<p><strong>ಹಾವೇರಿ:</strong> ಶ್ರಾವಣ ಮಾಸದ ಮೊದಲ ಹಬ್ಬ ನಾಗರಪಂಚಮಿ ಮುಗಿದು ಹದಿನೈದು ದಿನಗಳ ನಂತರ ಬರುವ ನೂಲ ಹುಣ್ಣಿಮೆಯನ್ನು ಜಿಲ್ಲೆಯಲ್ಲಿ ಸಂಭ್ರಮದಿಂದ ಆಚರಿಸಲು ಮಹಿಳೆಯರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.</p>.<p>ಅಕ್ಕ–ತಂಗಿಯಂದಿರು, ತಮ್ಮ–ಅಣ್ಣಂದಿರಿಂದ ಶ್ರೀರಕ್ಷೆ ಬಯಸುವ ರಕ್ಷಾ ಬಂಧನವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ. ಭ್ರಾತೃತ್ವದ ಬಂಧ ಬೆಸೆಯುವ ಈ ಆಚರಣೆ ದಿನವಾದ ಶನಿವಾರ, ಜಿಲ್ಲೆಯಾದ್ಯಂತ ಸಂಭ್ರಮ ಇರುತ್ತದೆ.</p>.<p>ಒಡಹುಟ್ಟಿದವರು, ಕುಟುಂಬದ ಪರಿಚಯಸ್ಥರು, ಒಂದೇ ಪ್ರದೇಶದಲ್ಲಿ ವಾಸವಿರುವವರು, ಶಾಲೆ–ಕಾಲೇಜಿನಲ್ಲಿರುವವರು ಹಾಗೂ ಇತರೆಡೆ ಇರುವ ವಿದ್ಯಾರ್ಥಿನಿಯರು ಹಾಗೂ ಮಹಿಳೆಯರು, ತಮ್ಮ ಸಹೋದರರಿಗೆ ರಾಖಿ ಕಟ್ಟುವ ಘಳಿಗೆ ಇದಾಗಿದೆ.</p>.<p>ನೂಲು ಹುಣ್ಣಿಮೆಯಂದು ರಾಖಿಗಳಿಗೆ ಬೇಡಿಕೆ ಹೆಚ್ಚಿರುತ್ತದೆ. ನಾಗರಪಂಚಮಿ ಆರಂಭದ ದಿನದಿಂದಲೇ ಜಿಲ್ಲೆಯಾದ್ಯಂತ ರಾಖಿಗಳ ಮಾರಾಟ ಆರಂಭವಾಗಿದೆ.</p>.<p>ಹಾವೇರಿ, ರಾಣೆಬೆನ್ನೂರು, ಹಾನಗಲ್, ಹಿರೇಕೆರೂರು, ರಟ್ಟೀಹಳ್ಳಿ, ಶಿಗ್ಗಾವಿ, ಸವಣೂರು ಹಾಗೂ ಬ್ಯಾಡಗಿ ತಾಲ್ಲೂಕಿನಲ್ಲಿ ರಾಖಿಗಳ ಮಾರಾಟ ಜೋರಾಗಿದೆ. ಬಾಲಕಿಯರು, ವಿದ್ಯಾರ್ಥಿನಿಯರು ಹಾಗೂ ಮಹಿಳೆಯರು ಅಂಗಡಿಗಳಿಗೆ ಹೋಗಿ ರಾಖಿ ಖರೀದಿಸುತ್ತಿದ್ದಾರೆ.</p>.<p>ಹಾವೇರಿಯ ಎಂ.ಜಿ.ರಸ್ತೆಯ ಅಕ್ಕ–ಪಕ್ಕದಲ್ಲಿರುವ ತಳ್ಳುಗಾಡಿಯಲ್ಲಿಯೂ ರಾಖಿಗಳ ಮಾರಾಟ ನಡೆಯುತ್ತಿದೆ. ಗುರುವಾರ ಮಾರುಕಟ್ಟೆಗೆ ಬಂದಿದ್ದ ಬಾಲಕಿಯರು ಹಾಗೂ ಮಹಿಳೆಯರು, ತಮ್ಮಿಷ್ಟದ ರಾಖಿಗಳನ್ನು ಖರೀದಿಸಿದರು.</p>.<p>₹ 10 ಬೆಲೆಯಿಂದ ₹ 500 ಬೆಲೆಯವರೆಗೂ ರಾಖಿಗಳು ಮಾರಾಟವಾಗುತ್ತಿವೆ. ಕೆಲವರು ಬೆಳ್ಳಿ ರಾಖಿಗಳನ್ನು ಖರೀದಿಸಿ ಕೊಂಡೊಯ್ದರು.</p>.<p>‘ಪ್ರತಿಯೊಬ್ಬ ಮಹಿಳೆಗೂ ಸಹೋದರನ ಆಸರೆ ಬೇಕಾಗುತ್ತದೆ. ಜೊತೆಗೆ, ಯಾವುದೇ ಸಂದರ್ಭದಲ್ಲೂ ಸಹೋದರರ ಸಹಕಾರ ಅಗತ್ಯವಿರುತ್ತದೆ. ಸಹೋದರತ್ವವನ್ನು ಮತ್ತಷ್ಟು ಗಟ್ಟಿಗೊಳಿಸಲು ಹಾಗೂ ಜೀವನಪೂರ್ತಿ ಶ್ರೀರಕ್ಷೆ ನೀಡುವ ಉದ್ದೇಶದಿಂದ ಈ ರಾಖಿ ಹಬ್ಬವನ್ನು ಆಚರಿಸಲಾಗುತ್ತದೆ’ ಎಂದು ಹಾವೇರಿಯ ನಿವಾಸಿ ಸುಷ್ಮಾ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾವೇರಿ:</strong> ಶ್ರಾವಣ ಮಾಸದ ಮೊದಲ ಹಬ್ಬ ನಾಗರಪಂಚಮಿ ಮುಗಿದು ಹದಿನೈದು ದಿನಗಳ ನಂತರ ಬರುವ ನೂಲ ಹುಣ್ಣಿಮೆಯನ್ನು ಜಿಲ್ಲೆಯಲ್ಲಿ ಸಂಭ್ರಮದಿಂದ ಆಚರಿಸಲು ಮಹಿಳೆಯರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.