<p><strong>ಹಾವೇರಿ:</strong> ‘ಭಾನುವಾರದ ಲಾಕ್ಡೌನ್’ ಅನ್ನು ರಾಜ್ಯ ಸರ್ಕಾರ ತೆರವುಗೊಳಿಸಿದ ಕಾರಣ, ನಗರದಲ್ಲಿ ವ್ಯಾಪಾರ ವಹಿವಾಟು ಗರಿಗೆದರಿತು.</p>.<p>ಬಟ್ಟೆ, ಎಲೆಕ್ಟ್ರಾನಿಕ್, ಪ್ಲಾಸ್ಟಿಕ್, ಕಿರಾಣಿ, ಸ್ಟೇಷನರಿ, ಬೇಕರಿ ಮಳಿಗೆಗಳು ಹಾಗೂ ಹೋಟೆಲ್ಗಳನ್ನು ತೆರೆಯಲಾಗಿತ್ತು. ಜನರು ವಸ್ತುಗಳನ್ನು ಖರೀದಿಸಲು ಮುಗಿಬಿದ್ದರು. ರಸ್ತೆಗಳು ಮತ್ತು ವೃತ್ತಗಳಲ್ಲಿ ವಾಹನ ಸಂಚಾರ ಅಧಿಕವಾಗಿತ್ತು. ಗ್ರಾಮೀಣ ಪ್ರದೇಶದ ಜನರು ಕೃಷಿ ಸಲಕರಣೆ ಮತ್ತು ಕಿರಾಣಿ ವಸ್ತುಗಳನ್ನು ಖರೀದಿಸಿದರು.</p>.<p>ಭಾನುವಾರ ರಜಾದಿನವಾದ ಕಾರಣ ಸರ್ಕಾರಿ ಕಚೇರಿ, ಬ್ಯಾಂಕ್, ಪತ್ತಿನ ಸಹಕಾರ ಸಂಘಗಳು ಬಾಗಿಲು ಮುಚ್ಚಿದ್ದವು. ತರಕಾರಿ, ಹಾಲು, ಔಷಧ, ಆಸ್ಪತ್ರೆಗಳನ್ನು ಎಂದಿನಂತೆಯೇ ತೆರೆಯಲಾಗಿತ್ತು. ಹೊರ ಜಿಲ್ಲೆಗಳಿಂದ ಬಂದ ಸರಕು ಸಾಗಣೆ ವಾಹನಗಳಿಂದ ಕಾರ್ಮಿಕರು ಗೋದಾಮುಗಳಿಗೆ ಸಾಮಗ್ರಿಯನ್ನು ಇಳಿಸಿಕೊಂಡರು. </p>.<p class="Subhead"><strong>ರಾಖಿ ವ್ಯಾಪಾರ:</strong>ಸೋಮವಾರ ನಡೆಯಲಿರುವ ರಕ್ಷಾಬಂಧನ ಹಬ್ಬದ ಅಂಗವಾಗಿ ಮಕ್ಕಳು, ಯುವತಿಯರು, ಮಹಿಳೆಯರು ರಾಖಿಗಳನ್ನು ಖರೀದಿಸುತ್ತಿದ್ದ ದೃಶ್ಯ ನಗರದ ಎಂ.ಜಿ.ರಸ್ತೆಯಲ್ಲಿ ಕಂಡು ಬಂದಿತು.</p>.<p>‘ಕಳೆದ ವರ್ಷ₹50 ಸಾವಿರ ರಾಖಿಗಳ ವ್ಯಾಪಾರವಾಗಿತ್ತು. ಈ ಬಾರಿ ಒಂದು ವಾರದಿಂದ ಬರೀ ₹15 ಸಾವಿರ ವ್ಯಾಪಾರವಾಗಿದೆ. ಶಾಲಾ–ಕಾಲೇಜು ರಜೆ ಇರುವುದರಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿಯರು ಮತ್ತು ಯುವತಿಯರು ಈ ಬಾರಿ ರಾಖಿ ಖರೀದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಂದಿಲ್ಲ. ಲಾಕ್ಡೌನ್ನಲ್ಲಿ ವ್ಯಾಪಾರವಿಲ್ಲದೆ ನಷ್ಟ ಅನುಭವಿಸಿದ್ದೆವು. ಈಗ ನಿರೀಕ್ಷಿತ ವ್ಯಾಪಾರವಾಗುತ್ತಿಲ್ಲ’ ಎಂದು ಬೀದಿಬದಿ ವ್ಯಾಪಾರಿ ಶಿವಲಿಂಗನ ಗೌಡ ಪಾಟೀಲ ಸಮಸ್ಯೆ ತೋಡಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾವೇರಿ:</strong> ‘ಭಾನುವಾರದ ಲಾಕ್ಡೌನ್’ ಅನ್ನು ರಾಜ್ಯ ಸರ್ಕಾರ ತೆರವುಗೊಳಿಸಿದ ಕಾರಣ, ನಗರದಲ್ಲಿ ವ್ಯಾಪಾರ ವಹಿವಾಟು ಗರಿಗೆದರಿತು.