<p><strong>ಗುತ್ತಲ (ಹಾವೇರಿ ಜಿಲ್ಲೆ)</strong>: ಸಮೀಪದ ಹಾವನೂರ ಗ್ರಾಮದ ಮೈಲಾರಲಿಂಗೇಶ್ವರನ ಕಾರಣಿಕೋತ್ಸವ ಮಂಗಳವಾರ ನಡೆಯಿತು. ಗೋರವಯ್ಯ ಆನಂದ ಬಿಲ್ಲರ ಬಿಲ್ಲನ್ನೇರಿ, ‘ಬಿತ್ತಿ ಬೆಳೆದ ಕೈ ಬಂಗಾರದ ಖಡ್ಗ ತೋಟ್ಟಿತಲೇ ಪರಾಕ್’ ಎಂದು ನುಡಿದರು.</p>.<p>ಬಿಲ್ಲನ್ನೇರುವಾಗ ಅವಸರ ಮಾಡಿದ ಕಾರಣ ಕಾಲು ಜಾರುವ ಭಯದಲ್ಲಿ ಗೋರವಯ್ಯ ಬಿಲ್ಲನ್ನು ಅರ್ಧಕ್ಕೆ ಮಾತ್ರ ಏರಿ ಕಾರಣಿಕ ನುಡಿದರು.</p>.<p>‘ರೈತರು ಬೆಳೆದ ಬೆಳೆಗೆ ಉತ್ತಮ ದರ ಸಿಗಬಹುದು. ಉತ್ತಮ ಮಳೆ ಆಗಬಹುದು’ ಎಂದು ಭಕ್ತರು ಹರ್ಷ ವ್ಯಕ್ತಪಡಿಸಿದರು. ಕಾರಣಿಕ ನುಡಿಯಲ್ಲಿ ಉತ್ತಮ ಸಂದೇಶ ಅಡಗಿದೆ ಎಂದು ಅಭಿಪ್ರಾಯಪಟ್ಟರು.</p>.<p>ಮೈಲಾರಲಿಂಗೇಶ್ವರ ಕಾರಣಿಕ ಇಂದು: ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಮೈಲಾರ ಸುಕ್ಷೇತ್ರದಲ್ಲಿ ಬುಧವಾರ (ಫೆ.4) ಸಂಜೆ 5.30ಕ್ಕೆ ಮೈಲಾರಲಿಂಗೇಶ್ವರ ಸ್ವಾಮಿ ಕಾರಣಿಕೋತ್ಸವ ಜರುಗಲಿದೆ. ಸ್ವಾಮಿಯ ಭವಿಷ್ಯವಾಣಿ ಆಲಿಸಲು ಲಕ್ಷಾಂತರ ಭಕ್ತರು ಕಾತುರರಾಗಿದ್ದಾರೆ.</p>.<p>ಕಾರಣಿಕೋತ್ಸವದ ಸಿದ್ಧತೆ ಪೂರ್ಣಗೊಂಡಿವೆ. ಗೊರವಪ್ಪ ನುಡಿಯುವ ಸ್ವಾಮಿಯ ಕಾರ್ಣಿಕ ನುಡಿ ಸ್ಪಷ್ಟವಾಗಿ ಕೇಳಿಸುವಂತೆ ತಂತ್ರಜ್ಞಾನ ಆಧಾರಿತ ಧ್ವನಿ ಮುದ್ರಿಕೆ, ಧ್ವನಿವರ್ಧಕ ಅಳವಡಿಸಲಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುತ್ತಲ (ಹಾವೇರಿ ಜಿಲ್ಲೆ)</strong>: ಸಮೀಪದ ಹಾವನೂರ ಗ್ರಾಮದ ಮೈಲಾರಲಿಂಗೇಶ್ವರನ ಕಾರಣಿಕೋತ್ಸವ ಮಂಗಳವಾರ ನಡೆಯಿತು. ಗೋರವಯ್ಯ ಆನಂದ ಬಿಲ್ಲರ ಬಿಲ್ಲನ್ನೇರಿ, ‘ಬಿತ್ತಿ ಬೆಳೆದ ಕೈ ಬಂಗಾರದ ಖಡ್ಗ ತೋಟ್ಟಿತಲೇ ಪರಾಕ್’ ಎಂದು ನುಡಿದರು.</p>.<p>ಬಿಲ್ಲನ್ನೇರುವಾಗ ಅವಸರ ಮಾಡಿದ ಕಾರಣ ಕಾಲು ಜಾರುವ ಭಯದಲ್ಲಿ ಗೋರವಯ್ಯ ಬಿಲ್ಲನ್ನು ಅರ್ಧಕ್ಕೆ ಮಾತ್ರ ಏರಿ ಕಾರಣಿಕ ನುಡಿದರು.</p>.<p>‘ರೈತರು ಬೆಳೆದ ಬೆಳೆಗೆ ಉತ್ತಮ ದರ ಸಿಗಬಹುದು. ಉತ್ತಮ ಮಳೆ ಆಗಬಹುದು’ ಎಂದು ಭಕ್ತರು ಹರ್ಷ ವ್ಯಕ್ತಪಡಿಸಿದರು. ಕಾರಣಿಕ ನುಡಿಯಲ್ಲಿ ಉತ್ತಮ ಸಂದೇಶ ಅಡಗಿದೆ ಎಂದು ಅಭಿಪ್ರಾಯಪಟ್ಟರು.</p>.<p>ಮೈಲಾರಲಿಂಗೇಶ್ವರ ಕಾರಣಿಕ ಇಂದು: ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಮೈಲಾರ ಸುಕ್ಷೇತ್ರದಲ್ಲಿ ಬುಧವಾರ (ಫೆ.4) ಸಂಜೆ 5.30ಕ್ಕೆ ಮೈಲಾರಲಿಂಗೇಶ್ವರ ಸ್ವಾಮಿ ಕಾರಣಿಕೋತ್ಸವ ಜರುಗಲಿದೆ. ಸ್ವಾಮಿಯ ಭವಿಷ್ಯವಾಣಿ ಆಲಿಸಲು ಲಕ್ಷಾಂತರ ಭಕ್ತರು ಕಾತುರರಾಗಿದ್ದಾರೆ.</p>.<p>ಕಾರಣಿಕೋತ್ಸವದ ಸಿದ್ಧತೆ ಪೂರ್ಣಗೊಂಡಿವೆ. ಗೊರವಪ್ಪ ನುಡಿಯುವ ಸ್ವಾಮಿಯ ಕಾರ್ಣಿಕ ನುಡಿ ಸ್ಪಷ್ಟವಾಗಿ ಕೇಳಿಸುವಂತೆ ತಂತ್ರಜ್ಞಾನ ಆಧಾರಿತ ಧ್ವನಿ ಮುದ್ರಿಕೆ, ಧ್ವನಿವರ್ಧಕ ಅಳವಡಿಸಲಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>