</p>.<p>ಅಕ್ಕ–ತಂಗಿಯಂದಿರು, ತಮ್ಮ–ಅಣ್ಣಂದಿರಿಂದ ಶ್ರೀರಕ್ಷೆ ಬಯಸುವ ರಕ್ಷಾ ಬಂಧನವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ. ಭ್ರಾತೃತ್ವದ ಬಂಧ ಬೆಸೆಯುವ ಈ ಆಚರಣೆ ದಿನವಾದ ಶನಿವಾರ, ಜಿಲ್ಲೆಯಾದ್ಯಂತ ಸಂಭ್ರಮ ಇರುತ್ತದೆ.</p>.<p>ಒಡಹುಟ್ಟಿದವರು, ಕುಟುಂಬದ ಪರಿಚಯಸ್ಥರು, ಒಂದೇ ಪ್ರದೇಶದಲ್ಲಿ ವಾಸವಿರುವವರು, ಶಾಲೆ–ಕಾಲೇಜಿನಲ್ಲಿರುವವರು ಹಾಗೂ ಇತರೆಡೆ ಇರುವ ವಿದ್ಯಾರ್ಥಿನಿಯರು ಹಾಗೂ ಮಹಿಳೆಯರು, ತಮ್ಮ ಸಹೋದರರಿಗೆ ರಾಖಿ ಕಟ್ಟುವ ಘಳಿಗೆ ಇದಾಗಿದೆ.</p>.<p>ನೂಲು ಹುಣ್ಣಿಮೆಯಂದು ರಾಖಿಗಳಿಗೆ ಬೇಡಿಕೆ ಹೆಚ್ಚಿರುತ್ತದೆ. ನಾಗರಪಂಚಮಿ ಆರಂಭದ ದಿನದಿಂದಲೇ ಜಿಲ್ಲೆಯಾದ್ಯಂತ ರಾಖಿಗಳ ಮಾರಾಟ ಆರಂಭವಾಗಿದೆ.</p>.<p>ಹಾವೇರಿ, ರಾಣೆಬೆನ್ನೂರು, ಹಾನಗಲ್, ಹಿರೇಕೆರೂರು, ರಟ್ಟೀಹಳ್ಳಿ, ಶಿಗ್ಗಾವಿ, ಸವಣೂರು ಹಾಗೂ ಬ್ಯಾಡಗಿ ತಾಲ್ಲೂಕಿನಲ್ಲಿ ರಾಖಿಗಳ ಮಾರಾಟ ಜೋರಾಗಿದೆ. ಬಾಲಕಿಯರು, ವಿದ್ಯಾರ್ಥಿನಿಯರು ಹಾಗೂ ಮಹಿಳೆಯರು ಅಂಗಡಿಗಳಿಗೆ ಹೋಗಿ ರಾಖಿ ಖರೀದಿಸುತ್ತಿದ್ದಾರೆ.</p>.<p>ಹಾವೇರಿಯ ಎಂ.ಜಿ.ರಸ್ತೆಯ ಅಕ್ಕ–ಪಕ್ಕದಲ್ಲಿರುವ ತಳ್ಳುಗಾಡಿಯಲ್ಲಿಯೂ ರಾಖಿಗಳ ಮಾರಾಟ ನಡೆಯುತ್ತಿದೆ. ಗುರುವಾರ ಮಾರುಕಟ್ಟೆಗೆ ಬಂದಿದ್ದ ಬಾಲಕಿಯರು ಹಾಗೂ ಮಹಿಳೆಯರು, ತಮ್ಮಿಷ್ಟದ ರಾಖಿಗಳನ್ನು ಖರೀದಿಸಿದರು.</p>.<p>₹ 10 ಬೆಲೆಯಿಂದ ₹ 500 ಬೆಲೆಯವರೆಗೂ ರಾಖಿಗಳು ಮಾರಾಟವಾಗುತ್ತಿವೆ. ಕೆಲವರು ಬೆಳ್ಳಿ ರಾಖಿಗಳನ್ನು ಖರೀದಿಸಿ ಕೊಂಡೊಯ್ದರು.</p>.<p>‘ಪ್ರತಿಯೊಬ್ಬ ಮಹಿಳೆಗೂ ಸಹೋದರನ ಆಸರೆ ಬೇಕಾಗುತ್ತದೆ. ಜೊತೆಗೆ, ಯಾವುದೇ ಸಂದರ್ಭದಲ್ಲೂ ಸಹೋದರರ ಸಹಕಾರ ಅಗತ್ಯವಿರುತ್ತದೆ. ಸಹೋದರತ್ವವನ್ನು ಮತ್ತಷ್ಟು ಗಟ್ಟಿಗೊಳಿಸಲು ಹಾಗೂ ಜೀವನಪೂರ್ತಿ ಶ್ರೀರಕ್ಷೆ ನೀಡುವ ಉದ್ದೇಶದಿಂದ ಈ ರಾಖಿ ಹಬ್ಬವನ್ನು ಆಚರಿಸಲಾಗುತ್ತದೆ’ ಎಂದು ಹಾವೇರಿಯ ನಿವಾಸಿ ಸುಷ್ಮಾ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>