<p><strong>ರಟ್ಟೀಹಳ್ಳಿ:</strong>ಇಲ್ಲಿನ ಸರ್ಕಾರಿ ತಾಲ್ಲೂಕು ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯ ಮತ್ತು ವೈದ್ಯರ ಕೊರತೆಯಿಂದ ರೋಗಿಗಳು ಪರದಾಡುವಂತಾಗಿದೆ.</p>.<p>ಈ ಹಿಂದೆ ಹಿರೇಕೆರೂರ ಉಪವಿಭಾಗವಾಗಿದ್ದ ರಟ್ಟೀಹಳ್ಳಿಯನ್ನು ಈ ವರ್ಷ ತಾಲ್ಲೂಕಾಗಿ ಘೋಷಿಸಲಾಗಿದೆ. ಆ ಬಳಿಕ, ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನೇ ತಾಲ್ಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಆದರೆ, ಸೂಕ್ತ ಸೌಲಭ್ಯಗಳಿಲ್ಲದ ಕಾರಣ ಸುತ್ತಲಿನ ಸುಮಾರು 60 ಗ್ರಾಮಗಳ ರೋಗಿಗಳು ತೊಂದರೆ ಅನುಭವಿಸುತ್ತಿದ್ದಾರೆ.</p>.<p><strong>ಸಿಬ್ಬಂದಿ ಕೊರತೆ:</strong><br />ತಾಲ್ಲೂಕು ಆಸ್ಪತ್ರೆಯಲ್ಲಿ 14 ವೈದ್ಯರು, 18 ಶುಶ್ರೂಷಕಿಯರು, 6 ಜನ ದ್ವಿತೀಯ ದರ್ಜೆ ಸಹಾಯಕರು ಮತ್ತು ‘ಡಿ’ ದರ್ಜೆ ನೌಕರರು ಇರಬೇಕು. ಆದರೆ, ಈಗ ಇಬ್ಬರು ವೈದ್ಯರು, 6 ಶುಶ್ರೂಷಕಿಯರು, ಇಬ್ಬರು ದ್ವಿತೀಯ ದರ್ಜೆ ಸಹಾಯಕರು ಮತ್ತು ನಾಲ್ವರು ಸ್ವಚ್ಛತಾ ಸಿಬ್ಬಂದಿ ಇದ್ದಾರೆ.</p>.<p><strong>ಆ್ಯಂಬುಲೆನ್ಸ್ ಇಲ್ಲ:</strong><br />ಮೇಲ್ದರ್ಜೆಗೆ ಏರಿಸುವ ಮೊದಲು, ಈ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆ್ಯಂಬುಲೆನ್ಸ್ ಇತ್ತು. ಅದು ಈಚೆಗೆ ರಿಪೇರಿಗೆ ಬಂದಿದೆ. ತಾಲ್ಲೂಕು ಆಸ್ಪತ್ರೆಯಾದ ಬಳಿಕವೂ ಅದನ್ನು ರಿಪೇರಿ ಮಾಡಿಲ್ಲ. ಹೊಸ ಆ್ಯಂಬುಲೆನ್ಸ್ ಕೂಡಾ ನೀಡಿಲ್ಲ. ಇದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಶಿಫಾರಸಾದ ರೋಗಿಗಳು, ಗಾಯಾಳುಗಳು ಸಮಸ್ಯೆ ಎದುರಿಸುತ್ತಿದ್ದಾರೆ.</p>.<p><strong>ಸೋರುವ ಕಟ್ಟಡ:</strong><br />ಈ ಹಿಂದೆ ಇದ್ದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನೇ ತಾಲ್ಲೂಕು ಆಸ್ಪತ್ರೆ ಮಾಡಲಾಗಿದೆ. ಕಟ್ಟಡವು ಹಳೆಯದಾಗಿದ್ದು, ಅಲ್ಲಲ್ಲಿ ಶಿಥಿಲಗೊಂಡಿದೆ. ಮಲೆನಾಡಿಗೆ ಹೊಂದಿಕೊಂಡಿರುವ ರಟ್ಟೀಹಳ್ಳಿಯಲ್ಲಿ ಧಾರಾಕಾರ ಮಳೆ ಸುರಿಯುವ ಸಂದರ್ಭದಲ್ಲಿ ಕಟ್ಟಡವು ಸೋರುತ್ತಿದೆ. ಕಟ್ಟಡ ಸೋರಲು ಆರಂಭಿಸಿದರೆ, ದಾಖಲಾದ ರೋಗಿಗಳು, ಸಿಬ್ಬಂದಿ, ವೈದ್ಯರು ಪರದಾಟ ನಡೆಸಬೇಕಾಗಿದೆ.