಿದಂತೆ ಪ್ರತಿಯೊಂದು ಹಬ್ಬಗಳನ್ನು ಸಂಪ್ರದಾಯಬದ್ಧವಾಗಿ ಆಚರಿಸುತ್ತೇವೆ. ಯಾವುದೇ ದೇಶದಲ್ಲಿದ್ದರೂ ತಮ್ಮ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಮರೆಯಬಾರದು. ಮಹಿಳೆಯರಿಗೆ ಅರಿಸಿನ–ಕುಂಕುಮ ಕೊಡುವುದು, ಫಲ–ತಾಂಬೂಲ ನೀಡುವುದನ್ನು ರೂಢಿಸಿಕೊಂಡಿದ್ದೇವೆ. ಹೊರದೇಶದಲ್ಲಿರುವ ಕನ್ನಡಿಗರೆಲ್ಲ ಒಟ್ಟಿಗೆ ಸೇರಿ ಹಬ್ಬ ಆಚರಿಸುವುದು ತುಂಬಾ ಸಂತೋಷ ಕೊಡುತ್ತದೆ’ ಎಂದು ಕಾವ್ಯಾ ಕುಲಕರ್ಣಿ ಅವರು ‘ಪ್ರಜಾವಾಣಿ’ಯೊಂದಿಗೆ ಅನಿಸಿಕೆ ವ್ಯಕ್ತಪಡಿಸಿದರು.