<p><strong>ಚಳಗೇರಿ: </strong>ಉಕ್ರೇನ್ನಲ್ಲಿ ಯುದ್ಧ ಮುಂದುವರಿದಿದೆ. ಇಂತಹ ಸಂದಿಗ್ಧ ಸಂದರ್ಭದಲ್ಲಿಯೂ ನವೀನ ಅವರ ಪಾರ್ಥಿವ ಶರೀರವನ್ನು ತವರೂರಿಗೆ ತಂದಿದ್ದೇವೆ ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾರಣ ಎಂದು ರಾಣೆಬೆನ್ನೂರು ಶಾಸಕ ಅರುಣ್ ಕುಮಾರ್ ಪೂಜಾರ್ ಹೇಳಿದರು.</p>.<p>ಚಳಗೇರಿ ಗ್ರಾಮದಲ್ಲಿ ಸೋಮವಾರ ಅವರು ಮಾಧ್ಯಮದವರೊಂದಿಗೆ ಮಾತನಾಡಿ,<br />ನವೀನ್ ಮೃತದೇಹ ತಾಯ್ನಾಡಿಗೆ ತರುವುದು ಹೇಗೆ ಎನ್ನುವ ಆತಂಕವಿತ್ತು.<br />ಸತತ 20 ದಿನ ಪ್ರಯತ್ನಪಡಲಾಗಿದೆ.</p>.<p>ನಿತ್ಯ ಅವರ ತಂದೆ ತಾಯಿಗಳನ್ನು ಸಂತೈಸುವ ಕೆಲಸವನ್ನು ನಿರಂತರ ಮಾಡಿದ್ದೇವೆ.<br />ಕೊನೆಗೂ ನವೀನ್ ಪಾರ್ಥಿವ ಶರೀರ ಬಂದಿದೆ ಎಂದರು.</p>.<p>ಸಂಸದ ಶಿವಕುಮಾರ ಉದಾಸಿ ಕೇಂದ್ರದ ಮೇಲೆ ಸತತ ಒತ್ತಡ ತಂದರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರೂ ಪ್ರಯತ್ನಿಸಿದರು.</p>.<p>ಆದರೆ ನವೀನ ಅವರನ್ನು ಶವದ ರೂಪದಲ್ಲಿ ತಂದಿರುವುದಕ್ಕೆ ದುಃಖವಿದೆ.<br />ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.</p>.<p>ಗ್ರಾಮಸ್ಥರು ಸಾಲು - ಸಾಲಾಗಿ ಬಂದು ನವೀನ ಅವರ ಅಂತಿಮ ದರ್ಶನ ಪಡೆದರು. ನವೀನ ಅವರ ಸ್ನೇಹಿತರು, ಸಹಪಾಠಿಗಳು ಕಂಬನಿ ಮಿಡಿದರು.</p>.<p>ಗ್ರಾಮದಲ್ಲಿ ಅಂತಿಮ ಮೆರವಣಿಗೆ ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ. ಅಂತಿಮ ದರ್ಶನದ ನಂತರ ದಾವಣಗೆರೆಯ ಎಸ್.ಎಸ್. ಆಸ್ಪತ್ರೆಗೆ ನವೀನ ಅವರ ದೇಹವನ್ನು ದಾನ ಮಾಡಲಾಗುವುದು ಎಂದು ಕುಟುಂಬಸ್ಥರು ತಿಳಿಸಿದರು.</p>.<p>ಚಿತ್ರಗಳಲ್ಲಿ: <a href="https://www.prajavani.net/photo/karnataka-news/naveen-ghyanagoudar-dead-body-arrives-his-home-town-chalageri-naveen-died-in-ukraine-last-month-921292.html"><strong>ಉಕ್ರೇನ್ನಲ್ಲಿ ಮೃತಪಟ್ಟ ನವೀನ್ಗೆ ಹುಟ್ಟೂರಲ್ಲಿ ಅಂತಿಮ ನಮನ</strong></a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಳಗೇರಿ: </strong>ಉಕ್ರೇನ್ನಲ್ಲಿ ಯುದ್ಧ ಮುಂದುವರಿದಿದೆ. ಇಂತಹ ಸಂದಿಗ್ಧ ಸಂದರ್ಭದಲ್ಲಿಯೂ ನವೀನ ಅವರ ಪಾರ್ಥಿವ ಶರೀರವನ್ನು ತವರೂರಿಗೆ ತಂದಿದ್ದೇವೆ ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾರಣ ಎಂದು ರಾಣೆಬೆನ್ನೂರು ಶಾಸಕ ಅರುಣ್ ಕುಮಾರ್ ಪೂಜಾರ್ ಹೇಳಿದರು.</p>.<p>ಚಳಗೇರಿ ಗ್ರಾಮದಲ್ಲಿ ಸೋಮವಾರ ಅವರು ಮಾಧ್ಯಮದವರೊಂದಿಗೆ ಮಾತನಾಡಿ,<br />ನವೀನ್ ಮೃತದೇಹ ತಾಯ್ನಾಡಿಗೆ ತರುವುದು ಹೇಗೆ ಎನ್ನುವ ಆತಂಕವಿತ್ತು.<br />ಸತತ 20 ದಿನ ಪ್ರಯತ್ನಪಡಲಾಗಿದೆ.</p>.<p>ನಿತ್ಯ ಅವರ ತಂದೆ ತಾಯಿಗಳನ್ನು ಸಂತೈಸುವ ಕೆಲಸವನ್ನು ನಿರಂತರ ಮಾಡಿದ್ದೇವೆ.<br />ಕೊನೆಗೂ ನವೀನ್ ಪಾರ್ಥಿವ ಶರೀರ ಬಂದಿದೆ ಎಂದರು.</p>.<p>ಸಂಸದ ಶಿವಕುಮಾರ ಉದಾಸಿ ಕೇಂದ್ರದ ಮೇಲೆ ಸತತ ಒತ್ತಡ ತಂದರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರೂ ಪ್ರಯತ್ನಿಸಿದರು.</p>.<p>ಆದರೆ ನವೀನ ಅವರನ್ನು ಶವದ ರೂಪದಲ್ಲಿ ತಂದಿರುವುದಕ್ಕೆ ದುಃಖವಿದೆ.<br />ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.</p>.<p>ಗ್ರಾಮಸ್ಥರು ಸಾಲು - ಸಾಲಾಗಿ ಬಂದು ನವೀನ ಅವರ ಅಂತಿಮ ದರ್ಶನ ಪಡೆದರು. ನವೀನ ಅವರ ಸ್ನೇಹಿತರು, ಸಹಪಾಠಿಗಳು ಕಂಬನಿ ಮಿಡಿದರು.</p>.<p>ಗ್ರಾಮದಲ್ಲಿ ಅಂತಿಮ ಮೆರವಣಿಗೆ ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ. ಅಂತಿಮ ದರ್ಶನದ ನಂತರ ದಾವಣಗೆರೆಯ ಎಸ್.ಎಸ್. ಆಸ್ಪತ್ರೆಗೆ ನವೀನ ಅವರ ದೇಹವನ್ನು ದಾನ ಮಾಡಲಾಗುವುದು ಎಂದು ಕುಟುಂಬಸ್ಥರು ತಿಳಿಸಿದರು.</p>.<p>ಚಿತ್ರಗಳಲ್ಲಿ: <a href="https://www.prajavani.net/photo/karnataka-news/naveen-ghyanagoudar-dead-body-arrives-his-home-town-chalageri-naveen-died-in-ukraine-last-month-921292.html"><strong>ಉಕ್ರೇನ್ನಲ್ಲಿ ಮೃತಪಟ್ಟ ನವೀನ್ಗೆ ಹುಟ್ಟೂರಲ್ಲಿ ಅಂತಿಮ ನಮನ</strong></a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>