</p>.<p><strong>ಬೀದಿ ನಾಯಿ ಹಾವಳಿ:</strong><br />ಕಟ್ಟಡವು ಪಾಳು ಬಿದ್ದಂತಿದ್ದು, ಆವರಣವು ಬೀದಿ ನಾಯಿಗಳ ವಾಸಸ್ಥಳವಾಗಿದೆ. ಆವರಣದಲ್ಲಿ ಮುಳ್ಳು ಕಂಟಿಗಳು ಬೆಳೆದಿವೆ. ಇದರಿಂದ ರೋಗಿಗಳು ಆಸ್ಪತ್ರೆಗೆ ಬರಲೂ ಭಯ ಪಡುವ ವಾತಾವರಣ ಇದೆ ಎಂದು ಸ್ಥಳೀಯರಾದ ಯೂಸೂಫ್ ಸೈಕಲ್ಗಾರ ಮತ್ತಿತರರು ದೂರಿದರು.</p>.<p>ರಟೀಹಳ್ಳಿ ತಾಲ್ಲೂಕು ಆಸ್ಪತ್ರೆಗೆ ವೈದ್ಯರ ನೇಮಕ ಹಾಗೂ ಮೂಲಸೌಲಭ್ಯ ಕಲ್ಪಿಸುವ ಕುರಿತು ಕುರಿತು ಜಿಲ್ಲಾ ಆರೋಗ್ಯಾಧಿಕಾರಿಗಳು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದಾರೆ. ಶೀಘ್ರವೇ ನೇಮಕವಾಗುವ ನಿರೀಕ್ಷೆ ಇದೆ.<br />–<strong> ಡಾ.ಚಿದಾನಂದ,ತಾಲ್ಲೂಕು ಆರೋಗ್ಯಾಧಿಕಾರಿ, ಹಿರೇಕೆರೂರ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಟ್ಟೀಹಳ್ಳಿ:</strong>ಇಲ್ಲಿನ ಸರ್ಕಾರಿ ತಾಲ್ಲೂಕು ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯ ಮತ್ತು ವೈದ್ಯರ ಕೊರತೆಯಿಂದ ರೋಗಿಗಳು ಪರದಾಡುವಂತಾಗಿದೆ.</p>.<p>ಈ ಹಿಂದೆ ಹಿರೇಕೆರೂರ ಉಪವಿಭಾಗವಾಗಿದ್ದ ರಟ್ಟೀಹಳ್ಳಿಯನ್ನು ಈ ವರ್ಷ ತಾಲ್ಲೂಕಾಗಿ ಘೋಷಿಸಲಾಗಿದೆ. ಆ ಬಳಿಕ, ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನೇ ತಾಲ್ಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಆದರೆ, ಸೂಕ್ತ ಸೌಲಭ್ಯಗಳಿಲ್ಲದ ಕಾರಣ ಸುತ್ತಲಿನ ಸುಮಾರು 60 ಗ್ರಾಮಗಳ ರೋಗಿಗಳು ತೊಂದರೆ ಅನುಭವಿಸುತ್ತಿದ್ದಾರೆ.</p>.<p><strong>ಸಿಬ್ಬಂದಿ ಕೊರತೆ:</strong><br />ತಾಲ್ಲೂಕು ಆಸ್ಪತ್ರೆಯಲ್ಲಿ 14 ವೈದ್ಯರು, 18 ಶುಶ್ರೂಷಕಿಯರು, 6 ಜನ ದ್ವಿತೀಯ ದರ್ಜೆ ಸಹಾಯಕರು ಮತ್ತು ‘ಡಿ’ ದರ್ಜೆ ನೌಕರರು ಇರಬೇಕು. ಆದರೆ, ಈಗ ಇಬ್ಬರು ವೈದ್ಯರು, 6 ಶುಶ್ರೂಷಕಿಯರು, ಇಬ್ಬರು ದ್ವಿತೀಯ ದರ್ಜೆ ಸಹಾಯಕರು ಮತ್ತು ನಾಲ್ವರು ಸ್ವಚ್ಛತಾ ಸಿಬ್ಬಂದಿ ಇದ್ದಾರೆ.