<p><strong>ಹಾನಗಲ್</strong>: ಹಾನಗಲ್ ಲಿಂ.ಕುಮಾರ ಶಿವಯೋಗಿಗಳ ಪುಣ್ಯಸ್ಮರಣೋತ್ಸವದ ಮೂರು ದಿನಗಳ ಅನ್ನದಾಸೋಹಕ್ಕಾಗಿ ರೊಟ್ಟಿ, ಖರ್ಚಿಕಾಯಿಗಳನ್ನು ತಾಲ್ಲೂಕಿನ ಸಾಂವಸಗಿ ಭಕ್ತರು ಇಲ್ಲಿನ ಕುಮಾರಸ್ವಾಮಿ ವಿರಕ್ತಮಠಕ್ಕೆ ಸಮರ್ಪಿಸಿದರು.</p>.<p>ಹಾನಗಲ್ ವಿರಕ್ತಮಠ ಆವರಣದಲ್ಲಿ ಶುಕ್ರವಾರದಿಂದ ಭಾನುವಾರ ತನಕ ಪುಣ್ಯಸ್ಮರಣೆ ಆಚರಣೆ ನಡೆಯಲಿದೆ. ಸಾಂವಸಗಿ ಗ್ರಾಮದ ವೀರಭದ್ರೇಶ್ವರ ಸೇವಾ ಸಮಿತಿ ವತಿಯಿಂದ ವಿವಿಧ ವಾದ್ಯ ವೈಭವಗಳೊಂದಿಗೆ ಬುಧವಾರ ಸಂಜೆ ಎರಡು ಟ್ರ್ಯಾಕ್ಟರ್ಗಳಲ್ಲಿ ರೊಟ್ಟಿ ಮತ್ತು ಖರ್ಚಿಕಾಯಿ ತರಲಾಯಿತು.</p>.<p>ಸಾಂವಸಗಿ ಗ್ರಾಮದ ಭಕ್ತರ ವತಿಯಿಂದ 5 ಸಾವಿರ ರೊಟ್ಟಿ ಮತ್ತು 5 ಸಾವಿರ ಖರ್ಚಿಕಾಯಿಗಳನ್ನು ಮಠದ ಅನ್ನದಾಸೋಹಕ್ಕೆ ಗೌರವಪೂರ್ಣವಾಗಿ ಸಮರ್ಪಿಸಲಾಗಿದೆ ಎಂದು ಸಾಂವಸಗಿ ವೀರಭದ್ರೇಶ್ವರ ಸೇವಾ ಸಮಿತಿಯ ಸಂಗಯ್ಯಶಾಸ್ತ್ರಿ ಹಿರೇಮಠ ತಿಳಿಸಿದರು.</p>.<p>ಸಮಿತಿಯ ನಾರಾಯಣೆಪ್ಪ ಬಡಿಗೇರ, ಶಾಂತಪ್ಪ ದೊಡ್ಡಮನಿ, ಯಲ್ಲಪ್ಪ ಚಂದ್ರಗೇರಿ, ಸುಭಾಸ ಮೂಡೂರ ಇದ್ದರು.</p>.<p>ಇಷ್ಟಲಿಂಗ ಪೂಜೆ: ಕುಮಾರೇಶನ ಪುಣ್ಯಸ್ಮರಣೆ ಮುನ್ನಾದಿನವಾದ ಗುರುವಾರ ಮಠದ ಆವರಣದ ಮಂಗಲ ಭವನದಲ್ಲಿ ಬೆಳಿಗ್ಗೆ ಭಕ್ತರು ಸಾಮೂಹಿಕ ಇಷ್ಟಲಿಂಗ ಪೂಜೆ ನೆರವೇರಿಸಿದರು.</p>.<p>150 ಭಕ್ತರು ಲಿಂಗ ಪೂಜೆಯಲ್ಲಿ ತೊಡಗಿದ್ದರು. ಮಹಿಳೆಯರು ಹೆಚ್ಚು ಸಂಖ್ಯೆಯಲ್ಲಿ ಸೇರಿದ್ದರು. ಅಕ್ಕಿಆಲೂರ ವಿರಕ್ತಮಠದ ಶಿವಬಸವ ಸ್ವಾಮೀಜಿ, ಮುತ್ತಿನಕಂತಿಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.</p>.<p>ಸಂಘಟಕರಾದ ಬಿ.ಎಸ್. ಅಕ್ಕಿವಳ್ಳಿ, ನಾಗಪ್ಪ ಸವದತ್ತಿ, ಕಲ್ಯಾಣಕುಮಾರ ಶೆಟ್ಟರ, ಕುಮಾರ ಹತ್ತಿಕಾಳ, ಶಿವಯೋಗಿ ಸವದತ್ತಿ, ಗಣೇಶ ಮಡಿವಾಳರ, ಶಿವಯೋಗಿ ಅರಳಲೇಮಠ, ಬಸಣ್ಣ ಎಲಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾನಗಲ್</strong>: ಹಾನಗಲ್ ಲಿಂ.ಕುಮಾರ ಶಿವಯೋಗಿಗಳ ಪುಣ್ಯಸ್ಮರಣೋತ್ಸವದ ಮೂರು ದಿನಗಳ ಅನ್ನದಾಸೋಹಕ್ಕಾಗಿ ರೊಟ್ಟಿ, ಖರ್ಚಿಕಾಯಿಗಳನ್ನು ತಾಲ್ಲೂಕಿನ ಸಾಂವಸಗಿ ಭಕ್ತರು ಇಲ್ಲಿನ ಕುಮಾರಸ್ವಾಮಿ ವಿರಕ್ತಮಠಕ್ಕೆ ಸಮರ್ಪಿಸಿದರು.</p>.<p>ಹಾನಗಲ್ ವಿರಕ್ತಮಠ ಆವರಣದಲ್ಲಿ ಶುಕ್ರವಾರದಿಂದ ಭಾನುವಾರ ತನಕ ಪುಣ್ಯಸ್ಮರಣೆ ಆಚರಣೆ ನಡೆಯಲಿದೆ. ಸಾಂವಸಗಿ ಗ್ರಾಮದ ವೀರಭದ್ರೇಶ್ವರ ಸೇವಾ ಸಮಿತಿ ವತಿಯಿಂದ ವಿವಿಧ ವಾದ್ಯ ವೈಭವಗಳೊಂದಿಗೆ ಬುಧವಾರ ಸಂಜೆ ಎರಡು ಟ್ರ್ಯಾಕ್ಟರ್ಗಳಲ್ಲಿ ರೊಟ್ಟಿ ಮತ್ತು ಖರ್ಚಿಕಾಯಿ ತರಲಾಯಿತು.</p>.<p>ಸಾಂವಸಗಿ ಗ್ರಾಮದ ಭಕ್ತರ ವತಿಯಿಂದ 5 ಸಾವಿರ ರೊಟ್ಟಿ ಮತ್ತು 5 ಸಾವಿರ ಖರ್ಚಿಕಾಯಿಗಳನ್ನು ಮಠದ ಅನ್ನದಾಸೋಹಕ್ಕೆ ಗೌರವಪೂರ್ಣವಾಗಿ ಸಮರ್ಪಿಸಲಾಗಿದೆ ಎಂದು ಸಾಂವಸಗಿ ವೀರಭದ್ರೇಶ್ವರ ಸೇವಾ ಸಮಿತಿಯ ಸಂಗಯ್ಯಶಾಸ್ತ್ರಿ ಹಿರೇಮಠ ತಿಳಿಸಿದರು.</p>.<p>ಸಮಿತಿಯ ನಾರಾಯಣೆಪ್ಪ ಬಡಿಗೇರ, ಶಾಂತಪ್ಪ ದೊಡ್ಡಮನಿ, ಯಲ್ಲಪ್ಪ ಚಂದ್ರಗೇರಿ, ಸುಭಾಸ ಮೂಡೂರ ಇದ್ದರು.</p>.<p>ಇಷ್ಟಲಿಂಗ ಪೂಜೆ: ಕುಮಾರೇಶನ ಪುಣ್ಯಸ್ಮರಣೆ ಮುನ್ನಾದಿನವಾದ ಗುರುವಾರ ಮಠದ ಆವರಣದ ಮಂಗಲ ಭವನದಲ್ಲಿ ಬೆಳಿಗ್ಗೆ ಭಕ್ತರು ಸಾಮೂಹಿಕ ಇಷ್ಟಲಿಂಗ ಪೂಜೆ ನೆರವೇರಿಸಿದರು.</p>.<p>150 ಭಕ್ತರು ಲಿಂಗ ಪೂಜೆಯಲ್ಲಿ ತೊಡಗಿದ್ದರು. ಮಹಿಳೆಯರು ಹೆಚ್ಚು ಸಂಖ್ಯೆಯಲ್ಲಿ ಸೇರಿದ್ದರು. ಅಕ್ಕಿಆಲೂರ ವಿರಕ್ತಮಠದ ಶಿವಬಸವ ಸ್ವಾಮೀಜಿ, ಮುತ್ತಿನಕಂತಿಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.</p>.<p>ಸಂಘಟಕರಾದ ಬಿ.ಎಸ್. ಅಕ್ಕಿವಳ್ಳಿ, ನಾಗಪ್ಪ ಸವದತ್ತಿ, ಕಲ್ಯಾಣಕುಮಾರ ಶೆಟ್ಟರ, ಕುಮಾರ ಹತ್ತಿಕಾಳ, ಶಿವಯೋಗಿ ಸವದತ್ತಿ, ಗಣೇಶ ಮಡಿವಾಳರ, ಶಿವಯೋಗಿ ಅರಳಲೇಮಠ, ಬಸಣ್ಣ ಎಲಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>