<p><strong>ರಾಣೆಬೆನ್ನೂರು</strong>: ತುಂಗಭದ್ರಾ ನದಿ ತೀರದ ಗ್ರಾಮಗಳಲ್ಲಿ ಬೇಸಿಗೆ ಹಂಗಾಮಿನಲ್ಲಿ ಹಲವು ರೈತರು ಭತ್ತ ಬೆಳೆದಿದ್ದು, ಕಟಾವು ಶುರುವಾಗಿದೆ. ಆದರೆ, ಭತ್ತಕ್ಕೆ ಸೂಕ್ತ ಬೆಲೆ ಸಿಗದಿದ್ದರಿಂದ ರೈತರು ಕಂಗಾಲಾಗಿದ್ದಾರೆ. </p>.<p>ಉತ್ತಮ ಇಳುವರಿ ಪಡೆದಿರುವ ರೈತರು, ಭತ್ತವನ್ನು ಕಟಾವು ಮಾಡಿ ರಾಶಿ ಹಾಕಿದ್ದಾರೆ. ಆದರೆ, ನಿರೀಕ್ಷೆಗೆ ತಕಷ್ಟು ಬೆಲೆ ಸಿಕ್ಕಿಲ್ಲ. </p>.<p>ತಾಲ್ಲೂಕಿನ ಚೌಡಯ್ಯದಾನಪುರ, ಚಂದಾಪುರ, ಚಿಕ್ಕಕುರುವತ್ತಿ, ಕುದರಿಹಾಳ, ಹರನಗಿರಿ, ಉದಗಟ್ಟಿ, ಬೇಲೂರ, ಹೀಲದಹಳ್ಳಿ, ಮೇಡ್ಲೇರಿ, ಹಿರೇಬಿದರಿ, ಐರಣಿ, ನದೀಹರಳಹಳ್ಳಿ, ಮಾಕನೂರ, ಮುದೇನೂರ, ಕೋಟಿಹಾಳ, ಹೊಳೆ ಆನ್ವೇರಿ, ತುಮ್ಮಿನಕಟ್ಟಿ ಭಾಗದ ನದಿತೀರದ ಪ್ರದೇಶಗಳಲ್ಲಿ 5,500 ಹೆಕ್ಟೇರ್ನಲ್ಲಿ ಭತ್ತ ಬೆಳೆಯಲಾಗಿದೆ. </p>.<p>ಮುಂಗಾರು ಹಂಗಾಮಿನಲ್ಲಿ ಕ್ವಿಂಟಲ್ಗೆ ₹ 2,600ರಿಂದ ₹3,300ವರೆಗೆ ದರವಿತ್ತು. ಕಳೆದ ಕೆಲ ದಿನಗಳಿಂದ ಭತ್ತದ ಬೆಲೆ ₹ 800ರಿಂದ ₹1,200ಕ್ಕೆ ಕುಸಿದಿದೆ. ಮಾರುಕಟ್ಟೆಯಲ್ಲಿ ಭತ್ತದ ಬೆಲೆ ಇಳಿಕೆಯಾಗಿರುವುದರಿಂದ ರೈತರಿಗೆ ನಿರಾಸೆ ಮೂಡಿಸಿದೆ.</p>.<p>ಸದ್ಯಕ್ಕೆ ದರಕ್ಕೆ ಭತ್ತವನ್ನು ಮಾರಿದರೆ, ಬಿತ್ತನೆ ಮಾಡಿದ ಖರ್ಚು ಕೂಡ ಬರುವುದಿಲ್ಲವೆಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.</p>.<p>‘ಬೇಸಿಗೆ ಭತ್ತ ಎಕರೆಗೆ 35ರಿಂದ 40 ಚೀಲ ಇಳುವರಿ ಬಂದಿದೆ. ಕನಿಷ್ಠ ₹ 2,500 ದರ ಸಿಕ್ಕರೆ ಖರ್ಚು ವೆಚ್ಚ ಸಮ ಆಗುತ್ತದೆ’ ಎಂದು ಮೇಡ್ಲೇರಿಯ ರೈತ ಗಣೇಶ ಬಿಲ್ಲಾಳ ಹೇಳಿದರು.