ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆ ಹುಟ್ಟುಹಾಕಿದ ಹಾವೇರಿ ಸಂಸದ 'ನಾಪತ್ತೆ' ಪೋಸ್ಟರ್‌

Last Updated 14 ಆಗಸ್ಟ್ 2020, 15:49 IST
ಅಕ್ಷರ ಗಾತ್ರ

ಹಾವೇರಿ: ಸಂಸದ ಶಿವಕುಮಾರ ಉದಾಸಿ ಕಾಣೆಯಾಗಿದ್ದಾರೆ. ಅವರನ್ನು ಹುಡುಕಿಕೊಟ್ಟವರಿಗೆ ಸಿಂಗಪುರದಲ್ಲಿ ಒಂದು ಗುಂಟೆ ಸೈಟ್‌ ಅನ್ನು ಬಹುಮಾನವಾಗಿ ನೀಡಲಾಗುವುದು ಎಂಬ ಪೋಸ್ಟ್‌‌‌ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಈ ಪೋಸ್ಟ್‌ ಅನ್ನು ಕೆಪಿಸಿಸಿ ಹಾವೇರಿ, ಹಾವೇರಿ ಯೂತ್‌ ಕಾಂಗ್ರೆಸ್‌, ಯೂತ್‌ ಕಾಂಗ್ರೆಸ್‌ ಹಾನಗಲ್‌, ಹಾವೇರಿ ಗದಗ ಲೋಕಸಭೆ ಮತ್ತು ಜಿಲ್ಲೆಯ ಕಾಂಗ್ರೆಸ್‌ ಮುಖಂಡರು ಸೇರಿದಂತೆ ಹಲವರಿಗೆ ಶೇರ್‌ ಮಾಡಲಾಗಿದೆ.

‘ಸಂಸದರ ಲೋಕಸಭಾ ಕ್ಷೇತ್ರದ ಬ್ಯಾಡಗಿ ತಾಲ್ಲೂಕಿನಲ್ಲಿ ಕೇಂದ್ರ ಸರ್ಕಾರದ ವತಿಯಿಂದ ಆಗಬೇಕಾದ ಹಲವಾರು ರಸ್ತೆ ಮತ್ತು ರೈಲ್ವೆ ಸೇತುವೆ ಕಾಮಗಾರಿಗಳು ಕಳಪೆ ಆಗಿವೆ. ಭ್ರಷ್ಟಾಚಾರ ನಡೆದಿದೆ ಹಾಗೂ ಅನೇಕ ಕಾಮಗಾರಿಗಳು ನನೆಗುದಿಗೆ ಬಿದ್ದಿವೆ. ಜನರ ಸಮಸ್ಯೆಗೆ ಸ್ಪಂದಿಸದೆ ಸಂಸದರು ಪಲಾಯನ ಮಾಡಿದ್ದಾರೆ. ಲೋಕಸಭೆ ಚುನಾವಣೆ ಇದ್ದಾಗ ಹಾಗೂ ಇವರ ಪಕ್ಷದ ಕಾರ್ಯಕ್ರಮ ಇದ್ದಾಗ ಬ್ಯಾಡಗಿಗೆ ಬಂದದ್ದು ಬಿಟ್ಟರೆ, ಇದುವರೆಗೂ ಬ್ಯಾಡಗಿ ಜನರ ಸಮಸ್ಯೆಗೆ ಸ್ಪಂದನೆ ನೀಡದೆ ಕಾಣೆಯಾಗಿದ್ದಾರೆ’ ಎಂಬ ವಿವರವನ್ನು ಹಂಚಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT