ಸರ್ಕಾರದ ಪ್ರೋತ್ಸಾಹಧನ ಅರ್ಹರಿಗೆ ತಲುಪಬೇಕು. ಇದಕ್ಕಾಗಿ ಪಾರದರ್ಶಕ, ಪ್ರಾಮಾಣಿಕ ಸಮಿತಿ ರಚಿಸಿ ಪರಿಶೀಲಿಸಿ ಅರ್ಹರಿಗೆ ಹೆಚ್ಚಿನ ಪ್ರೋತ್ಸಾಹಧನ ನೀಡುವಂತೆ ಸಾಕಷ್ಟು ಬಾರಿ ಮನವಿ ಸಲ್ಲಿಸಲಾಗಿದೆ. ಪ್ರಾಕೃತಿಕ ವಿಕೋಪ, ಡಿಜಿಟಲ್ ಮಾಧ್ಯಮಗಳ ಹಾವಳಿಯಿಂದ ಈಗಾಗಲೇ ಕಂಪನಿ ನಾಟಕಗಳ ಪ್ರದರ್ಶನಕ್ಕೆ ಜನರು ಕಡಿಮೆಯಾಗಿದ್ದಾರೆ. ಸಾಲ ಮಾಡಿ ಕಂಪನಿಯನ್ನು ನಡೆಸುವ ಪರಿಸ್ಥಿತಿ ಬಂದಿದೆ. ಇದನ್ನೆಲ್ಲಾ ಸರ್ಕಾರವು ಪರಿಗಣಿಸಬೇಕು ಎಂದು ಮನವಿ ಮಾಡಿದರು.