<p><strong>ರಾಣೆಬೆನ್ನೂರು</strong>: ಹೋಳಿ ಹಬ್ಬದ ಆಕರ್ಷಣೆ ಆಗಿರುವ ಇಲ್ಲಿಯ ಜೀವಂತ ರತಿ–ಮನ್ಮಥರ ಆಚರಣೆಯು 66ನೇ ವರ್ಷ ಪೂರ್ಣಗೊಳಿಸಿದ್ದು, ಈ ಬಾರಿ 67ನೇ ವರ್ಷದ ಆಚರಣೆಗೆ ಸಿದ್ಧತೆ ನಡೆದಿದೆ.</p>.<p>ನಗರದ ದೊಡ್ಡಪೇಟೆಯ ರಾಮಲಿಂಗೇಶ್ವರ ದೇವಸ್ಥಾನದ ಎದುರು ರಾಮಲಿಂಗೇಶ್ವರ ಸೇವಾ ಸಮಿತಿ ಮತ್ತು ಶಕ್ತಿ ಯುವಕ ಸಂಘದ (ಜೆ.ಬಿ.ಸಿ.ಸಿ ಜೆಡ್) ಆಶ್ರಯದಲ್ಲಿ ಪ್ರತಿ ವರ್ಷ ಈ ಆಚರಣೆ ಹಮ್ಮಿಕೊಳ್ಳಲಾಗುತ್ತಿದೆ.</p>.<p>ಮಾರ್ಚ್ 3ರಂದು ಸಂಜೆ 7 ಗಂಟೆಗೆ ಜೀವಂತ ರತಿ–ಮನ್ಮಥರು ವೇದಿಕೆಯಲ್ಲಿ ಕೂರುವರು. ಇವರಿಬ್ಬರನ್ನು ನಗಿಸಿದವರಿಗೆ ಈ ಬಾರಿ ₹ 13 ಲಕ್ಷ ಮೊತ್ತದ ನಗದು ಬಹುಮಾನವಿದೆ.</p>.<p>ಕಾಮಣ್ಣನ ವೇಷದಲ್ಲಿ 47 ವರ್ಷದ, ಆಟೊ ಚಾಲಕ ಗದಿಗೆಪ್ಪ ರೊಡ್ಡನವರ (47), ರತಿ ವೇಷದಲ್ಲಿ 38 ವರ್ಷದ, ಕುಮಾರ ಹಡಪದ (38) ಇರುತ್ತಾರೆ. ಇವರನ್ನು ನಗಿಸಲು ವರ್ಷಗಳಿಂದ ಪ್ರಯತ್ನ ನಡೆದಿವೆ. ಆದರೆ, ಇವರಿಬ್ಬರೂ ನಕ್ಕಿಲ್ಲ.</p>.<p>‘ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ವೇಳೆ ವಿಧಾನಸೌಧದಲ್ಲಿ ಪ್ರದರ್ಶನ ನೀಡಿದ್ದೆವು. ನಗಿಸಲು ಯತ್ನಿಸಿ ಹಲವರು ವಿಫಲರಾದರು. ಈ ಬಾರಿ ನಗಿಸಿದವರಿಗೆ ಸಮಿತಿಯಿಂದ ₹ 13 ಲಕ್ಷ ಬಹುಮಾನವಿದೆ. ಸಂಜೆ 7 ರಿಂದ ರಾತ್ರಿ 12 ಗಂಟೆಯವರೆಗೆ ಪ್ರದರ್ಶನ ಇರಲಿದೆ’ ಎಂದು ಗದಿಗೆಪ್ಪ ಮತ್ತು ಕುಮಾರ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಣೆಬೆನ್ನೂರು</strong>: ಹೋಳಿ ಹಬ್ಬದ ಆಕರ್ಷಣೆ ಆಗಿರುವ ಇಲ್ಲಿಯ ಜೀವಂತ ರತಿ–ಮನ್ಮಥರ ಆಚರಣೆಯು 66ನೇ ವರ್ಷ ಪೂರ್ಣಗೊಳಿಸಿದ್ದು, ಈ ಬಾರಿ 67ನೇ ವರ್ಷದ ಆಚರಣೆಗೆ ಸಿದ್ಧತೆ ನಡೆದಿದೆ.</p>.<p>ನಗರದ ದೊಡ್ಡಪೇಟೆಯ ರಾಮಲಿಂಗೇಶ್ವರ ದೇವಸ್ಥಾನದ ಎದುರು ರಾಮಲಿಂಗೇಶ್ವರ ಸೇವಾ ಸಮಿತಿ ಮತ್ತು ಶಕ್ತಿ ಯುವಕ ಸಂಘದ (ಜೆ.ಬಿ.ಸಿ.ಸಿ ಜೆಡ್) ಆಶ್ರಯದಲ್ಲಿ ಪ್ರತಿ ವರ್ಷ ಈ ಆಚರಣೆ ಹಮ್ಮಿಕೊಳ್ಳಲಾಗುತ್ತಿದೆ.</p>.<p>ಮಾರ್ಚ್ 3ರಂದು ಸಂಜೆ 7 ಗಂಟೆಗೆ ಜೀವಂತ ರತಿ–ಮನ್ಮಥರು ವೇದಿಕೆಯಲ್ಲಿ ಕೂರುವರು. ಇವರಿಬ್ಬರನ್ನು ನಗಿಸಿದವರಿಗೆ ಈ ಬಾರಿ ₹ 13 ಲಕ್ಷ ಮೊತ್ತದ ನಗದು ಬಹುಮಾನವಿದೆ.</p>.<p>ಕಾಮಣ್ಣನ ವೇಷದಲ್ಲಿ 47 ವರ್ಷದ, ಆಟೊ ಚಾಲಕ ಗದಿಗೆಪ್ಪ ರೊಡ್ಡನವರ (47), ರತಿ ವೇಷದಲ್ಲಿ 38 ವರ್ಷದ, ಕುಮಾರ ಹಡಪದ (38) ಇರುತ್ತಾರೆ. ಇವರನ್ನು ನಗಿಸಲು ವರ್ಷಗಳಿಂದ ಪ್ರಯತ್ನ ನಡೆದಿವೆ. ಆದರೆ, ಇವರಿಬ್ಬರೂ ನಕ್ಕಿಲ್ಲ.</p>.<p>‘ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ವೇಳೆ ವಿಧಾನಸೌಧದಲ್ಲಿ ಪ್ರದರ್ಶನ ನೀಡಿದ್ದೆವು. ನಗಿಸಲು ಯತ್ನಿಸಿ ಹಲವರು ವಿಫಲರಾದರು. ಈ ಬಾರಿ ನಗಿಸಿದವರಿಗೆ ಸಮಿತಿಯಿಂದ ₹ 13 ಲಕ್ಷ ಬಹುಮಾನವಿದೆ. ಸಂಜೆ 7 ರಿಂದ ರಾತ್ರಿ 12 ಗಂಟೆಯವರೆಗೆ ಪ್ರದರ್ಶನ ಇರಲಿದೆ’ ಎಂದು ಗದಿಗೆಪ್ಪ ಮತ್ತು ಕುಮಾರ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>