</p>.<p><strong>ಆ್ಯಂಬುಲೆನ್ಸ್ ಇಲ್ಲ:</strong><br />ಮೇಲ್ದರ್ಜೆಗೆ ಏರಿಸುವ ಮೊದಲು, ಈ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆ್ಯಂಬುಲೆನ್ಸ್ ಇತ್ತು. ಅದು ಈಚೆಗೆ ರಿಪೇರಿಗೆ ಬಂದಿದೆ. ತಾಲ್ಲೂಕು ಆಸ್ಪತ್ರೆಯಾದ ಬಳಿಕವೂ ಅದನ್ನು ರಿಪೇರಿ ಮಾಡಿಲ್ಲ. ಹೊಸ ಆ್ಯಂಬುಲೆನ್ಸ್ ಕೂಡಾ ನೀಡಿಲ್ಲ. ಇದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಶಿಫಾರಸಾದ ರೋಗಿಗಳು, ಗಾಯಾಳುಗಳು ಸಮಸ್ಯೆ ಎದುರಿಸುತ್ತಿದ್ದಾರೆ.</p>.<p><strong>ಸೋರುವ ಕಟ್ಟಡ:</strong><br />ಈ ಹಿಂದೆ ಇದ್ದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನೇ ತಾಲ್ಲೂಕು ಆಸ್ಪತ್ರೆ ಮಾಡಲಾಗಿದೆ. ಕಟ್ಟಡವು ಹಳೆಯದಾಗಿದ್ದು, ಅಲ್ಲಲ್ಲಿ ಶಿಥಿಲಗೊಂಡಿದೆ. ಮಲೆನಾಡಿಗೆ ಹೊಂದಿಕೊಂಡಿರುವ ರಟ್ಟೀಹಳ್ಳಿಯಲ್ಲಿ ಧಾರಾಕಾರ ಮಳೆ ಸುರಿಯುವ ಸಂದರ್ಭದಲ್ಲಿ ಕಟ್ಟಡವು ಸೋರುತ್ತಿದೆ. ಕಟ್ಟಡ ಸೋರಲು ಆರಂಭಿಸಿದರೆ, ದಾಖಲಾದ ರೋಗಿಗಳು, ಸಿಬ್ಬಂದಿ, ವೈದ್ಯರು ಪರದಾಟ ನಡೆಸಬೇಕಾಗಿದೆ.</p>.<p><strong>ಬೀದಿ ನಾಯಿ ಹಾವಳಿ:</strong><br />ಕಟ್ಟಡವು ಪಾಳು ಬಿದ್ದಂತಿದ್ದು, ಆವರಣವು ಬೀದಿ ನಾಯಿಗಳ ವಾಸಸ್ಥಳವಾಗಿದೆ. ಆವರಣದಲ್ಲಿ ಮುಳ್ಳು ಕಂಟಿಗಳು ಬೆಳೆದಿವೆ. ಇದರಿಂದ ರೋಗಿಗಳು ಆಸ್ಪತ್ರೆಗೆ ಬರಲೂ ಭಯ ಪಡುವ ವಾತಾವರಣ ಇದೆ ಎಂದು ಸ್ಥಳೀಯರಾದ ಯೂಸೂಫ್ ಸೈಕಲ್ಗಾರ ಮತ್ತಿತರರು ದೂರಿದರು.</p>.<p>ರಟೀಹಳ್ಳಿ ತಾಲ್ಲೂಕು ಆಸ್ಪತ್ರೆಗೆ ವೈದ್ಯರ ನೇಮಕ ಹಾಗೂ ಮೂಲಸೌಲಭ್ಯ ಕಲ್ಪಿಸುವ ಕುರಿತು ಕುರಿತು ಜಿಲ್ಲಾ ಆರೋಗ್ಯಾಧಿಕಾರಿಗಳು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದಾರೆ. ಶೀಘ್ರವೇ ನೇಮಕವಾಗುವ ನಿರೀಕ್ಷೆ ಇದೆ.<br />–<strong> ಡಾ.ಚಿದಾನಂದ,ತಾಲ್ಲೂಕು ಆರೋಗ್ಯಾಧಿಕಾರಿ, ಹಿರೇಕೆರೂರ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>