</p>.<p>‘ತುಂಗಭದ್ರಾನದಿ ನೀರನ್ನು ಬಳಸಿ ಬೆಳೆಯುವ ಈ ಭಾಗದ ಭತ್ತಕ್ಕೆ ಬಹಳ ಬೇಡಿಕೆ ಇತ್ತು. ಆದರೆ, ಈ ಬಾರಿ ಭತ್ತದ ಬೆಲೆ ಗಣನೀಯವಾಗಿ ಕಡಿಮೆಯಾಗಿದೆ. ಭತ್ತದ ಬೆಳೆಗಾರರು ಕಂಗಾಲಾಗಿದ್ದಾರೆ. ಸ್ಥಳೀಯವಾಗಿ ಭತ್ತ ಖರೀದಿಗೆ ಕೇಂದ್ರವೂ ಇಲ್ಲ’ ಎಂದು ದೂರಿದರು.</p>.<p>‘ಪ್ರತಿ ಎಕರೆಗೆ ಭತ್ತ ಬೆಳೆಯಲು ಸುಮಾರು ₹ 30 ಸಾವಿರದಿಂದ ₹ 40 ಸಾವಿರ ಖರ್ಚಾಗುತ್ತದೆ. ರೈತರು ಭತ್ತ ಬೆಳೆಯಲು ಮಾಡಿದ ಸಾಲ ಕೂಡ ತೀರಿಸಲಾಗದಂಥ ಸ್ಥಿತಿ ಉಂಟಾಗಿದೆ. ಬೆಲೆ ಕಡಿಮೆಯಾಗಿದ್ದು ಒಂದಡೆಯಾದರೆ, ಭತ್ತ ಖರೀದಿಸಲು ವ್ಯಾಪಾರಸ್ಥರು ಮುಂದಾಗುತ್ತಿಲ್ಲ. ಎರಡು–ಮೂರು ದಿನಗಳಿಂದ ರಾಶಿ ಕಾಪಾಡುವುದೇ ಕೆಲಸವಾಗಿದೆ’ ಎಂದು ನಲವಾಗಿಲ ರೈತ ಪರಮೇಶಪ್ಪ ಚಿಣ್ಣನವರ ಹೇಳಿದರು.</p>.<p>ಬೆಂಬಲ ಬೆಲೆ ಯೋಜನೆಯಿಲ್ಲ: ಮುಂಗಾರು ಹಂಗಾಮಿನಲ್ಲಿ ರಾಣೆಬೆನ್ನೂರು, ಬ್ಯಾಡಗಿ, ರಟ್ಟೀಹಳ್ಳಿ, ಹಿರೇಕೆರೂರು ತಾಲ್ಲೂಕಿನಲ್ಲಿ ಭತ್ತದ ಖರೀದಿ ಕೇಂದ್ರ ತೆರೆಯಲಾಗಿತ್ತು. ಮುಂಗಾರಿಗೆ ಖರೀದಿ ಕೇಂದ್ರದಲ್ಲಿ 282 ರೈತರು ನೋಂದಣಿ ಮಾಡಿಸಿದ್ದರು. ಆದರೆ, 32 ರೈತರು ಮಾತ್ರ ಭತ್ತ ಮಾರಿದ್ದಾರೆ.</p>.<p>ಈಗ, ಹಿಂಗಾರು ಹಂಗಾಮಿನಲ್ಲಿ ರಾಣೆಬೆನ್ನೂರಿನಲ್ಲಿ ಭತ್ತ ಬೆಳೆದ ಬಗ್ಗೆ ಜಿಪಿಎಸ್ ಮಾಡಿಸಿಲ್ಲ. ಹೀಗಾಗಿ, ಬೆಂಬಲ ಬೆಲೆ ಯೋಜನೆ ಜಾರಿಯಾಗಿಲ್ಲ. ದರ ಕುಸಿತವಾಗಿರುವುದರಿಂದ ಬೆಂಬಲ ಬೆಲೆಯೂ ಸಿಗದೇ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.</p>.<p>ಪೂರೈಕೆ ಹೆಚ್ಚಳದಿಂದ ಬೆಲೆ ಇಳಿಕೆ: ರಾಯಚೂರು, ಗಂಗಾವತಿ, ದಾವಣಗೆರೆ, ಶಿವಮೊಗ್ಗ ಜಿಲ್ಲೆಗಳಲ್ಲಿ ಸದ್ಯ ಹೆಚ್ಚಿನ ಪ್ರಮಾಣದ ಭತ್ತ ಬೆಳೆಯಲಾಗಿದೆ. ಭತ್ತದ ಪೂರೈಕೆ ಹೆಚ್ಚಿರುವುದರಿಂದ ಬೆಲೆಯೂ ಇಳಿಕೆಯಾಗಿದೆ.</p>.<p>‘ಹಿಂಗಾರು ಹಂಗಾಮಿನಲ್ಲಿ ಬೆಳೆದ ಭತ್ತವನ್ನು ಖರೀದಿಸಲು ಕೇಂದ್ರ ತೆರೆಯಬೇಕು. ರೈತರಿಗೆ ಸೂಕ್ತ ಬೆಲೆ ನೀಡಬೇಕು’ ಎಂದು ರೈತರು ಆಗ್ರಹಿಸಿದ್ದಾರೆ.</p>.<div><blockquote>ಕೇರಳ ಮಾದರಿಯಲ್ಲಿ ಪ್ರತಿ ಕ್ವಿಂಟಲ್ ಭತ್ತಕ್ಕೆ ಕನಿಷ್ಠ ₹ 3500 ನೀಡಬೇಕು. ಬೆಂಬಲ ಬೆಲೆಗಿಂತ ಕಡಿಮೆ ದರ ನೀಡುವ ವ್ಯಾಪಾರಸ್ಥರ ಪರವಾನಗಿ ರದ್ದುಪಡಿಸಬೇಕು</blockquote><span class="attribution">ಪರಮೇಶಪ್ಪ ಚಿನ್ನಣ್ಣನವರ ನಲವಾಗಲ ರೈತ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಣೆಬೆನ್ನೂರು</strong>: ತುಂಗಭದ್ರಾ ನದಿ ತೀರದ ಗ್ರಾಮಗಳಲ್ಲಿ ಬೇಸಿಗೆ ಹಂಗಾಮಿನಲ್ಲಿ ಹಲವು ರೈತರು ಭತ್ತ ಬೆಳೆದಿದ್ದು, ಕಟಾವು ಶುರುವಾಗಿದೆ. ಆದರೆ, ಭತ್ತಕ್ಕೆ ಸೂಕ್ತ ಬೆಲೆ ಸಿಗದಿದ್ದರಿಂದ ರೈತರು ಕಂಗಾಲಾಗಿದ್ದಾರೆ. </p>.<p>ಉತ್ತಮ ಇಳುವರಿ ಪಡೆದಿರುವ ರೈತರು, ಭತ್ತವನ್ನು ಕಟಾವು ಮಾಡಿ ರಾಶಿ ಹಾಕಿದ್ದಾರೆ. ಆದರೆ, ನಿರೀಕ್ಷೆಗೆ ತಕಷ್ಟು ಬೆಲೆ ಸಿಕ್ಕಿಲ್ಲ. </p>.<p>ತಾಲ್ಲೂಕಿನ ಚೌಡಯ್ಯದಾನಪುರ, ಚಂದಾಪುರ, ಚಿಕ್ಕಕುರುವತ್ತಿ, ಕುದರಿಹಾಳ, ಹರನಗಿರಿ, ಉದಗಟ್ಟಿ, ಬೇಲೂರ, ಹೀಲದಹಳ್ಳಿ, ಮೇಡ್ಲೇರಿ, ಹಿರೇಬಿದರಿ, ಐರಣಿ, ನದೀಹರಳಹಳ್ಳಿ, ಮಾಕನೂರ, ಮುದೇನೂರ, ಕೋಟಿಹಾಳ, ಹೊಳೆ ಆನ್ವೇರಿ, ತುಮ್ಮಿನಕಟ್ಟಿ ಭಾಗದ ನದಿತೀರದ ಪ್ರದೇಶಗಳಲ್ಲಿ 5,500 ಹೆಕ್ಟೇರ್ನಲ್ಲಿ ಭತ್ತ ಬೆಳೆಯಲಾಗಿದೆ. </p>.<p>ಮುಂಗಾರು ಹಂಗಾಮಿನಲ್ಲಿ ಕ್ವಿಂಟಲ್ಗೆ ₹ 2,600ರಿಂದ ₹3,300ವರೆಗೆ ದರವಿತ್ತು. ಕಳೆದ ಕೆಲ ದಿನಗಳಿಂದ ಭತ್ತದ ಬೆಲೆ ₹ 800ರಿಂದ ₹1,200ಕ್ಕೆ ಕುಸಿದಿದೆ. ಮಾರುಕಟ್ಟೆಯಲ್ಲಿ ಭತ್ತದ ಬೆಲೆ ಇಳಿಕೆಯಾಗಿರುವುದರಿಂದ ರೈತರಿಗೆ ನಿರಾಸೆ ಮೂಡಿಸಿದೆ.</p>.<p>ಸದ್ಯಕ್ಕೆ ದರಕ್ಕೆ ಭತ್ತವನ್ನು ಮಾರಿದರೆ, ಬಿತ್ತನೆ ಮಾಡಿದ ಖರ್ಚು ಕೂಡ ಬರುವುದಿಲ್ಲವೆಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.</p>.<p>‘ಬೇಸಿಗೆ ಭತ್ತ ಎಕರೆಗೆ 35ರಿಂದ 40 ಚೀಲ ಇಳುವರಿ ಬಂದಿದೆ. ಕನಿಷ್ಠ ₹ 2,500 ದರ ಸಿಕ್ಕರೆ ಖರ್ಚು ವೆಚ್ಚ ಸಮ ಆಗುತ್ತದೆ’ ಎಂದು ಮೇಡ್ಲೇರಿಯ ರೈತ ಗಣೇಶ ಬಿಲ್ಲಾಳ ಹೇಳಿದರು.</p>.<p>‘ತುಂಗಭದ್ರಾನದಿ ನೀರನ್ನು ಬಳಸಿ ಬೆಳೆಯುವ ಈ ಭಾಗದ ಭತ್ತಕ್ಕೆ ಬಹಳ ಬೇಡಿಕೆ ಇತ್ತು. ಆದರೆ, ಈ ಬಾರಿ ಭತ್ತದ ಬೆಲೆ ಗಣನೀಯವಾಗಿ ಕಡಿಮೆಯಾಗಿದೆ. ಭತ್ತದ ಬೆಳೆಗಾರರು ಕಂಗಾಲಾಗಿದ್ದಾರೆ. ಸ್ಥಳೀಯವಾಗಿ ಭತ್ತ ಖರೀದಿಗೆ ಕೇಂದ್ರವೂ ಇಲ್ಲ’ ಎಂದು ದೂರಿದರು.</p>.<p>‘ಪ್ರತಿ ಎಕರೆಗೆ ಭತ್ತ ಬೆಳೆಯಲು ಸುಮಾರು ₹ 30 ಸಾವಿರದಿಂದ ₹ 40 ಸಾವಿರ ಖರ್ಚಾಗುತ್ತದೆ. ರೈತರು ಭತ್ತ ಬೆಳೆಯಲು ಮಾಡಿದ ಸಾಲ ಕೂಡ ತೀರಿಸಲಾಗದಂಥ ಸ್ಥಿತಿ ಉಂಟಾಗಿದೆ. ಬೆಲೆ ಕಡಿಮೆಯಾಗಿದ್ದು ಒಂದಡೆಯಾದರೆ, ಭತ್ತ ಖರೀದಿಸಲು ವ್ಯಾಪಾರಸ್ಥರು ಮುಂದಾಗುತ್ತಿಲ್ಲ. ಎರಡು–ಮೂರು ದಿನಗಳಿಂದ ರಾಶಿ ಕಾಪಾಡುವುದೇ ಕೆಲಸವಾಗಿದೆ’ ಎಂದು ನಲವಾಗಿಲ ರೈತ ಪರಮೇಶಪ್ಪ ಚಿಣ್ಣನವರ ಹೇಳಿದರು.