‘ಲಿಂಗಾಯತ’ ಸಮುದಾಯದ ಬಡವರು, ವಿದ್ಯಾರ್ಥಿಗಳು ಸಾಂವಿಧಾನಿಕ ಸೌಲಭ್ಯ ಪಡೆದು ಅಭಿವೃದ್ಧಿಯಾಗಲಿ ಎಂದು ನಾವು ಹೋರಾಟದಲ್ಲಿ ಪಾಲ್ಗೊಂಡೆವು. ಯಾವುದೇ ಶೋಷಿತರು, ಬಡವರಿಗೆ ಸಾಂವಿಧಾನಿಕ ಸೌಲಭ್ಯ ಕಲ್ಪಿಸಲು ಹೋರಾಡಿದರೆ, ‘ಧರ್ಮ ಒಡೆಯುವ ಕಾರ್ಯ’ ಎಂದು ಆರೋಪಿಸುತ್ತಾರೆ. ಹಾಗಿದ್ದರೆ, ಬಡವರು, ಶೋಷಿತರಿಗಾಗಿ ಶ್ರಮಿಸುವುದು ‘ಧರ್ಮ’ ಅಲ್ಲವೇ? ಎಂದು ಪ್ರಶ್ನಿಸಿದರು.
‘ಹೋರಾಟಕ್ಕೆ ರಾಜಕೀಯ ಲೇಪ ನೀಡುತ್ತಿರುವ ಕಾರಣ ನಾವೆಲ್ಲ ರಾಜಕಾರಣಿಗಳು ಹೊರಗೆ ನಿಂತಿದ್ದೇವೆ. ಸಮಿತಿಯವರು ಕಾನೂನಾತ್ಮಕ ಹೋರಾಟ ಮುಂದುವರಿಸುತ್ತಾರೆ’ ಎಂದ ಅವರು, ‘ಲಿಂಗಾಯತ’ ಹೋರಾಟಕ್ಕೂ, ಚುನಾವಣೆ ಅಥವಾ ಯಾವುದೇ ಪಕ್ಷಗಳಿಗೂ ಸಂಬಂಧ ಇಲ್ಲ. ಹೋರಾಟಗಾರರ ನಿರ್ಣಯದಲ್ಲಿ ನಾವು ಕೈ ಹಾಕುವುದಿಲ್ಲ ಎಂದರು.