</p>.<p>ಬಟ್ಟೆ, ಎಲೆಕ್ಟ್ರಾನಿಕ್, ಪ್ಲಾಸ್ಟಿಕ್, ಕಿರಾಣಿ, ಸ್ಟೇಷನರಿ, ಬೇಕರಿ ಮಳಿಗೆಗಳು ಹಾಗೂ ಹೋಟೆಲ್ಗಳನ್ನು ತೆರೆಯಲಾಗಿತ್ತು. ಜನರು ವಸ್ತುಗಳನ್ನು ಖರೀದಿಸಲು ಮುಗಿಬಿದ್ದರು. ರಸ್ತೆಗಳು ಮತ್ತು ವೃತ್ತಗಳಲ್ಲಿ ವಾಹನ ಸಂಚಾರ ಅಧಿಕವಾಗಿತ್ತು. ಗ್ರಾಮೀಣ ಪ್ರದೇಶದ ಜನರು ಕೃಷಿ ಸಲಕರಣೆ ಮತ್ತು ಕಿರಾಣಿ ವಸ್ತುಗಳನ್ನು ಖರೀದಿಸಿದರು.</p>.<p>ಭಾನುವಾರ ರಜಾದಿನವಾದ ಕಾರಣ ಸರ್ಕಾರಿ ಕಚೇರಿ, ಬ್ಯಾಂಕ್, ಪತ್ತಿನ ಸಹಕಾರ ಸಂಘಗಳು ಬಾಗಿಲು ಮುಚ್ಚಿದ್ದವು. ತರಕಾರಿ, ಹಾಲು, ಔಷಧ, ಆಸ್ಪತ್ರೆಗಳನ್ನು ಎಂದಿನಂತೆಯೇ ತೆರೆಯಲಾಗಿತ್ತು. ಹೊರ ಜಿಲ್ಲೆಗಳಿಂದ ಬಂದ ಸರಕು ಸಾಗಣೆ ವಾಹನಗಳಿಂದ ಕಾರ್ಮಿಕರು ಗೋದಾಮುಗಳಿಗೆ ಸಾಮಗ್ರಿಯನ್ನು ಇಳಿಸಿಕೊಂಡರು. </p>.<p class="Subhead"><strong>ರಾಖಿ ವ್ಯಾಪಾರ:</strong>ಸೋಮವಾರ ನಡೆಯಲಿರುವ ರಕ್ಷಾಬಂಧನ ಹಬ್ಬದ ಅಂಗವಾಗಿ ಮಕ್ಕಳು, ಯುವತಿಯರು, ಮಹಿಳೆಯರು ರಾಖಿಗಳನ್ನು ಖರೀದಿಸುತ್ತಿದ್ದ ದೃಶ್ಯ ನಗರದ ಎಂ.ಜಿ.ರಸ್ತೆಯಲ್ಲಿ ಕಂಡು ಬಂದಿತು.</p>.<p>‘ಕಳೆದ ವರ್ಷ₹50 ಸಾವಿರ ರಾಖಿಗಳ ವ್ಯಾಪಾರವಾಗಿತ್ತು. ಈ ಬಾರಿ ಒಂದು ವಾರದಿಂದ ಬರೀ ₹15 ಸಾವಿರ ವ್ಯಾಪಾರವಾಗಿದೆ. ಶಾಲಾ–ಕಾಲೇಜು ರಜೆ ಇರುವುದರಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿಯರು ಮತ್ತು ಯುವತಿಯರು ಈ ಬಾರಿ ರಾಖಿ ಖರೀದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಂದಿಲ್ಲ. ಲಾಕ್ಡೌನ್ನಲ್ಲಿ ವ್ಯಾಪಾರವಿಲ್ಲದೆ ನಷ್ಟ ಅನುಭವಿಸಿದ್ದೆವು. ಈಗ ನಿರೀಕ್ಷಿತ ವ್ಯಾಪಾರವಾಗುತ್ತಿಲ್ಲ’ ಎಂದು ಬೀದಿಬದಿ ವ್ಯಾಪಾರಿ ಶಿವಲಿಂಗನ ಗೌಡ ಪಾಟೀಲ ಸಮಸ್ಯೆ ತೋಡಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>