</p>.<p>ಬೆಂಬಲ ಬೆಲೆ ಯೋಜನೆಯಿಲ್ಲ: ಮುಂಗಾರು ಹಂಗಾಮಿನಲ್ಲಿ ರಾಣೆಬೆನ್ನೂರು, ಬ್ಯಾಡಗಿ, ರಟ್ಟೀಹಳ್ಳಿ, ಹಿರೇಕೆರೂರು ತಾಲ್ಲೂಕಿನಲ್ಲಿ ಭತ್ತದ ಖರೀದಿ ಕೇಂದ್ರ ತೆರೆಯಲಾಗಿತ್ತು. ಮುಂಗಾರಿಗೆ ಖರೀದಿ ಕೇಂದ್ರದಲ್ಲಿ 282 ರೈತರು ನೋಂದಣಿ ಮಾಡಿಸಿದ್ದರು. ಆದರೆ, 32 ರೈತರು ಮಾತ್ರ ಭತ್ತ ಮಾರಿದ್ದಾರೆ.</p>.<p>ಈಗ, ಹಿಂಗಾರು ಹಂಗಾಮಿನಲ್ಲಿ ರಾಣೆಬೆನ್ನೂರಿನಲ್ಲಿ ಭತ್ತ ಬೆಳೆದ ಬಗ್ಗೆ ಜಿಪಿಎಸ್ ಮಾಡಿಸಿಲ್ಲ. ಹೀಗಾಗಿ, ಬೆಂಬಲ ಬೆಲೆ ಯೋಜನೆ ಜಾರಿಯಾಗಿಲ್ಲ. ದರ ಕುಸಿತವಾಗಿರುವುದರಿಂದ ಬೆಂಬಲ ಬೆಲೆಯೂ ಸಿಗದೇ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.</p>.<p>ಪೂರೈಕೆ ಹೆಚ್ಚಳದಿಂದ ಬೆಲೆ ಇಳಿಕೆ: ರಾಯಚೂರು, ಗಂಗಾವತಿ, ದಾವಣಗೆರೆ, ಶಿವಮೊಗ್ಗ ಜಿಲ್ಲೆಗಳಲ್ಲಿ ಸದ್ಯ ಹೆಚ್ಚಿನ ಪ್ರಮಾಣದ ಭತ್ತ ಬೆಳೆಯಲಾಗಿದೆ. ಭತ್ತದ ಪೂರೈಕೆ ಹೆಚ್ಚಿರುವುದರಿಂದ ಬೆಲೆಯೂ ಇಳಿಕೆಯಾಗಿದೆ.</p>.<p>‘ಹಿಂಗಾರು ಹಂಗಾಮಿನಲ್ಲಿ ಬೆಳೆದ ಭತ್ತವನ್ನು ಖರೀದಿಸಲು ಕೇಂದ್ರ ತೆರೆಯಬೇಕು. ರೈತರಿಗೆ ಸೂಕ್ತ ಬೆಲೆ ನೀಡಬೇಕು’ ಎಂದು ರೈತರು ಆಗ್ರಹಿಸಿದ್ದಾರೆ.</p>.<div><blockquote>ಕೇರಳ ಮಾದರಿಯಲ್ಲಿ ಪ್ರತಿ ಕ್ವಿಂಟಲ್ ಭತ್ತಕ್ಕೆ ಕನಿಷ್ಠ ₹ 3500 ನೀಡಬೇಕು. ಬೆಂಬಲ ಬೆಲೆಗಿಂತ ಕಡಿಮೆ ದರ ನೀಡುವ ವ್ಯಾಪಾರಸ್ಥರ ಪರವಾನಗಿ ರದ್ದುಪಡಿಸಬೇಕು</blockquote><span class="attribution">ಪರಮೇಶಪ್ಪ ಚಿನ್ನಣ್ಣನವರ ನಲವಾಗಲ ರೈತ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>